ಚಳ್ಳಕೆರೆ ಜನಧ್ವನಿ ವಾರ್ತೆ ಡಿ.29 ಬರಗಾಲ ಎಂಬ ಹಣೆ ಪಟ್ಟಿಕೊಂಡಿರುವ ಬಯಲು ಸೀಮೆಯ ಗ್ರಾಮಗಳ ಅಭಿವೃದ್ಧಿ ಗೆ ಹಣ ಬಂದು ಖಾತೆ ಬಿದ್ದರೂ ಅನುಷ್ಠಾನ ಮಾಡಲು ಜನಪ್ರತಿನಿಧಿಗಳ ಇಚ್ಚಾ ಶಕ್ತಿಕೊರತೆಯಿಂದ ಅಭಿವೃದ್ಧಿಗೆ ಹಿನ್ನೆಡೆಯಾಗಿದೆ. ಹೌದು ಇದು ಚಳ್ಳಕೆರೆ ತಾಲೂಕಿನ 40 ಗ್ರಾಮಪಂಚಾಯಿತಿ ಗಳ ಅಭಿವೃದ್ಧಿಗೆಂದು 15 ನೇ ಹಣಕಾಸು ಯೋಜನೆಯಡಿ ಲಕ್ಷ ಲಕ್ಷ ರೂ ಹಣ ಬಂದು ಸುಮಾರು ವರ್ಷವೇ ಕಳೆಯಲು ಬಂದರೂ ಇನ್ನು 4 ಗ್ರಾಮಪಂಚಾಯಿತಿ ವ್ರಾಪ್ತಿಯಲ್ಲಿ ಕ್ರಿಯಾಯೋಜನೆ ರೂಪಿಸಲು ಇಚ್ಚಾಶಕ್ತಿ ತೋರುತ್ತಿಲ್ಲ ದೇವರು ವರ ಕೊಟ್ಟರೂ ಪೂಜಾರಿ ವರಕೊಡಲಿಲ್ಲ . ಅಪ್ಪ ಅಮ್ಮನ ಕಿತ್ತಾಟದಲ್ಲಿ ಕೂಸು ಬಡವಾಯ್ತು ಎಂಬ ಹಿರಿಯರ ಅನುಭವದ ಮಾತಿನಂತೆ ಸದಸ್ಯರ ಅಧಿಕಾರಿಗಳ ತಿಕ್ಕಾಟದಲ್ಲಿ ಗ್ರಾಮಗಳ ಅಭಿವೃದ್ಧಿ ಕುಂಠಿತಕ್ಕೆ ಮಾರಕ ಎಂಬಂತಾಗಿದೆ.
ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆಂದು ಸುಮಾರು ಎಂಟು ತಿಂಗಳ ಹಿಂದೆಯೇ 15 ನೇ ಹಣಕಾಸು ಯೋಜನೆಯಡಿ 40 ಗ್ರಾಮಪಂಚಾಯಿಗಳ ಜನಗಳ ಆದಾರದ ಮೇಲೆ ಅನುದಾನ ಹಂಚಿಕೆ ಮಾಡಿ 40 ಗ್ರಾಮಪಂಚಾಯಿಗಳಿಗೆ ಸುಮಾರು17.5 ಕೋಟಿ ರೂ ಅನುದಾನ ಬಿಡುಗಡೆ ಮಾಡಿದೆ. ಗ್ರಾಮೀಣ ಜನರಿಗೆ ಅಗಯ್ಯ ಮೂಲ ಭೂತ ಸೌಕರ್ಯಗಳ ಪಟ್ಟಿ ಮಾಡಿ ತಾಲೂಕು ಪಂಚಾಯತ್ ಹಾಗೂ ಜಿಲ್ಲಾಪಂಚಾಯತ್ ಕಚೇರಿಗಳಿಗೆ ಕ್ರೀಯಾಯೋಜನೆ ಕಳಿಸಿ ಅನುಮೋದನೆ ಪಡೆದು ಅನುಷ್ಠಾನಗೊಂಡ ಕಾಮಗಾರಿಗಳನ್ನು ಪ್ರಾರಂಭಿಸ ಬೇಕು ಆದರೆ ಅನುಷ್ಠಾ ಇರಲಿ ಇನ್ನು ನಾಲ್ಕು ಗ್ರಾಮಪಂಚಾಯಿತಿ ಕಚೇರಿಯಲ್ಲಿ ಕ್ರಿಯಾ ಯೋಜನೆ ರೂಪಿಸರಲು ಸದಸ್ಯರು ಇಚ್ಚಾಶಕ್ತಿತೋರದೆ ನಿರ್ಲಕ್ಷವಹಿಸಿರುವುದು ಬೆಳಕಿದೆ ಬಂದಿದೆ. ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಅಭಿವೃದ್ಧಿಗೆ ಬಂದ ಅನುದಾನ ಕ್ರಿಯಾಯೋಜನೆ ಮಾಡದೆ ಇರುವ ಗ್ರಾಮಪಂಚಾಯಿತಿ ಗಳಯ ಕೂಡಲೇ ಕ್ರಿಯಾ ಯೋಜನೆ ತಯಾರಿಸಿ ಅಭಿವೃದ್ಧಿಗೆ ಮುಂದಾಗುವರೇ ಕಾದು ನೋಡ ಬೇಕಿದೆ.
0 Comments