ಚಳ್ಳಕೆರೆ ಜನಧ್ವನಿ ವಾರ್ತೆ ಜ.17 ಮೇವು ನೀರಿನಲ್ಲದೆ ಕಾಡು ಪ್ರಾಣಿಗಳು ಕಾಡಿನಿಂದ ನಾಡಿನತ್ತ ಮರಳಿ ಬರುತ್ತಿರುವ ಪ್ರಕರಣಗಳು ಬೆಳೆಕಿಗೆ ಬಂದಿದೆ.
ಹೌದು ಇದು ಚಳ್ಳಕೆರೆ ತಾಲೂಕಿನ ಗೋಪನಹಳ್ಳಿ ಗ್ರಾಮದ ಸಮೀಪ ಅರಣ್ಯ ಪ್ರದೇಶವಿದ್ದರೂ ಅಕ್ರಮ ಒತ್ತುವರಿಯಿಂದಾಗಿ ಬಡವನಹಳ್ಳಿ ಕಾವಲು ಪ್ರದೇಶದಲ್ಲಿ ಸಾಕಷ್ಟು ಕೃಷ್ಣಮೃಗಳಿದ್ದು ಕುಡಿಯಲು ನೀರಿಲ್ಲದೆ ಮೇವಿನಲ್ಲದೆ ನಾಡಿನತ್ತ ಬರುತ್ತಿದ್ದು ಗುಂಪಿನಿಂದ ತಪ್ಪಿಸಿಕೊಂಡ ಕೃಷ್ಣಮೃಗದ ಮೇಲೆ ನಾಯಿಗಳ ಹಿಂಡಿ ದಾಳಿ ನಡೆಸುತ್ತಿರುವುದನ್ನು ಕಂಡು ಗ್ರಾಮಸ್ಥರು ನಾಯಿಗಳನ್ನು ಓಡಿಸಿ ಕೃಷ್ಣ ಮೃಗವವನ್ನು ರಕ್ಷಣೆ ಮಾಡಿ ಅರಣ್ಯ ಅಲಾಖೆಗೆ ಮಾಹಿತಿ ನೀಡಿದ್ದಾರೆ.,
ಸ್ಥಳಕ್ಕೆ ಅರಣ್ಯ ಇಲಾಖೆಅಧಿಕಾರಿಗಳು ಸಿಬ್ಬಂದಿಗಳೊಂದಿಗೆ ದೌಡಾಯಿಸಿ ಗಾಯಗೊಂಡ ಕೃಷ್ಣಮೃಘಕ್ಕೆ ಚಿಕಿತ್ಸೆಕೊಡಿಸಿ ವರವು ಕಾವಲು ಅರಣ್ಯ ಪ್ರೆದೇಶಕ್ಕೆ ಮರಳಿ ಕಳಿಸಿದ್ದಾರೆ.
ಕೃಷ್ಣಮೃಗದ ಮೇಲೆ 8 ನಾಯಿಗಳು ದಾಳಿ ನಡೆಸಿ ಕಚ್ಚುತ್ತಿದ್ದನು ಕಂಡಂತಹ ಸಾರ್ವಜನಿಕರು ನಾಯಿಗಳನ್ನು ಸ್ಥಳದಿಂದ ಓಡಿಸಿ ಕೃಷ್ಣಮೃಗವನ್ನು ರಕ್ಷಣೆ ಮಾಡಿ ಅರಣ್ಯ ಇಲಾಖೆಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದೆವು ತಕ್ಷಣ ಸ್ಥಳಕ್ಕೆ ಚಳ್ಳಕೆರೆ ಅರಣ್ಯ ಅಧಿಕಾರಿಗಳು, ದೌಡಾಯಿಸಿ ಕೃಷ್ಣಮೃಗವನ್ನು ವಶಕ್ಕೆ ಪಡೆದುಕೊಂಡರು ಎಂದು ಜಿ ಟಿ ಆದರ್ಶ ತಿಳಿಸಿದ್ದಾರೆ.
ಗೋಪನಹಳ್ಳಿ ಗ್ರಾಮದಲ್ಲಿ ಗಂಡು ಕೃಷ್ಣಮೃಗದ ಮೇಲೆ ನಾಯಿಗಳು ದಾಳಿ ನಡೆಸಿದ್ದು ಕೃಷ್ಣಮೃಗಕೆ , ಸಣ್ಣಪುಟ್ಟ ಗಾಯಗಳಾಗಿವೆ ಇದರಿಂದ ಕೃಷ್ಣಮೃಗಕ್ಕೆ ಪ್ರಥಮ ಚಿಕಿತ್ಸೆ ಕೊಡಿಸಿ ಸುರಕ್ಷಿತವಾದ ಅರಣ್ಯಕ್ಕೆ ಬಿಟ್ಟರೆ. ಎರಡು ಮೂರು ವರ್ಷ ಬದುಕುಳಿಯಬಹುದು, ಎಂದರು ಹಾಗೂ ಕೃಷ್ಣಮೃಗವನ್ನು ರಕ್ಷಣೆ ಮಾಡಲು ಸಹಕರಿಸಿದ ಸಾರ್ವಜನಿಕರಿಗೆ ಅರಣ್ಯ ಅಧಿಕಾರಿ ವಸಂತ್ ಕುಮಾರ್ ಧನ್ಯವಾದಗಳು ತಿಳಿಸಿದರು.
ಈ ಸಂದರ್ಭದಲ್ಲಿ ಅರಣ್ಯ ಅಧಿಕಾರಿ ವಸಂತ್ ಕುಮಾರ್ ಮತ್ತು ಸಿಬ್ಬಂದಿಗಳು ಕೃಷ್ಣಮೃಗ ರಕ್ಷಣೆ ಮಾಡಿದ ಸ್ಥಳೀಯರಾದ ಆದರ್ಶ್, ದಿನೇಶ್ ಬಾಬು, ಮಧು ಗೌಡ, ಮಹೇಶ್, ಶಶಿಧರ್ ,ಕೃಷ್ಣಮೃಗವನ್ನು ನಾಯಿಗಳ ದಾಳಿಯಿಂದ ತಪ್ಪಿಸಿ ಮಾನವೀಯತೆ ಮೆರೆದಿದ್ದಾರೆ.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments