ಚಳ್ಳಕೆರೆ ಜನಧ್ವನಿ ವಾರ್ತೆ ಡಿ 22
ಬಡವರಿಗಾಗಿ ಸರಕಾರದಿಂದ ಹತ್ತು ಹಲವು ಯೋಜನೆಗಳು ಜಾರಿಗೊಳ್ಳುತ್ತವೆ ಇದನ್ನೇ ಬಂಡವಾಳ ಮಾಡಿಕೊಂಡ ಜನರಿಂದ ಆಯ್ಕೆಯಾದವರು ಹಣಕೊಟ್ಟವರಿಗೆ ಸೌಲಭ್ಯ ಎನ್ನುವಂತಾಗಿದ್ದು ಮಹಿಳಾ ಸದಸ್ಯರಿಗೆ ವರದಾನವಾಗಿದೆ.
ಹೌದು ಇದು ಚಳ್ಳಕೆರೆ ತಾಲೂಕಿನ ಚನ್ನಮ್ಮನಾಗತಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾಲಿಗೊಂಡನಹಳ್ಳಿ ಗ್ರಾಮದಕವಿತಮ್ಮ ಎಂಬುವರಿಗೆ ವಸತಿ ಯೋಜನೆಯಡಿ ಮಂಜೂರಾದ ಮನೆ ಕಟ್ಟಿಕೊಳ್ಳಲು ಗ್ರಾಮದ ಗ್ರಾಮ ಪಂಚಾಯಿತಿ ಸದಸ್ಯೆ ಅನಿಲಾಕ್ಷಿ ಎಂಬುವರ ಪತಿ ಹನುಮಂತರಾಜು ಕೇಳಿದ್ದ 30 ಸಾವಿರ ಲಂಚ ನೀಡಲಿಲ್ಲ ಎನ್ನುವ ಕಾರಣಕ್ಕೆ, ಮನೆ ಕಟ್ಟಿಕೊಳ್ಳಲು ಅಡ್ಡಿಪಡಿಸುತ್ತಿದ್ದಾರೆ ಎಂದು ತಾಲೂಕು ಪಂಚಾಯಿ ಕಚೇರಿ ಮುಂದೆ ಚಿಕ್ಕಮಕ್ಕಳೊಂದಿಗೆ ಧರಣಿ ಕುಳಿತು ಬಡಕುಟುಂಬಕ್ಕೆ ನ್ಯಾಯ ಬೇಕೆಂದು ತಾಪಂ ಇಒ ಎಚ್. ಶಶಿಧರ ಬಳಿ ಅಳಲು ತೊಡಿಕೊಂಡಿದ್ದಾರೆ.
![](https://janadhwani.in/wp-content/uploads/2023/12/CLK-VASATI-21.jpeg)
2017 ರಲ್ಲಿ ರಾಜೀವ್ ಗಾಂಧಿ ವಸತಿ ಯೋಜನೆಯಡಿ ಮನೆ ಮಂಜೂರಾಗಿತ್ತು. ಬಡತನದ ಪರಿಸ್ಥಿತಿ ಮತ್ತು ಕೋವಿಡ್ ಕಾಲದಲ್ಲಿ ಮನೆ ಕಟ್ಟಿಕೊಳ್ಳಲಿಲ್ಲ. ಈ ವರ್ಷದಲ್ಲಿ ಮನೆ ಕಟ್ಟಿಕೊಳ್ಳುತ್ತಿರುವ ನಮಗೆ ನಮ್ಮ ಅವಧಿಯಲ್ಲಿ ಮನೆ ಕಟ್ಟಿಕೊಳ್ಳುತ್ತಿದ್ದೀರಾ ಇಂತಿಷ್ಟು ದುಡ್ಡು ಕೊಡಬೇಕೆಂದು ಗ್ರಾಪಂ ಸದಸ್ಯೆ ಪತಿ ಹನುಮಂತರಾಜು ನಮಗೆ ಲಂಚದ ಹಣಕ್ಕಾಕಿ ಹಿಂಸೆ ನೀಡುತ್ತಾದ್ದೇರೆ. ಹಣ ಕೊಡಿದ್ದಕ್ಕೆ ಜಾಗ ಒತ್ತುವರಿ ಮಾಡಿಕೊಂಡು ಮನೆ ಕಟ್ಟುತ್ತಿದ್ದಾರೆ ಎಂದು ಐದಾರು ಬಾರಿ ನೋಟೀಸ್ ಕೊಡಿಸುವ ಮೂಲಕ ಮನೆಯ ಬಿಲ್ಲುಗಳನ್ನು ತಡೆಯಲಾಗಿದೆ. ಬೀಳುವ ಸ್ಥಿತಿಯಲ್ಲಿರುವ ಗುಡಿಸಲಿನಲ್ಲಿ ಮಕ್ಕಳನ್ನು ಕಟ್ಟಿಕೊಂಡು ಜೀವನ ಮಾಡುವುದು ಕಷ್ಟವಾಗಿದೆ. ಕಳೆದ ತಿಂಗಳು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಕಾಲಿಡಿದು ಬೇಡಿಕೊಂಡಿದ್ದರೂ ಮನೆ ಕಟ್ಟಿಕೊಳ್ಳಲು ಬಿಡುತ್ತಿಲ್ಲ. ಪಂಚಾಯಿತಿ ಅಧ್ಯಕ್ಷರು ಮತ್ತು ಎಲ್ಲಾ ಸದಸ್ಯರು ಮನೆ ಕಟ್ಟಿಕೊಳ್ಳಲು ಒಪ್ಪಿಗೆ ನೀಡಿದ್ದರೂ, ಸದಸ್ಯೆ ಪತಿಯಾಗಿರುವ ಹನುಮಂತರಾಜು ಅಡ್ಡಿಪಡಿಸುತ್ತಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.
![](https://janadhwani.in/wp-content/uploads/2023/12/IMG-20231222-WA0224.jpg)
ಇಒ ಶಶಿಧರ್ ಮನವಿ ಸ್ವೀಕರಿಸಿ ಮಾತನಾಡಿ, ಸಂಜೆ ೪ ಗಂಟೆ ಸಮಯಕ್ಕೆ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಲಾಗುವುದು. ಕೆಲವರಿಗೆ ಮನೆ ಮಂಜೂರಾತಿ ಆದರೂ ಕಟ್ಟಿಕೊಳ್ಳುವುದು ಕಷ್ಟ. ಅಂತಹದರಲ್ಲಿ ಬಡ ಕುಟುಂಬದವರಾಗಿ ಮನೆ ಕಟ್ಟಿಕೊಳ್ಳುತ್ತಿದ್ದೀರ. ಈ ಸಮಸ್ಯೆ ಬಗೆಹರಿಸಿ ಉಳಿದ ಮೂರು ಬಿಲ್ಲುಗಳು ಕೊಡಿಸುವ ಭರವಸೆ ನೀಡಿದ್ದಾರೆ.
ಕುಟುಂಬಸ್ಥರಾದ ಕವಿತಾ, ರಮೇಶ, ರತ್ನಮ್ಮ, ಗುರುಮೂರ್ತಿ ಇತರರಿದ್ದರು.
ಈಗಲಾದರೂ ಗ್ರಾಮಪಂಚಾಯಿತಿ ಆಡಳೀತದಲ್ಲಿ ಮಹಿಳಾ ಸದಸ್ಯರ ಬದಲಾಗಿ ಪತಿರಾಯರು ಮೂಗುತೂರಿಸುವವರಿಗೆ ಕಾನೂನು ಕ್ರಮ ಕೈಗೊಳ್ಳ ಬೇಕಿದೆ.
0 Comments