.
ಚಳ್ಳಕೆರೆ ಡಿ.28 ಅಡುಗೆ ಅನಿಲ ಸಂಪರ್ಕಕ್ಕೆ ಆಧಾರ್ ಇ-ಕೆವೈಸಿ ಮಾಡಿಸಲು ಅಂತಿಮ ದಿನಾಂಕ ನಿಗಧಿಪಡಿಸಿಲ್ಲ ಯಾವುದೇ ಆತಂಕ ಬೇಡ ಎಂದು ಕುಬೇರ ಅಡುಗೆ ಅನಿಲ ವಿತರಕ ತಿಪ್ಪೇರುದ್ರಪ್ಪ ಗ್ರಾಹಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಅಡುಗೆ ಅನಿಲ ಸಂಪರ್ಕ ಹೊಂದಿರುವವರು ಆಧಾರ್ ಇ-ಕೆವೈಸಿ ಮಾಡಿಸಲು ಯಾವುದೇ ಕೊನೆ ದಿನಾಂಕವನ್ನು ಕೇಂದ್ರ ಸರ್ಕಾರವು ನಿಗಧಿಪಡಿಸಿರುವುದಿಲ್ಲ. ಗಾಳಿ ಸುದ್ದಿ ಹರಡಿಸಿರುವುದರಿಂದ ಅನಾವಶ್ಯಕವಾಗಿ ಕೂಲಿ ನಾಲಿ ಬಿಟ್ಟು ಗ್ಯಾಸ್ ವಿತರಣೆ ಅಂಗಡಿ ಮುಂದೆ ಜನದಟ್ಟಣೆ ಮಾಡುವುದು ಬೇಡ ನಮ್ಮ ಏಜೆಸ್ಸಿ ವತಿಯಿಂದ ನಿಮ್ಮ ಗ್ರಾಮಕ್ಕೆ ಬಂದು ಇಕೆವೈಸಿ ಮಾಡಿಸಲಾಗುವುದು ಯಾವುದೇ ವಂದಂತಿಗಳನ್ನು ನಂಬಬೇಡಿ ಎಂದು ಕುಬೇರ ಅಡುಗೆ ಅನಿಲ ಸಂಪರ್ಕ ಪಡೆದ ಗ್ರಾಹಕರಲ್ಲಿ ಮನವಿ ಮಾಡಿಕೊಂಡಿದ್ದಾರೆಮ ಸಾರ್ವಜನಿಕರು ತಮ್ಮ ಬಿಡುವಿನ ವೇಳೆಯಲ್ಲಿ ಗ್ಯಾಸ್ ಏಜೆನ್ಸಿಗಳಿಗೆ ತೆರಳಿ ಆಧಾರ್ ಇ-ಕೆವೈಸಿ ಮಾಡಿಸಬಹುದು ಅಥವಾ ನಿಮ್ಮೂರಿಗೆ ನಮ್ಮ ಹುಡುಗರನ್ನು ಕಳಿಸಿ ಇಕೆವೈಸಿ ಮಾಡಿಸಲಾಗುವುದು ಗ್ರಾಹರು ಆತಂಕದಿಂದ ಗ್ಯಾಸ್ ಏಜೆನ್ಸಿಗಳ ಮುಂದೆ ಸರತಿ ಸಾಲಿನಲ್ಲಿ ನಿಲ್ಲುವ ಅವಶ್ಯಕತೆ ಇರುವುದಿಲ್ಲ.
![](https://janadhwani.in/wp-content/uploads/2023/12/lpg-106071888.jpg)
ಆದ್ದರಿಂದ ಅನಾವಶ್ಯಕವಾಗಿ ಗೊಂದಲ ಅಥವಾ ತಪ್ಪು ಮಾಹಿತಿಯಿಂದ ಗ್ಯಾಸ್ ಏಜೆನ್ಸಿಗಳ ಬಳಿ ಸರತಿ ಸಾಲಿನಲ್ಲಿ ನಿಲ್ಲುವ ಅಗತ್ಯವಿರುವುದಿಲ್ಲ ಹಾಗೂ ಸಿಲಿಂಡರ್ ಗಳನ್ನು ಮನೆಗೆ ಡೆಲಿವರಿ ಪಡೆಯುವ ವೇಳೆಯಲ್ಲಿ ಕೂಡ ಇ-ಕೆವೈಸಿ ಮಾಡಿಸಲು ಅವಕಾಶವಿರುತ್ತದೆ ಎಂದು ತಿಳಿಸಿದ್ದಾರೆ.
0 Comments