ಚಳ್ಳಕೆರೆ ಜನಧ್ವನಿ ವಾರ್ತೆ ಜ.4. ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು ಎಂಟು ತಿಂಗಳು ಕಳೆದರೂ ಯಾವುದೇ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡದೆ ಗ್ಯಾರೆಂಟಿ ಯೋಜನೆಗಳಿ ಹಣ ಜೋಡಿಸಲು ಸರ್ಕಸ್ ಮಾಡುತ್ತಿದೆ ಕೂಡಲೆ ಗ್ಯಾರೆಂಟಿ ಯೋಜನೆಗಳನ್ನು ರದ್ದು ಪಡಿಸಿ ರೈತಪರಯೋಜನೆಗಳನ್ನುಬಜಾರಿಗೊಳಿಸುವಂತೆ ಜ.6 ರಂದು ನಡೆಯಲಿರುವ ಜನ ಸಂಪರ್ಕ ಸಭೆಯಲ್ಲಿ ಅಧಿಕಾರಿಗಳ ಮೂಲಕ ಸರಕಾರಕ್ಕೆ ಮನವಿ ನೀಡುವುದಾಗಿ ರಾಜ್ಯ ರೈತ ಸಂಘದ ಹಿರಿಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ ಅಕ್ರೋಶ ಹೊರಹಾಕಿದ್ದಾರೆ. ಕಾಂಗ್ರೆಸ್ ಸರಕಾರ ಗ್ಯಾರೆಂಟಿಗಳ ಭರವಸೆ ಮೇಲೆ ಅಧಿಕಾರಕ್ಕೆ ಬಂದು ಗಂಡನ ಜೇಬಿಗೆ ಕೈ ಹಾಕಿ ಹಣ ಪಡೆದು ಹೆಂಡತಿಯ ಖಾತೆ ಹಾಕುತ್ತಿದ್ದಾರೆ. ಗ್ಯಾರೆಂಟಿ ಯೋಜನೆಯ ಹಣ ತುಂಬಲು ಅಕ್ಕಿ.ಬೇಳೆ.ಎಣ್ಣೆ .ಗೊಬ್ಬರ .ಬಿತ್ತನೆ ಬೀಜ ದಿನಸಿ ಪದಾರ್ಥಗಳ ಬೆಲೆ ಏರಿಕೆ ಮಾಡಲಾಗಿದೆ. ಶಕ್ತಿ ಯೋಜನೆ ಮಹಿಳೆಯರಿಗೆ ಉಚಿತ ಸಾರಿಗೆ ಬಸ್ ಪ್ರಯಾಣ ಜಾರಿಗೊಳಿಸುವ ಮುನ್ನ ಹೆಚ್ಚುವರಿ ಬಸ್ ಗಳನ್ನು ರಸ್ತೆ ಬಿಡ ಬೇಕಿತ್ತು ಬಸ್ ಗಳ ಸಂಖ್ಯೆ ಕಡಿಮೆ ಇವೆ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದು ವಿದ್ಯಾರ್ಥಿಗಳಿಗೆ ಶಾಲಾ ಕಾಲೇಜುಗಳಿಗೆ ಹೋಗಲು ಬಸ್ ನಲ್ಲಿ ಜಾಗವಿಲ್ಲದಂತಾಗಿದೆ. ಅತಿ ಹೆಚ್ಚು ಕಿ.ಮೀ ದೂರ ಓಡಿದ ಹಳೆಯ ಬಸ್ ಗಳಿದ್ದು ಎಲ್ಲೆಂದರಲ್ಲೆ ಕೆಟ್ಟು ನಿಲ್ಲುತ್ತವೆ ಹೆಚ್ಚುವರಿ ಬಸ್ ಖರೀದಿ ಮಾಡುತ್ತೇವೆ ಎಂದು ಸರಕಾರ ಹೇಳುತ್ತಿದೆ ಇದುವರೆಗೂ ಬಸ್ ಖರೀದಿ ಮಾಡಿಲ್ಲ. ಸರಕಾರವೇ ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಿದೆ ಇತ್ತ ಕೃಷಿ .ತೋಟಗಾರಿಕೆ ಇಲಾಖೆ ಅಧಿಕಾರಿಗಳು ಬೆಳೆ ನಷ್ಟವಾಗಿರುವ ಅಂಕಿ ಅಂಶಗಳನ್ನು ನೀಡಿದೆ ಕೇಂದ್ರ ಬರ ಅಧ್ಯಯನ ತಂಡ ಬಂದು ಬರ ಅಧ್ಯಯನ ಮಾಡಿದೆ ಹಾಗೂ ಬಿಜೆಪಿ ಪಕ್ಷದ ವರಿಷ್ಠ ರಿಂದಲೂ ಬರ ಅಧ್ಯಯನ ಮಾಡಿ ಹೋಗಿದ್ದಾರೆ. ರೈತರು ಮಳೆ ಬಾರದೆ ಬೆಳೆ ನಷ್ಟವಾಗಿದ್ದು ಬೆಳೆ ಕಟಾವಿಗೆ ಮುನ್ನವೇ ಜಾನುವಾರುಗಳ ಮೇವಿಗಾಗಿ ಬೆಳಡಯನ್ನು ಕಟಾವು ಮಾಡಿದ್ದಾರೆ ಬೆಳೆ ನಷ್ಟದ ಬಗ್ಗೆ ಜನಪ್ರತಿನಿಧಿಗಳು ಅಧಿಕಾರಿಗಳು ಬೆಳೆ ನಷ್ಟದ ಬಗ್ಗೆ ಅಧ್ಯಯನ ಮಾಡಿದರೂ ಸಹ ರೈತರಿಗೆ ಬೆಳೆ ಪರಿಹಾರಮ ಬೆಳೆ ವಿಮೆ ಹಾಕಲು ಸರಕಾರಗಳು ಮೀನಾ ಮೇಷ ಎಣಿಸುತ್ತಿವೆ. ರೈತರು ಬೆಳೆ ನಷ್ಟವಾಗಿ ಸಂಕಷ್ಟಕ್ಕೆ ಸಿಕುಕಿದ್ದರೂ ಕೃಷಿವಪರಿಕರಗಳ ಬೆಲೆ ಏರಿಗೆ ಹನಿ ನೀರಾವರಿ ಪೈಪ್ ಗಳ ಬೆಲೆ ಏರಿಗೆ ಒಮ್ಮೆ ಖರೀದಿ ಮಾಡಿದರೆ ಮತ್ತೆ ಏಳು ವರ್ಷದವರೆಗೆ ಕೊಡುವುದಿಲ್ಲ ಎಂಬ ಅವೈಜ್ಞಾನಿಕ ಪದ್ದತಿ. ರೈತರ ಭೂಮಿ ಬರಡಾಗಿದ್ದು ಫಲವತ್ತತೆಗೆ ಸರಕಾರ ರದ್ದು ಮಾಡಿರುವ ಕೃಷಿ ಭಾಗ್ಯ ಯೋಜನೆ ಜಾರಿಗೊಳಿಸ ಬೇಕು ಶೇಂಗಾ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡ ಬೇಕು. ಎಸ್ಟಿ ಮೀಸಲು ಕ್ಷೇತ್ರವಾಗಿದ್ದರೂ ಸಹ ಇದುವರೆಗೂ ಬಡವರಿಗೆ ವಸತಿಯೋಜನೆಯಡಿ ಮನೆ ವಿತರಣೆ ಮಾಡಿಲ್ಲ ಗಂಗಾ ಕಲ್ಯಾಣ ಯೋಜನೆ ಕಡಿಮೆ ಫಲಾನುಭವಿಗಳ ಆಯ್ಕೆ ಸೇರಿದಂತೆ ಸರಕಾರ ಕೂಡಲೆ ಉಚಿತ ಗ್ಯಾರೆಂಟಿ ಯೋಜನೆಗಳಿಂದ ಅಭಿವೃದ್ಧಿಗೆ ಮಾರಕವಾಗಿದ್ದು ಕೂಡಲೆ ಈ ಯೋಜನೆ ರದ್ದು ಪಡಿಸಿ ಜನಪರ.ರೈತಪರ ಯೋಜನೆಗಳನ್ನು ಜಾರಿಗೊಳಿಸುವಂತೆ ಜಿಲ್ಲಾ ಮಟ್ಟದ ಜನಸಂಪರ್ಕ ಸಭೆಯಲ್ಲಿ ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆವಮನವಿ ಸಲ್ಲಿಸಲಾಗುವುದು ಎಂದು ಜನಧ್ವನಿ ಡಿಜಿಟಲ್ ಮೀಡಿಯಾ ದೊಂದಿಗೆ ರೈತ ಸಂಘದ ಹಿರಿಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ ಮಾಹಿತಿ ಹಂಚಿಕೊಂಡಿದ್ದಾರೆ.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments