ಚಳ್ಳಕೆರೆ ಫೆ3. ಗ್ಯಾರೆಂಟಿ ಉಚಿತ ಯೋಜನೆಗಳ ಬಗ್ಗೆ ಠೀಕೆ ಮಾಡೋ ಪಕ್ಷದವರೂ ಸಹ ಉಚಿತ ಗ್ಯಾರೆಂಟಿ ಯೋಜನೆಗಳನ್ನು ಜಾರಿಗೊಳಿಸಲು ಮುಂದಾಗಿದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ನಗರದ ಶ್ರೀಗುರು ರಾಘವೇಂದ್ರ ಕಲ್ಯಾಣ ಮಂಟದಲ್ಲಿ ತಾಲೂಕು ಆಡಳಿತವತಿಯಿಂದ ಹಾಗೂ ಗ್ಯಾರೆಂಟಿಯೋಜನೆಗಳ ಸಮಿತಿವತಿಯಿಂದ ಆಯೋಜಿಸಿದ್ದ ಗ್ಯಾರೆಂಟಿ ಯೋಜನೆಗಳ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ಕೆಲವು ತಾಂತ್ರಿಕ ದೋಷದಿಂದ ಕೆಲವರಿಗೆ ಗೃಹಲಕ್ಷ್ಮಿ ಹಣ ಬಂದಿಲ್ಲ ಎಂದು ಸುಮ್ಮನಾದರೆ ಮಹಿಳೆಯರ ಶಾಪ ತಟ್ಟುತ್ತದೆ. ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರುವ ಮುನ್ನ ಕೊಟ್ಟ ಐದು ಗ್ಯಾರೆಂಟಿಗಳನ್ನು ಜಾರಿಗೊಳಿಸಿದ್ದೇವೆ, ಕೆಲವು ಮಹಿಳೆಯರಿ ಬಾರದೆ ಇರುವುದರಿಂದ ಸಮಾವೇಶವನ್ನು ಹಮ್ಮಿಕೊಳ್ಳುವ ಮೂಲಕ ತಾಂತ್ರಿಕ ದೋಷವನ್ನು ಸರಿಪಡಿಸಿ ಬಾಕಿ ಮೊತ್ತವನ್ನು ಸಹ ಹಾಕಲಾಗುವುದು ಯಾವುದೇ ಗಾಳಿ ಸುದ್ದಿಗಳಿಗೆ ಕಿವಿಕೊಡ ಬೇಡಿ ಚಳ್ಳಕೆರೆ 10 ಕೋಟಿ ಮಹಿಳೆಯರು ತೆರಿಗೆ ಕಟ್ಟುವರು ಸರಕಾರಿ ನೌಕರರು.ಕೂಲಿಕಾರ್ಕಿರು ಸಾರಿಗೆ ಬಸ್ ನಲ್ಲಿ ಸಂಚರಿಸುವ ರಾಜ್ಯದಲ್ಲಿ 3464 ಸಾವಿರ ಕೋಟಿ ನೀಡಿದೆ .ಗೃಹಲಕ್ಷ್ಮಿ 39 ಕೋ ತಾಲೂಕಿಗೆ ನೀಡಲಾಗಿದೆ.
ಉಚಿತ ಗ್ಯಾರೆಂಟಿ ಯೋಜನೆಗಳಿಂದ ಅಭಿವೃದ್ಧಿ ಸಾಧನೆಆಗಲ್ಲ ಸರಕಾರ ದೀವಾಳಿಯಾಗುತ್ತದೆ, ಲೋಕಸಭಾ ಚುನಾವಣೆ ನಂತರ ಗ್ಯಾರೆಂಟಿ ಯೋಜಗಳನ್ನು ನಿಲ್ಲಿಸುತ್ತಾರೆ ಎಂದು ವಿರೋಧ ಪಕ್ಷದವರು ಸರಕಾರವನ್ನು ಠೀಕಿಸುತ್ತಾರೆ.
ದೇವರಾಜ್ ಅರಸು ಮುಖ್ಯಮಂತ್ರಿ ನಂತರ ಸಿದ್ದರಾಮಯ್ಯ ಮುಖ್ಯಂಮತ್ರಿಯಾದ ಮೇಲೆ ಬಡವರಿಗೆ ಶೋಷಿತರಿಗೆ ಸಹಕಾರಿಯಾಗುವಂತ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಈ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಮುಂದೆ ಬರುವಂತೆ ತಿಳಿಸಿದರು.
![](https://janadhwani.in/wp-content/uploads/2024/02/IMG-20240203-WA0254.jpg)
ಕಾರ್ಯಕ್ರಮದಲ್ಲಿ ತಾಪಂ ಇಒ ಶಶಿಧರ್ ಪ್ರಸ್ಥಾವಿಕ ನುಡಿದರು, ಮಹಿಳೆಯರು ಗ್ಯಾರೆಂಟಿ ಯೋಜನೆಗಳಬಗ್ಗೆ ಅಭಿಪ್ರಾಯ ಹಂಚಿಕೊಂಡರು,.
ಗ್ರಾಪಂ ಸದಸ್ಯರಾದ ಕವಿತ, ಸುಜಾತ, ಎಂ.ಜೆ.ರಾಘವೇಂದ್ರ, ವೀರಭದ್ರಪ್ಪ, ತಹಶೀಲ್ದಾರ್ ರೇಹಾನ್ ಪಾಷ, ಶಿಶು ಅಭಿವೃದ್ಧಿ ಅಧಿಕಾರಿ ಹರಿಪ್ರಸಾದ್, ಬೆಸ್ಕಾಂ ಎಇಇ ರಾಜು, ಸಾರಿಗೆ ವ್ಯವಸ್ಥಾಪಕ ಪ್ರಭು, ಇತರರಿದ್ದರು.
![](https://janadhwani.in/wp-content/uploads/2024/02/IMG-20240203-WA0258.jpg)
0 Comments