ಗೌರಿಗಣೇಶ ಹಾಗೂಗೌರಸಮುದ್ರ ಮಾರಮ್ಮದೇವಿ ಜಾತ್ರೆಗೆ ಬರುವ ಭಕ್ತರಿಗೆ ಶಾಸಕ ಟಿ.ರಘುಮೂರ್ತಿ‌ ಶುಭಕೋರಿದ್ದಾರೆ.

by | 17/09/23 | ಸಾಂಸ್ಕೃತಿಕ


ಚಳ್ಳಕೆರೆ ಜನಧ್ವನಿ ವಾರ್ತೆ.ಸೆ.,17. ಮಧ್ಯ ಕರ್ನಾಟಕದ ಪ್ರಸಿದ್ಧ ಶಕ್ತಿ ದೇವತೆ ಗೌರಸಮುದ್ರ ಮಾರಮ್ಮದೇವಿ ಜಾತ್ರೆ ನಿಮಿತ್ತ ಒಂದು ವಾರದವರೆಗೆ ಅಮ್ಮನವರಿಗೆ ಸ್ನಾನವಿಲ್ಲ. ದೇವಾಲಯದಲ್ಲಿ ಗಂಟೆ ಹೊಡೆಯಲ್ಲ. ಸುತ್ತ ಹಳ್ಳಿಯ ಜನರು ಸಹ ಯಾರೂ ಜಳಕ ಮಾಡಲ್ಲ. ತಲೆ ಕೂದಲಿಗೆ ಕತ್ತರಿಯಿಲ್ಲ, ಕ್ಷೌರ ಕೂಡ ಮಾಡಿಸಲ್ಲ. ಇಂಥ ವಿಶಿಷ್ಟ ಆಚರಣೆ ನಡೆಯಲಿದೆ.

ಸೆ.17 ರಂದು ಹುತ್ತಕ್ಕೆ ಅಭಿಷೇಕ, ಮಾರಮ್ಮ ದೇವಿಯ ದೊಡ್ಡ ಜಾತ್ರೆ ತುಂಬಲಿಗೆ ದೇವಿ ಆಗಮನ, ರಾತ್ರಿ ಗ್ರಾಮದಲ್ಲಿಮೆರವಣಿಗೆ, 20ರಂದು ಹೋಕಳಿ 20 ಕ್ಕೆ ಮುಂಜಾನೆ ಮಹಾ ಮಂಗಳಾರತಿ, ನಂತರ ದೇವಿಯ ಗರ್ಭಗುಡಿ ಪ್ರವೇಶದೊಂದಿಗೆ ಜಾತ್ರೆಗೆ ತೆರೆ ಬೀಳಲಿದೆ. ಅಕ್ಟೋಬರ್ 17ರಂದು ಮರಿಪರಿಸೆ ನಡೆಯಲಿದೆ.

ಮಾರಮ್ಮ


ಸೆ.19ರಂದು ತುಮಲಿನ ಬಯಲು ಪ್ರದೇಶದಲ್ಲಿನಡೆಯುವ ಜಾತ್ರೆಗೆ ರಾಜ್ಯ ಸೇರಿ ಆಂಧ್ರದಿಂದಲೂ ಹೆಚ್ಚಿನ ಸಂಖ್ಯೆಯಲ್ಲಿಭಕ್ತರು ಆಗಮಿಸುತ್ತಾರೆ. ದೇವಿಗೆ ಕುರಿ, ಕೋಳಿಗಳ ಬಲಿ ನೀಡಿ, ಬಾಡೂಟ ಮಾಡ್ತುತಾರೆ. ಆದರೆ, ಗೌರಸಮುದ್ರ ಗ್ರಾಮ ಸೇರಿದಂತೆ ಸುತ್ತಹಳ್ಳಿಯ ಜನರು ಮಾತ್ರ ಜಾತ್ರೆ ಆಚರಿಸುತ್ತಾರೆ. ಬಾಡೂಟ ಮಾಡದೆ ತಿಂಗಳ ಮರಿ ಪರಿಷೆ ಹರಕೆ ಪೂರೈಸಿದ ನಂತರವೇ ಮಾರಮ್ಮ ಹಬ್ಬ ನಡೆಸುವುದು ವಿಶೇಷ.

ನಾನಾ ಹೆಸರು


ಮಾರಮ್ಮ ದೇವಿಗೆ ಬಿಸುಲು ಮಾರಿ, ದುರ್ಗಿ, ಕರಿಮಾರಿ ಎಂಬ ಹೆಸರುಗಳಿಂದ ಕರೆಯುತ್ತಾರೆ. ದೇವಿಯ ಜಾತ್ರೆ ಸಮಯದಲ್ಲಿತನ್ನ ಕೆಂಗಣ್ಣಿನಲ್ಲಿಶೇಂಗಾ, ಸಜ್ಜೆ, ಜೋಳ, ತೊಗರಿ, ಸೂರ್ಯಕಾಂತಿ ಇನ್ನಿತರ ಬೆಳೆಗಳನ್ನು ಬಾಡಿಸಿ ನಂತರ ಸಮೃದ್ಧ ಮಳೆ ತರಿಸುತ್ತಾಳೆಂಬ ನಂಬಿಕೆ ಇಂದಿಗೂ ಜನರಲ್ಲಿಉಳಿದಿದೆ.

ಜಿಲ್ಲೆಯ ಪ್ರಮುಖ ಸಮುದಾಯಗಳಾದ ನಾಯಕ, ಗೊಲ್ಲ, ಉಪ್ಪಾರ ಸೇರಿದಂತೆ ಎಲ್ಲರಿಗೂ ಇಲ್ಲಿನ ಮಾರಮ್ಮ ಶಕ್ತಿ ದೇವತೆ. ಹೀಗಾಗಿ ಎಲ್ಲಸಮುದಾಯದವರು ದೇವಿಯ ಉತ್ಸವದಲ್ಲಿಪಾಲ್ಗೊಳ್ಳುತ್ತಾರೆ.
ಜಾತ್ರೆಗಳ ಆರಂಭ

ಶ್ರಾವಣ ಮಾಸ ಮುಕ್ತಾಯವಾಗಿ ಭಾದ್ರಪದ ಮಾಸದ ಆರಂಭ ದಿನವೇ ಈ ಗೌರಸಮುದ್ರದ ದೇವಿ ಜಾತ್ರೆ ನಡೆದ ನಂತರವೇ ರಾಜ್ಯದ ಅನೇಕ ಕಡೆ ಅಲ್ಲಿನ ಹೆಣ್ಣು ದೇವರಿನ ಜಾತ್ರೆಗಳು ನಡೆಯುವುದು ವಿಶೇಷ. ಜತೆಗೆ ದೊಡ್ಡ ಜಾತ್ರೆಯ ನಂತರ ಜಿಲ್ಲೆಯ ಎಲ್ಲಗ್ರಾಮಗಳಲ್ಲಿಪ್ರತಿ ಮಂಗಳವಾರ ಒಂದು ತಿಂಗಳ ಕಾಲ ಮಾರಮ್ಮನ ಹಬ್ಬವನ್ನು ಆಚರಿಸುವ ಪದ್ಧತಿ ಇದೆ ಕಟ್ಟು ನಿಟ್ಟಿನ ಆಚರಣೆಗಳು
ಬುಡಕಟ್ಟು ಸಮುದಾಯಗಳಲ್ಲಿ ಹಬ್ಬ, ಹರಿದಿನ, ಜಾತ್ರೆಗಳ ಸಂದರ್ಭದಲ್ಲಿಕಟ್ಟು ನಿಟ್ಟಿನ ಆಚರಣೆಗಳನ್ನು ನಡೆಸಲಾಗುತ್ತದೆ. ದೇವಾಲಯಕ್ಕೆ ಬರುವ ಭಕ್ತರಿಗೆ ನಿರಾಸೆ ಮಾಡಬಾರದೆಂದು ಹಣ್ಣು, ಕಾಯಿ ಪೂಜೆಗೆ ಅವಕಾಶ ಮಾಡಿಕೊಡಲಾಗುತ್ತಿದೆ.
ಸುತ್ತಮುತ್ತಲಿನ ಹಳ್ಳಿಯ ಜನರು ಸ್ನಾನ ಮಾಡಲ್ಲ. ಒಲೆ ಮೇಲೆ ಹಂಚಿಟ್ಟು ರೊಟ್ಟಿ, ಚಪಾತಿ ಮಾಡುವುದಿಲ್ಲ. ಕಡ್ಲೆಬೀಜ ಹುರಿಯುವುದಿಲ್ಲ. ಎಣ್ಣೆಯಲ್ಲಿ ಪದಾರ್ಥಗಳನ್ನು ಕರಿಯುವುದಿಲ್ಲ. ಇಂಥ ವಿಶಿಷ್ಟ ಪದ್ಧತಿಯನ್ನು ಇಂದಿಗೂ ಪಾಲಿಸುತ್ತಿರುವುದು ವಿಶೇಷ.

ಉತ್ತಮ ಮಳೆ ಬೆಳೆ ಆರೋಗ್ಯ ಐಶ್ವರ್ಯ ಕರುಣಿಸಲಿ

. ಗೌರಿ.ಗಣೇಶ ಹಾಗೂ ಶ್ರೀ ಗೌರಸಮುದ್ರ ಮಾರಮ್ಮ ದೇವಿ ನಾಡಿನಲ್ಲಿ ಉತ್ತಮ ಮಳೆ.ಬೆಳೆ.ಆರೋಗ್ಯ.ಐಶ್ವರ್ಯ ಕರುಣಿಸಲಿ ಎಂದು ಶಾಸಕ‌ ಟಿ.ರಘುಮೂರ್ತಿ ಪ್ರಾರ್ಥನೆ ಮಾಡಿಕೊಳ್ಳುವ ಮೂಲಕ ರಾಜ್ಯದ ವಿವಿಧ ಪ್ರದೇಶಗಳಿಂದ ಸೆ.19 ರ ಮಂಗಳವಾರ ಗೌರಸಮುದ್ರ ಗ್ರಾಮದ ಮಧ್ಯಾಹ್ನದ ಮಾರಮ್ಮ ದೇವಿಯ ಜಾತ್ರೆಗೆ ಬರುವ ಭಕ್ತರಿಗೆ ಶುಭಕೋರಿದ್ದಾರೆ.

Latest News >>

ಪೂರ್ವಭಾವಿ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೂಚನೆ ಆ. 01 ರಂದು ವ್ಯಸನ ಮುಕ್ತ ದಿನಾಚರಣೆ ಮದ್ಯ, ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪಾರಿಣಾಮಗಳ ಬಗ್ಗೆ ಅರಿವು ಮೂಡಿಸಿ

ಚಿತ್ರದುರ್ಗ ಜು. 26: ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಅಂಗವಾಗಿ ಆಗಸ್ಟ್ 01 ರಂದು ಜಿಲ್ಲಾ ಮಟ್ಟದಲ್ಲಿ ವ್ಯಸನ ಮುಕ್ತ ದಿನಾಚರಣೆ...

ಆರು ವರ್ಷಗಳು ಕಳೆದರು ಚಿಕ್ಕಮಧುರೆ ಕೆರೆಹಳ್ಳದ ಸೇತುವೆ ಕಾಮಗಾರಿ ಸ್ಥಗಿತ

ಚಳ್ಳಕೆರೆ: ಜು.26 ತಾಲೂಕಿನ ಚಿಕ್ಕಮಧುರೆ ಗ್ರಾಮದ ಕೆರೆ ಹಳ್ಳದ ಸಂಪರ್ಕ ರಸ್ತೆಗೆ ಕೈಗೊಂಡಿರುವ ಸೇತುವೆ ಕಾಮಗಾರಿ ಸುಮಾರು 6 ವರ್ಷವಾದರೂ...

ಮೃತ ರೇಣುಕಾಸ್ವಾಮಿ ಮನೆಗೆ ಚಿತ್ರನಟ ವಿನೋದ್ ರಾಜ್ ಭೇಟಿ

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ & ಗ್ಯಾಂಗ್‌ ಈಗಾಲೇ ಜೈಲು ಸೇರಿದೆ. ಇನ್ನೂ ಇತ್ತೀಚೆಗಷ್ಟೇ ನಟ ವಿನೋದ್‌...

ಕಾಣೆಯಾದ ಬಾಲಕ ನೇರ್ಲಗುಂಟೆ ಗ್ರಾಮದ ಬಳಿ ಪತ್ತೆ….

ಚಳ್ಳಕೆರೆ ಜು.26. ಕಾಣೆಯದ ಬಾಲಕ ನೇರ್ಲಗುಂಟೆ ಗ್ರಾಮದ ಸಮೀಪ ಪತ್ತೆ. ಚಳ್ಳಕೆರೆ ನಗರದ ಕಾಟಪ್ಪನಹಟ್ಟಿಯ ನಾಲ್ಕನೇ ತರಗತಿ ಪ್ರಶಾಂತ್ ಕುಮಾರ್...

ಬಹಿರ್ದೆಸೆಗೆಂದು ಹೋದ ಮಗ ಮನೆಗೆ ಬಾರದೆ ಪೋಷಕರಲ್ಲಿ ಆತಂಕ..

ಚಳ್ಳಕೆರೆ ಜು.26 ಬೆಳ್ಳಂ ಬೆಳಗ್ಗೆ ಬರ್ಹಿದೆಸೆಗೆ ಹೋದ ಮನೆಗೆ ಬಾರದೆ ಕಾಣೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಹೌದು ಇದು ಚಳ್ಳಕೆರೆ ನಗರದ...

ರೈತರ ತಮ್ಮ ಜಮೀನಿನ ಪಹಣಿಗೆ ಆಧಾರ್ ಸಂಖ್ಯೆ ಲಿಂಕ್ ಮಾಡಿಸುವಂತೆ ನಗರ ಗ್ರಾಮಲೆಕ್ಕಾಧಿಕಾರಿ ಪ್ರಕಾಶ್

ಚಳ್ಳಕೆರೆ ಜು.25 ಬೆಳೆ ಪರಿಹಾರ ಬೆಳೆವಿಮೆ ಸೇರಿದಂತೆ ಸರಕಾರದ ಸೌಲಭ್ಯಗಳನ್ನು ಪಡೆಯಲು ಪಹಣಿಗೆ ಆಧಾರ್ ಲಿಂಕ್ ಕಡ್ಡಾಯವಾಗಿದ್ದು ರೈತರ ಪಹಣಿಗೆ...

ತುರುವನೂರು : ಬಾಲ್ಯ ವಿವಾಹ ನಿಷೇದ ಕುರಿತು ಜಾಗೃತಿ

ಚಿತ್ರದುರ್ಗ ಜುಲೈ25: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಭರಮಸಾಗರ ಶಿಶು ಅಭಿವೃದ್ದಿ ಯೋಜನಾಧಿಕಾರಿ ಕಚೇರಿ, ತುರುವನೂರು ಗ್ರಾಮ ಪಂಚಾಯಿತಿ,...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page