ನಾಯಕನಹಟ್ಟಿ 30: ದಾಸ ಶ್ರೇಷ್ಠ ಕನಕದಾಸರು ಕೀರ್ತನೆಗಳ ಮೂಲಕ ಸಮಾಜವನ್ನು ಪರಿವರ್ತನೆ ಮಾಡಿದ ಕೀರ್ತಿ ಭಕ್ತ ಕನಕದಾಸರಿಗೆ ಸಲ್ಲುತ್ತದೆ ಎಂದು ಗೌಡಗೆರೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಟಿ ರಂಗಪ್ಪ ಹೇಳಿದ್ದಾರೆ.
ಹೋಬಳಿ ಗೌಡಗೆರೆ ಗ್ರಾಮದ ಶ್ರೀ ಕನಕ ಯುವಕ ಸಂಘದ ವತಿಯಿಂದ ದಾಸ ಶ್ರೇಷ್ಠ ಕನಕದಾಸರ 536ನೇ ಕನಕದಾಸರ ಜಯಂತೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು. ಸಮಾಜವನ್ನು ಕೀರ್ತನೆಗಳ ಮೂಲಕ ಪರಿವರ್ತನೆ ಮಾಡಿದ ಕೀರ್ತಿ ಕನಕದಾಸರದು
ಕನಕದಾಸರು ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಬಾಡ ಗ್ರಾಮದಲ್ಲಿ 1509ರಲ್ಲಿ ಕುರುಬ ಜನಾಂಗಕ್ಕೆ ಸೇರಿದ ಬಚ್ಚಮ್ಮ ಮತ್ತು ಬೀರಪ್ಪನಾಯಕ ಎಂಬ ದಂಪತಿಗಳ ಮಗನಾಗಿ ಜನಿಸಿದರು ಕನಕದಾಸರು ಬರೀ ಕುರುಬ ಜಾತಿಗೆ ಸೀಮಿತವಾದ ಭಕ್ತರಲ್ಲ ಎಲ್ಲಾ ಜಾತಿಗಳಿಗೆ ಬೇಕಾದವರು 15 ಮತ್ತು 16ನೇ ಶತಮಾನದಲ್ಲಿ ಜಾತಿ ವ್ಯವಸ್ಥೆಯ ಬಗ್ಗೆ ಸಮರ ಸಾರಿದ ಕೀರ್ತಿ ಕನಕದಾಸರಿಗೆ ಸಲ್ಲುತ್ತದೆ ಎಂದರು.
![](https://janadhwani.in/wp-content/uploads/2023/11/IMG-20231130-WA0200-1.jpg)
ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಟಿ ರಂಗಪ್ಪ, ಸದಸ್ಯರಾದ ಶಾಂತಮ್ಮ, ಗಿಣಿಯರ್ ತಿಪ್ಪೇಶ್, ಮಂಜಕ್ಕ ಆರ್ ತಿಪ್ಪೇಸ್ವಾಮಿ, ಗೌಡಗೆರೆ ಗ್ರಾಮದ ಯುವ ನಾಯಕ ಜಿ ಟಿ ತಿಪ್ಪೇಸ್ವಾಮಿ. ಹಾಗೂ ಶ್ರೀ ಕನಕ ಯುವಕ ಸಂಘದ ಅಧ್ಯಕ್ಷರು ಉಪಾಧ್ಯಕ್ಷರು ಸರ್ವ ಸದಸ್ಯರು ಮತ್ತು ಗೌಡಗೆರೆ ಗ್ರಾಮದ ಸಮಸ್ತ ಗ್ರಾಮಸ್ಥರು ಇದ್ದರು
0 Comments