ಚಳ್ಳಕೆರೆ ಜ.10.ಅಯೋಧ್ಯೆಯ ಶ್ರೀ ರಾಮಮಂದಿರದಲ್ಲಿ ಜ. 22 ರಂದು ನಡೆಯಲಿರುವ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ನಿಮಿತ್ತ ಮನೆ ಮನೆಗೆ ಶ್ರೀರಾಮನ ಆಶೀರ್ವಾದ ಕಾರ್ಯಕ್ರಮಕ್ಕೆ ಅಕ್ಷತೆಯನ್ನು ಮನೆ ಮನೆಗೆ ವಿತರಣೆ ಮಾಡಿದರು
ಚಳ್ಳಕೆರೆ ತಾಲೂಕೀನ ಗೋಪನಹಳ್ಳಿ ಗ್ರಾಮದಲ್ಲಿ ಶ್ರೀರಾಮ ಭಕ್ತರು ಗ್ರಾಮದ ಪ್ರತಿ ಮನೆಗಳಿಗೆ ಅಕ್ಷತೆಯನ್ನು ವಿತರಣೆ ಮಾಡಿದರು.
ಶ್ರೀ ಆಂಜನೇಯ ದೇವಸ್ಥನದ ಅರ್ಚಕ ರಂಗಸ್ವಾಮಿ ಜನಧ್ವನಿ ಡಿಜಿಟಲ್ ಮೀಡಿಯಾದೊಂದಿಗೆ ಮಾತನಾಡಿ ಜ. 22 ರಂದು ಅಯೋಧ್ಯೆಯಲ್ಲಿ ನೂತನ ಶ್ರೀರಾಮ ಮಂದಿರ ಉದ್ಘಾನೆಗೊಳ್ಳಲಿದ್ದು ಅಂದು ಗೋಪನಹಳ್ಳಿ ಗ್ರಾಮದ ಶ್ರೀ ಆಂಜನೇಯ ದೇವಸ್ಥಾನದಲ್ಲಿ ಬೆಳಗ್ಗೆ 11 ಗಂಟೆಗೆ ಅಂದರೆ ಅಯೋದ್ಯೆಯಲ್ಲಿ ಉದ್ಘಾಟನೆ ಸಮಯಕ್ಕೆ ಶ್ರೀರಾಮಭಕ್ತ ಆಂಜನೇಯನಿಗೆ ವಿಶೇಷ ಪೂಜೆ ಸಲ್ಲಿಸಲಿದ್ದು ಮನೆ ಮನೆಗೆ ನೀಡಿದ ಅಕ್ಷತೆಯನ್ನು ಜಗುಲಿ ಮೇಲಿಟ್ಟು ನಿತ್ಯ ಪೂಜೆ ಮಾಡಿ ಪ್ರಾಣ ಪ್ರತಿಷ್ಠಾಪನೆ ದಿನದಂದು ಮನೆಯ ಹಿರಿಯರಿಂದ ಕಿರಿಯರ ತಲೆ ಮೇಲೆ ಈ ಅಕ್ಷತೆ ಹಾಕಿ ಆಶೀರ್ವದಿಸಿದರೆ ಶ್ರೀರಾಮನ ಆಶೀರ್ವಾದ ದೊರತಂತೆ ಎಂದರು. ಗ್ರಾಮದ ಪ್ರತಿ ಮನೆಗಳಿಗೆ ಅಕ್ಷತೆ ಕಾಳಿನ ಜತಗೆ ಆಯೋದ್ಯೆ ಶ್ರೀ ರಾಮಮಂದಿರದ ಫೋಟೊ ಕರಪತ್ರ ವಿತರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
0 Comments