ಹಿರಿಯೂರು :
ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನಿಗದಿತ ಸಮಯದಲ್ಲಿ ಗುಣಮಟ್ಟವನ್ನು ಕಾಪಾಡಿಕೊಂಡು ಕಾಮಗಾರಿಗಳನ್ನು ನಡೆಸಬೇಕು ಎಂಬುದಾಗಿ ಕ್ಷೇತ್ರದ ಶಾಸಕಿ ಶ್ರೀಮತಿ ಪೂರ್ಣಿಮಾ ಶ್ರೀನಿವಾಸ್ ಗುತ್ತಿಗೆದಾರರು ಹಾಗೂ ಅಧಿಕಾರಿಗಳಿಗೆ ಕರೆ ನೀಡಿದರು.
ನಗರದ ಹುಳಿಯಾರು ರಸ್ತೆಯಲ್ಲಿ 2020-21 ನೇ ಸಾಲಿನ 15 ನೇ ಹಣಕಾಸು ಯೋಜನೆಯಡಿ ನಗರದಲ್ಲಿ ಗಾಂಧಿವೃತ್ತದಿಂದ ಹುಳಿಯಾರು ರಸ್ತೆಯ ವೇದಾವತಿ ಪ್ರಥಮ ದರ್ಜಿ ಕಾಲೇಜುವರೆಗೆ ರಸ್ತೆ ಅಗಲೀಕರಣದ ಪ್ರಯುಕ್ತ ನೀರು ಸರಬರಾಜು ಮಾಡುವ ಮುಖ್ಯಕೊಳವೆ ಮತ್ತು ವಿತರಣಾ ಕೊಳವೆಗಳನ್ನು 94 ಲಕ್ಷ ರೂಗಳ ವೆಚ್ಚದಲ್ಲಿ ಅಳವಡಿಸುವ ಕಾರ್ಯಕ್ಕೆ ಭೂಮಿಪೂಜೆ ನೆರವೇರಿಸಿ, ಅವರು ಮಾತನಾಡಿದರು.
ಕ್ಷೇತ್ರದ ಮತದಾರರ ಆಶೀರ್ವಾದದಿಂದ ಶಾಸಕಿಯಾದ ನಂತರ ಜನತೆಯ ಆಶಯಕ್ಕೆ ಅನುಗುಣವಾಗಿ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮಾಡಿದ್ದೇನೆ ಎಂದರಲ್ಲದೆ, ವಿಧಾನಸಭೆ ಕಲಾಪದಲ್ಲಿ ಕ್ಷೇತ್ರದ ಜ್ವಲಂತ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನಕ್ಕೆ ತಂದು ಅಗತ್ಯ ಪರಿಹಾರ ಕಂಡುಕೊಂಡಿದ್ದೇನೆ ಎಂಬುದಾಗಿ ಹೇಳಿದರು.
ನಗರದ ಬಹುದಿನಗಳ ಬೇಡಿಕೆಯಾಗಿದ್ದ ಒಳಚರಂಡಿ ವ್ಯವಸ್ಥೆಗೆ ಅನುಮೋದನೆ ಸಿಕ್ಕಿದ್ದು, ಈಗಾಗಲೇ 600 ಕೋಟಿ ಬಿಡುಗಡೆಯಾಗಿ ಸರ್ವೇ ಕಾರ್ಯ ನಡೆಸಿ, ಟೆಂಡರ್ ಹಂತದಲ್ಲಿದೆ, ಬರೀ ಆಶ್ವಾಸನೆಗೆ ಸೀಮಿತವಾಗಿದ್ದ, ನಗರದ ಹಕ್ಕುಪತ್ರ ರಹಿತರಿಗೆ ಹಕ್ಕುಪತ್ರ ವಿತರಣೆ ಮಾಡಲು ಕ್ರಮಕೈಗೊಂಡು ಅಧಿಕಾರಿಗಳಿಂದ ಸರ್ವೇಕಾರ್ಯ ಪೂರ್ಣಗೊಂಡು ಶೀಘ್ರದಲ್ಲೇ ವಿತರಿಸಲಾಗುವುದು ಎಂಬುದಾಗಿ ಹೇಳಿದರು.
ನಗರಸಭಾ ಸದಸ್ಯರಾದ ಎಂ.ಡಿ.ಸಣ್ಣಪ್ಪ ಮಾತನಾಡಿ, ನಗರಸಭೆಯ ಅಧಿಕಾರಿಗಳು ಪೈಪ್ ಲೈನ್ ಕಾಮಗಾರಿ ನಡೆಯುವ ಸ್ಥಳಗಳಲ್ಲಿ ಆಗುವ ತೊಂದರೆಗಳ ಬಗ್ಗೆ ಮೊದಲೇ ಸಾರ್ವಜನಿಕರಿಗೆ ಮಾಹಿತಿ ನೀಡಿ, ಆಗುವ ತೊಂದರೆಗಳಿಗೆ ಪರ್ಯಾಯ ವ್ಯವಸ್ಥೆ ಮಾಡಿ ಕೆಲಸ ಪೂರ್ಣವಾಗುವಂತೆ ನೋಡಿಕೊಳ್ಳಬೇಕು, ಈ ನಿಟ್ಟಿನಲ್ಲಿ ಸಾರ್ವಜನಿಕರ ಸಹಕಾರ ತೆಗೆದುಕೊಳ್ಳಬೇಕು ಎಂಬುದಾಗಿ ಹೇಳಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಗೀತಾ ಗಂಗಾಧರ, ಸದಸ್ಯರುಗಳಾದ ಸಣ್ಣಪ್ಪ, ಮೇಶ್ ಪಲ್ಲವ, ಮಂಜುಳಾ, ದೇವೀರಮ್ಮ ರಾಜಣ್ಣ, ಬಾಲಕೃಷ್ಣ, ಸರವಣ, ಚಿರಂಜೀವಿ ನಿತ್ಯಾನಂದ, ಕೇಶವಮೂರ್ತಿ, ಮುಖಂಡರಾದ ಮಂಜುಳಾ, ಮಹಾಂತೇಶ್, ಪ್ರದೀಪ್, ದಿನೇಶ್ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments