ಚಳ್ಳಕೆರೆ ಜೂ.7 ಈಗಾಗಲೆ ರೈತರ ಸಂಕಷ್ಟದಲ್ಲಿದ್ದು ಸಕಾಲಕ್ಕೆ ಮಳೆ ಬಂದಿರುವುದರಿಂದ ರೈತರು ಬಿತ್ತನೆ ಮಾಡಿಕೊಳ್ಳು ಮುಂದಾಗಿದ್ದಾರೆ ಕಳಪೆ ಗುಣಮಟ್ಟದ ಬಿತ್ತನೆ ಬೀಜ.ಗೊಬ್ಬರ ಕೃಷಿ ಪರಿಕರಗಳನ್ನು ರೈತರಿಗೆ ಮಾರಾಟ ಮಾಡುವಂತೆ ಜಂಟಿ ಕೃಷಿ ನಿರ್ದೇಶಕ ಡಾ.ಮಂಜುನಾಥ್ ಕಿವಿ ಮಾತು ಹೇಳಿದರು.
ನಗರ ಕೃಷಿ ಉಪನಿರ್ದೇಶಕರ ಕಚೇರಿ ಸಭಾಂಗಣದಲ್ಲಿ ಕೃಷಿ ಇಲಾಖೆ ವತಿಯಿಂದ ಕೃಷಿ ಪರಿಕರಗಳ ಮಾರಾಟಗಾರರಿಗೆ ಆಯೋಜಿಸಿದ್ದ ‘ರಸ ಗೊಬ್ಬರ, ಬಿತ್ತನೆ ಬೀಜ ಮತ್ತು ಕೀಟನಾಶಕ ಕಾಯ್ದೆ ಹಾಗೂ ನಿಯಮಗಳ ಪಾಲನೆ’ ಕುರಿತ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಕಳಪೆ ಕೀಟನಾಶಕ, ರಾಸಾಯನಿಕ ಗೊಬ್ಬರಗಳ ಬಳಕೆಯಿಂದ ಕೃಷಿಯ ಮೇಲೆ ಅಡ್ಡ ಪರಿಣಾಮ ಉಂಟಾಗುತ್ತದೆ. ಅನಧಿಕೃತ ಕಂಪನಿಗಳ ಮಾತು ಕೇಳಿ ಕಾನೂನು ಬಾಹಿರವಾಗಿ ಮಾರಾಟ ಮಾಡಲು ಮುಂದಾಗುತ್ತಾರೆ. ಇಂತಹ ಚಟುವಟಿಕೆಗಳಿಂದ ಮಾರಾಟಗಾರರು ದೂರ ಇರಬೇಕು. ರೈತರಿಗೆ ಅನುಕೂಲವಾಗುವ ಕ್ರಮ ಕೈಗೊಳ್ಳಬೇಕು. ರೈತರು ಕೃಷಿ ವಿಜ್ಞಾನಿಗಳ ಮಾತಿಗಿಂತ, ರಸಗೊಬ್ಬರ ಹಾಗೂ ಕೃಷಿ ಪರಿಕರಗಳ ಸಗಟು ವ್ಯಾಪಾರಸ್ಥರ ಮಾತಿಗೆ ಮಹತ್ವ ನೀಡುತ್ತಾರೆ. ಹೀಗಾಗಿ ರೈತರಿಗೆ ಅನ್ಯಾಯ ಮಾಡಬಾರದು’ ಎಂದು ತಿಳಿಸಿದರು.
ಸಹಾಯಕ ಕೃಷಿ ನಿರ್ದೇಶಕ ಡಾ.ಅಶೋಕ್ ಮಾತನಾಡಿ ಕೃಷಿ ಚನ್ನಾಗಿದ್ದರೆ ಉತ್ತಮ ಭವಿಷ್ಯ ನಿಮ್ಮ ಮಾತ್ರವೂ ಸಹ ಮುಖ್ಯ ವಾಗಿದ್ದು ಉತ್ತಮ ಬೀಜ.ಗೊಬ್ಬರ.ಔಷಧಿವಿತರಣೆಯನ್ನು ಬಿತ್ತನೆ ಬೀಜ ಕಾಯ್ದೆಯಡಿಯಲ್ಲಿ ವಿತರಣೆಮಾಡಬೇಕು ಹೆಚ್ಚಿನ ಬೆಲೆದಾಸೆಗೆ ಕೃತಕ ಅಭಾ ಸೃಷ್ಠಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವಂತಿಲ್ಲ ಪಿಒಎಸ್ ಮೂಲಕ ಮಾರಾಟ ಮಾಡಬೇಕು ದಾಸ್ತನು .ಕಳಪೆ ಗೊಬ್ಬರ ಔಷದಿ ವಿತರಣೆ ಮಾಡುವಾಗ ಆಧಾರ್ ಕಾರ್ಡ್ ಪಡೆದು ವಿತರಣೆ ಮಾಡ ಬೇಕು ರೈತರ ಬೆಳೆಗಳಿಗೆ ರೋಗ ಬಿದ್ದಾಗ ಔಷಧಿ ಕೇಳಲು ಬಂದಾಗ ಪರಿಶೀಲನೆ ಮಾಡಿ ಕೊಡ ಬೇಕು ಔಷಧಿ ಸಿಂಪರಣೆ ಬಗ್ಗೆ ರೈತರಿಗೆ ಮಾಹಿತಿ ನೀಡ ಬೇಕು ಸರಕಾರದ ರಿಯಾಯಿತಿ ದರದಲ್ಲಿ ಗೊಬ್ಬರ ಔಷಧಿ ಮಾರಾಟ ಮಾಡುತ್ತಿರುವೂ ಸಹ ನೀವು ಸರಕಾರದ ಒಂದು ಅಂಗವಾಗಿರುತ್ತೀರಿ ರೈತರಿಂದ ಬಿತ್ತನೆ ಬೀಜ ಗೊಬ್ಬರದ ಬಗ್ಗೆ ರೈತರಿಂದ ದೂರುಗಳು ಬರದಂತೆ ವಿತರಣೆ ಮಾಡುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಕೃಷಿ ಉಪನಿರ್ದೇಶಕ ಡಾ.ಪ್ರಭಾಕರ್. ಗೊಬ್ಬರ ಬೀಜ ವಿತರಕರ ಸಂಘದ ಅಧ್ಯಕ್ಷ ಜಗದೀಶ್ ಮಾತನಾಡಿದರು . ಗೊಬ್ಬರ ಬೀಜ ವಿತರಕರ ಸಂಘದ ಉಪಾಧ್ಯಕ್ಷ ಮಂಜುನಾಥ್. ಕೃಷಿ ತಾಂತ್ರಿಕ ಅಧಿಕಾರಿ ಇತರರಿದ್ದರು
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments