ಚಳ್ಳಕೆರೆ ಸೆ.21.ಆಕಸ್ಮಿಕವಾಗಿ ಗುಡಿಸಲಿಗೆ ಬೆಂಕಿಬಿದ್ದು ಅಪಾರ ನಷ್ಟವಾದ ಕುಟುಂಬಕ್ಕೆ ಜಪಾನಂದಸ್ವಾಮಿಗಳು ನೆರವು ನೀಡಿದ್ದಾರೆ.
ಚಳ್ಳಕೆರೆ ತಾಲ್ಲೂಕಿನ ನನ್ನಿವಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವರವಿನಾರಹಟ್ಟಿಯ ಭಾಗ್ಯಮ್ಮ ಮತ್ತು ಪಾಪಯ್ಯ ಇವರ ವಾಸದ ಗುಡಿಸಲು ಬುಧವಾರ. ಸಂಜೆ ಬೆಂಕಿ ಬಿದ್ದು ದವಸ ಧಾನ್ಯ.ಬಟ್ಟೆ .ಹಣ ಸುಮಾರು ,70ರಿಂದ80 ಸಾವಿರ ರೂ ನಷ್ಟವಾಗಿ ಕುಟುಂಬ ಬೀದಿಗೆ ಬೀಳುವಂತಾಗಿತ್ತು.
ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ರಾಮಕೃಷ್ಣ ಮಠದ ಜಪಾನಂದ ಸ್ವಾಮಿಗಳು ನಿರಾಶ್ರಿತ ಕುಟುಂಬಕ್ಕೆ .10 ಸಾವಿರ ರೂ ಬಟ್ಟೆ ಪಾತ್ರೆ, ದಿನಬಳಕೆ ವಸ್ತುಗಳನ್ನು, ಬೆಡ್ಶೀಟ್, ಸೊಳ್ಳೆ ಪರದೆ ಹಾಗೂ ಟಾರ್ಪಾಲುಗಳನ್ನು ತತ್ಕ್ಷಣ ಪರಿಹಾರವಾಗಿ ನೀಡಿರುತ್ತಾರೆ.ಅದೇ ರೀತಿ ನನ್ನಿವಾಳ ಗ್ರಾಪಂ ವತಿಯಿಂದ 5 ಸಾವಿರ ರೂಗಳಮ್ನು ಪರಿಹಾರವಾಗಿ ನೀಡಿದ್ದಾರೆ ಇನ್ನು ಹೆಚ್ಚಿನ ನೆರವು ನೀಡುವುದಾಗಿ ಜಪಾನಂದ ಸ್ವಾಮಿಗಳು ನಿರಾಶ್ರಿತ ಕುಟುಂಬಕ್ಕೆ ಅಭಯ ನೀಡಿದ್ದಾರೆ.
0 Comments