ಚಳ್ಳಕೆರೆ ಸ.8 ಗರ್ಭಿಣಿ ಬಾಣಂತಿ ಹಾಗೂ ಅಂಗನವಾಡಿ ಕೇಂದ್ರಗಳಿಗೆ ಬರುವ ಮಕ್ಕಳಿಗೆ ಗುಣಮಟ್ಟದ ಪೌಷ್ಠಿಕ ಆಹಾರ ಪದಾರ್ಥಗಳನ್ನು ನೀಡಬೇಕು ಎಂದು ಗ್ರಾಪಂ ಅಧ್ಯಕ್ಷ ಓಬಣ್ಣ ಹೇಳಿದರು. ತಾಲೂಕಿನ ಗೌರಸಮುದ್ರಗ್ರಾಪಂ ಕಚೇರಿಯಲ್ಲಿ ಶಿಶು ಅಭಿವೃದ್ಧಿ ಇಲಾಖೆ ಹಾಗೂ ಗ್ರಾಮಪಂಚಾಯತ್ ವತಿಯಿಂದ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಗರ್ಭಿಣಿ ಬಾಣಂತಿಯರಿಗೆ ಆಯೋಜಿಸಿದ್ದ ಪೋಷಣ ಮಹಾಸಾಚರಣೆ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಅಂಗನಾಡಿ ಕೇಂದ್ರಗಳು ಆರೋಗ್ಯ ಕೇಂದ್ರಗಳಿದ್ದಾಗೆ ಗರ್ಭಿಣಿಯರಿಗೆ ಗುಣ ಮಟ್ಟದ ಪೌಷ್ಠಿಕ ಆಹಾರ ನೀಡುವ ಜತೆಗೆ ಮಗುವಿನ ಬೆಳವಣಿಗೆ ಬಗ್ಗೆ ಮಹಿಳೆಯರಿಗೆ ಆರೋಗ್ಯ ಸಲಹೆಯಗಳನ್ನು ನೀಡಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿರುವ ಅಂಗನವಾಡಿ ಕಾರ್ಯಕರ್ತಯರು ಗರ್ಭಿಣಿ.ಬಾಣಂತಿಯರು ಹಾಗೂ ಗ್ರಾಪಂ ಸದಸ್ಯ ಶಶಿಕುಮಾರ್ ಬಾಣಂತಿಯರು ಮತ್ತು ಮಕ್ಕಳ ಪೌಷ್ಟಿಕಾಂಶ ಉಳ್ಳ ದಾವಸ ಧಾನ್ಯಗಳನ್ನು ಅನಾವರಣ ಮಾಡಿ ಬಾಣಂತಿಯರಿಗೆ ಮತ್ತು ಮಕ್ಕಳಿಗೆ ವಿತರಿಸಿದರು. ಯಶೋದಮ್ಮ ಸಣ್ಣಕ್ಕ ಸಾವಿತ್ರಮ್ಮ ನಿರ್ಮಲ ಶಿವಮ್ಮ ಮಂಜಮ್ಮ ಆಶಾ ರೋಜಾ ಸುಮಿತ್ರಮ್ಮ
ಗ್ರಾಪಂ ಕಾರ್ಯದರ್ಶಿ ಕೊರ್ಲಾಯ ಇತರರಿದ್ದರು.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments