ಚಳ್ಳಕೆರೆಜನಧ್ವನಿ ವಾರ್ತೆ ಮಾ 10
ತಾಲೂಕಿನ ಹೊಟ್ಟೆಪ್ಪನಹಳ್ಳಿ ಗ್ರಾಮದ ಹೊರವಲಯ ತಿಮ್ಮನಮಟ್ಟಿ
ಮಾ.೧೮ರಂದು ಶ್ರೀಲಕ್ಷಿö್ಮ ನರಸಿಂಹ ಸ್ವಾಮಿಯ ಅಪ್ಪಣೆಯಂತೆ ಶುಭಕೃತುನಾಮ ಪಾಲ್ಗುಣ ಮಾಸ ಫೆ.೧೮ರಂದು ಪಾವಗಡ ತಾಲೂಕಿನ ವದುನಕಲ್ಲು ಗ್ರಾಮದ ಶ್ರೀಬ್ರಹ್ಮೇಂದ್ರಚಾರ್ ಇವರ ನೇತೃತ್ವದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗಿದೆ.
ಅಂದು ಬೆಳಿಗ್ಗೆ ೬ ಗಂಟೆಗೆ ಗಂಗಾಪೂಜೆ, ರಾತ್ರಿ ೧೧ ಗಂಟೆಗೆ ದೇವರ ಪಾದಗಳಿಗೆ ಅಭಿಷೇಕ ಮತ್ತು ಪ್ರಾಣಪ್ರತಿಷ್ಠಾಪನೆ. ಮಾ.೧೯ರಂದು ಮುಂಜಾನೆ ೩ ಗಂಟೆಗೆ ಹೋಮ ಹವನ, ಸೂರ್ಯೋದಯದಲ್ಲಿ ತುಳಸಿ ಮಾಲೆ, ಕಮಲಾಕ್ಷಿ ಮಣಿಮಾಲೆ, ಸ್ವಾಮಿಗೆ ದಶಮುಖ ರುದ್ರಾಕ್ಷಿಧಾರಣೆ ನಡೆಸಿದ ಬಳಿಕ ಬೆಳಿಗ್ಗೆ ೮ ಗಂಟೆಗೆ ಮಹಾಮಂಗಳಾರತಿ ಬೆಳಿಗ್ಗೆ ೧೦-೩೦ಕ್ಕೆ ಭಕ್ತರಿಗೆ ಅನ್ನಸಂತರ್ಪಣೆ ನಡೆಯಲಿದೆ ಎಂದು ಕಾರ್ಯಕ್ರಮ ಆಯೋಜಕರು ತಿಳಿಸಿದ್ದಾರೆ.
ಹಿನ್ನೆಲೆ: ಹೊಟ್ಟೆಪ್ಪನಹಳ್ಳಿ ಗ್ರಾಮದ ಕೆಂಚಪ್ಪ, ಶಿವಮ್ಮ ಎಂಬ ದಂಪತಿಗಳಿಗೆ ಕೆ. ಉಜ್ಜಿನಪ್ಪ, ಕೆ.ಸಿದ್ದೇಶ ಅವಳಿ ಜವಳಿ ಮಕ್ಕಳ ಜತೆಗೆ ಎಚ್.ಕೆ.ಸ್ವಾಮಿ, ಎಚ್.ಕೆ. ಶಿವರಾಜ್ ಒಟ್ಟು ನಾಲ್ಕು ಜನ ಮಕ್ಕಳು. ಇದರಲ್ಲಿ ಉಜ್ಜಿನಪ್ಪ ಎಂಬುವರಿಗೆ ಕೊಲ್ಲಾಪುರದ ಮಹಾಲಕ್ಷಿö್ಮ ಒಲಿದು ಮೈಮೇಲೆ ಬರುತ್ತಿತ್ತು ಎನ್ನಲಾಗಿದೆ.
ಕುಟುಂಬದಲ್ಲಿನ ತಮ್ಮ ಎಚ್.ಕೆ.ಸ್ವಾಮಿ ದೇವರು ಮೈಮೇಲೆ ಬರುವ ವಿಚಾರವನ್ನು ಸಂಪೂರ್ಣವಾಗಿ ವಿರೋಧಿಸುತ್ತಾ, ಈ ಕಾಲದಲ್ಲೂ ದೇವರು ಮೈಮೇಲೆ ಬರುವುದು ಸಾಧ್ಯವೇ? ಅಂತಹ ದೈವಭಕ್ತಿ ಇದ್ದಲ್ಲಿ ಪ್ರತ್ಯಕ್ಷವಾಗಿ ಕಾಣಿಸಿಕೊಳ್ಳಲಿ ಮತ್ತು ಮನೆಯಲ್ಲಿ ಯಾರನ್ನೂ ಒಂದು ಮಾತು ಅನ್ನದ ಮುಗ್ಧ ಮನಸ್ಸಿನ ಶಿವರಾಜ್ ನಮ್ಮ ತಮ್ಮ ಸಾಯುವುದನ್ನು ದೇವರು ತಪ್ಪಿಸಬಹುದಿತ್ತಲ್ಲವೆ? ಎಂದು ಮಾತನಾಡಿಕೊಂಡು ಗಡ್ಡ, ಕೂದಲು ಬಿಟ್ಟುಕೊಂಡು ಮನೆಯಲ್ಲೂ ಸರಿಯಾಗಿ ನಿಲ್ಲದ ಎಚ್.ಕೆ.ಸ್ವಾಮಿ ಅಂತಹ ದೈವತ್ವ ಇದ್ದಲ್ಲಿ ಆ ದೇವರೇ ಕಾಣಿಸಿಕೊಳ್ಳಲಿ ಎಂದು ಸುತ್ತಾಡುತ್ತಿದ್ದ ಈ ಎಚ್.ಕೆ. ಸ್ವಾಮಿಗೆ ದೇವರ ಪಾದಗಳು ೨೦೧೮ರಲ್ಲಿ ಗೋಚರಿಸಿರುವುದು ಒಂದು ಕಾಕತಾಳೀಯ ಅನಿಸುತ್ತದೆ.
ಗ್ರಾಮದ ಹೊರವಲಯ ತಿಮ್ಮನಮಟ್ಟಿ ಗಡ್ಡೆಯಲ್ಲಿ ಶ್ರೀನರಸಿಂಹಸ್ವಾಮಿಯ ಬಲಪಾದ ಇರುವ ಶಿಲೆಯ ಪಕ್ಕದಲ್ಲೆ ಲಕ್ಷಿö್ಮ ದೇವಿಯ ಎರಡು ಪಾದ ಸೇರಿ ಇವುಗಳ ಮೇಲ್ಭಾಗದಲ್ಲಿ ಪ್ರಹ್ಲಾದನ ಪಾದ ಮತ್ತು ಆನೆ ಗುರುತು ಇರುವ ಶಿಲಾಮೂರ್ತಿ ಕಾಣಿಸಿಕೊಂಡಿದೆ. ಇದನ್ನು ಅಪಾರವಾಗಿ ನಂಬಿದ ಕುಟುಂಬ ಕೆ.ಉಜ್ಜಿನಪ್ಪ ಎಂಬ ಮಗನನ್ನು ಈ ಮೂರ್ತಿಗಳಿಗೆ ಪೂಜೆ ಮಾಡಲು ನಿಯೋಜಿಸಿದ್ದಾರೆ. ಇದರಂತೆ ಪಾದಗಳ ಶಿಲಾಮೂರ್ತಿಗೆ ಚಿಕ್ಕದಾದ ಕಟ್ಟೆ ಮತ್ತು ಗುಡಿ ಮಾಡಿಕೊಂಡು ಪ್ರತಿದಿನ ಪೂಜೆ ಜತೆಗೆ ಶನಿವಾರ ನಡೆಯುವ ವಿಶೇಷ ಪೂಜೆಗೆ ಭಕ್ತರು ಸೇರುವ ವಾಡಿಕೆ ಕಂಡು ಬರುತ್ತಿದೆ. ಇದೇ ಸ್ಥಳದಲ್ಲಿ ದೇವರ ಪಾದಗಳ ಪ್ರಾಣ ಪ್ರತಿಷ್ಠಾಪನಾ ಕಾರ್ಯ ಮಾ.೧೮ ಮತ್ತು ೧೯ರಂದು ನಡೆಯಲಿದೆ. ಇಲ್ಲಿಗೆ ಬರುವ ಭಕ್ತರ ಅನುಕೂಲಕ್ಕೆ ಮೂಲಸೌಕರ್ಯಗಳ ಅಗತ್ಯವಿದೆ.
ದೇವರ ಪಾದಗಳು ಗೋಚರವಾದಗಿನಿಂದ ವಿಶೇಷ ಪೂಜೆ ಮಾಡುತ್ತಾ ಬಂದಿದ್ದೇವೆ. ಪ್ರತಿ ಶನಿವಾರ ನಡೆಯುತ್ತಿರುವ ಪೂಜಾಕಾರ್ಯಕ್ಕೆ ಸುತ್ತಮುತ್ತಲ ಗ್ರಾಮಗಳಿಂದ ಬರುವ ಭಕ್ತರಿಗೆ ಲಕ್ಷಿö್ಮನರಸಿಂಹಸ್ವಾಮಿ ಹೇಳಿಕೆ ನೀಡುವ ಸ್ಥಳವಾಗಿದೆ. ಕೆಲವರಿಗೆ ದೇವರ ಹೇಳಿಕೆಯಂತೆ ಇಷ್ಟಾರ್ಥಗಳು ನೆರವೇರುವ ನಂಬಿಕೆಯೂ ಇದೆ. ಆದ್ದರಿಂದ ಈ ಪೂಜ್ಯ ಸ್ಥಳದಲ್ಲಿ ಹಿರಿಯರ ಮಾರ್ಗದರ್ಶನದಂತೆ ವಿಶೇಷ ಪೂಜಾ ಕಾರ್ಯದೊಂದಿಗೆ ಪಾದಗಳ ಅಭಿಷೇಕ ಮತ್ತು ಪ್ರಾಣಪ್ರತಿಷ್ಠಾಪನೆ ಕಾರ್ಯ ಹಮ್ಮಿಕೊಳ್ಳಲಾಗಿದೆ- ಕೆ. ಉಜ್ಜಿನಪ್ಪ, ಪೂಜಾರಿ
0 Comments