ಚಳ್ಳಕೆರೆ: ತಾಲ್ಲೂಕಿನ ಗಡ್ಡದಾರಹಟ್ಟಿ ಸಮೀಪ ದೇವರ ಎತ್ತುಗಳನ್ನು ಮೆರೆಸುವ ಮೂಲಕ ಬುಲ್ಲುಡ್ಲು ಬೋರಲಿಂಗೇಶ್ವರಸ್ವಾಮಿ ಜಾತ್ರೆಯನ್ನು ಸಡಗರ ಸಂಭ್ರಮದಿಂದ ಆಚರಣೆ ಮಾಡಿದರು.
ಗಡ್ಡದಾರಹಟ್ಟಿ ಸಮೀಪವಿರುವ ಬುಲ್ಲುಡ್ಲು ಬೋರಲಿಂಗೇಶ್ವರಸ್ವಾಮಿ ದೇವಾಲಯದ ಮುಂಭಾಗದಲ್ಲಿ ಭಾನುವಾರ ಮುಂಜಾನೆ ಗೋಪಾಲಕರು ಪುವಲಿ ಕಲ್ಲ(ಹೂವಿನ ಕಳ್ಳೆ)ಯಿಂದ ದೇವರ ಪದಿಗಳನ್ನು ನಿರ್ಮಿಸಿ, ದೇವರ ಎತ್ತಿನ ಗೂಡಿನಿಂದ ದೇವರ ರಾಸುಗಳನ್ನು ಉರಿಮೆ ವಾದ್ಯಗಳೊಂದಿಗೆ ದೇವರ ಪದಿಗಳ ಬಳಿಗೆ ಹೊಡೆದು ತಂದಾಗ ಭಕ್ತಾಧಿಗಳಿಂದ ವಿಶೇಷ ಪೂಜೆಗಳು ಆರಂಭವಾಗುತ್ತವೆ.
ಭಾನುವಾರ ರಾತ್ರಿ ದೇವರ ರಾಸುಗಳೊಂದಿಗೆ ದೇವರ ಪದಿಗಳ ಬಳಿ ವಾಸ್ತವ್ಯ ಮಾಡಲು ಭರುವ ಬರುವ ಭಕ್ತಾಧಿಗಳು ದೇವರಾಸುಗಳಿಗೆ ಎಂಜಲು ಮಾಡದ ತುಂಬಿದ ಕೊಡದ ನೀರು ಬಳಿಸಿ ತಯಾರಿಸಿಕೊಂಡು ಬಂದ ರೊಟ್ಟಿ ಕೊಟ್ಟು ತಮ್ಮ ಭಕ್ತಿ ಸಮರ್ಪಿಸಿ, ದೇವರ ರಾಸುಗಳೊಂದಿಗೆ ವಾಸ್ತವ್ಯ ಮಾಡುತ್ತಾರೆ.
ನಂತರ ಸೋಮವಾರ ಮಧ್ಯಹ್ನಾ ೩ ಗಂಟೆಯ ನಂತರ ದೇವರ ರಾಸುಗಳನ್ನು ದೇವರ ಪದಿಗಳ ಮುಂದೆ ದಾಸಯ್ಯರಿಂದ ಶಂಕು, ಜಾಗಟೆ ಬಾರಿಸುವ ಮೂಲಕ ಮೂರು ಭಾರಿ ಮೆರೆಸಿ, ಆಯಾ ದೇವರ ಪದಿಗಳ ಮುಂದೆ ಆಯಾ ದೇವರ ರಾಸುಗಳನ್ನು ಹೊಡೆದುಕೊಂಡು ಹೋದ ಕಿಲಾರಿಗಳ ಕರಿಯ ಕಂಬಳಿ ಹಾಕಿದಾಗ ಭಕ್ತಾಧಿಗಳು ಹೂ, ಹಣ್ಣು, ಕಾಸು ಇಟ್ಟಾಗ ಕಿಲಾರಿಗಳಿಂದ ವಿಶೇಷ ಪೂಜೆ ನಡೆಯಿತು. ತದನಂತರ ಹರಕೆ ಹೊತ್ತ ತಾಯಂದಿರು ಗೋಪಾಲಕರಿಂದ ತಮ್ಮ ಮಕ್ಕಳ ಮುಡಿ ತೆಗೆಸುತ್ತಾರೆ. ನಂತರ ಅನ್ನದಾಸೋಹ ಕಾರ್ಯಕ್ರಮ ಜರುಗಿತು.
====================================
ಗಡ್ಡದಾರಹಟ್ಟಿ ಸಮೀಪವಿರುವ ಬುಲ್ಲುಡ್ಲು ಬೋರಲಿಂಗೇಶ್ವರಸ್ವಾಮಿ ದೇವಾಲಯದ ಮುಂಭಾಗದಲ್ಲಿ ಭಾನುವಾರ ಮುಂಜಾನೆ ಗೋಪಾಲಕರು ಪುವಲಿ ಕಲ್ಲ(ಹೂವಿನ ಕಳ್ಳೆ)ಯಿಂದ ದೇವರ ಪದಿಗಳನ್ನು ನಿರ್ಮಿಸಿ, ದೇವರ ಎತ್ತಿನ ಗೂಡಿನಿಂದ ದೇವರ ರಾಸುಗಳನ್ನು ಉರಿಮೆ ವಾದ್ಯಗಳೊಂದಿಗೆ ದೇವರ ಪದಿಗಳ ಬಳಿಗೆ ಹೊಡೆದು ತಂದಾಗ ಭಕ್ತಾಧಿಗಳಿಂದ ವಿಶೇಷ ಪೂಜೆಗಳು ಆರಂಭವಾಗುತ್ತವೆ.
ಭಾನುವಾರ ರಾತ್ರಿ ದೇವರ ರಾಸುಗಳೊಂದಿಗೆ ದೇವರ ಪದಿಗಳ ಬಳಿ ವಾಸ್ತವ್ಯ ಮಾಡಲು ಭರುವ ಬರುವ ಭಕ್ತಾಧಿಗಳು ದೇವರಾಸುಗಳಿಗೆ ಎಂಜಲು ಮಾಡದ ತುಂಬಿದ ಕೊಡದ ನೀರು ಬಳಿಸಿ ತಯಾರಿಸಿಕೊಂಡು ಬಂದ ರೊಟ್ಟಿ ಕೊಟ್ಟು ತಮ್ಮ ಭಕ್ತಿ ಸಮರ್ಪಿಸಿ, ದೇವರ ರಾಸುಗಳೊಂದಿಗೆ ವಾಸ್ತವ್ಯ ಮಾಡುತ್ತಾರೆ.
ನಂತರ ಸೋಮವಾರ ಮಧ್ಯಹ್ನಾ ೩ ಗಂಟೆಯ ನಂತರ ದೇವರ ರಾಸುಗಳನ್ನು ದೇವರ ಪದಿಗಳ ಮುಂದೆ ದಾಸಯ್ಯರಿಂದ ಶಂಕು, ಜಾಗಟೆ ಬಾರಿಸುವ ಮೂಲಕ ಮೂರು ಭಾರಿ ಮೆರೆಸಿ, ಆಯಾ ದೇವರ ಪದಿಗಳ ಮುಂದೆ ಆಯಾ ದೇವರ ರಾಸುಗಳನ್ನು ಹೊಡೆದುಕೊಂಡು ಹೋದ ಕಿಲಾರಿಗಳ ಕರಿಯ ಕಂಬಳಿ ಹಾಕಿದಾಗ ಭಕ್ತಾಧಿಗಳು ಹೂ, ಹಣ್ಣು, ಕಾಸು ಇಟ್ಟಾಗ ಕಿಲಾರಿಗಳಿಂದ ವಿಶೇಷ ಪೂಜೆ ನಡೆಯಿತು. ತದನಂತರ ಹರಕೆ ಹೊತ್ತ ತಾಯಂದಿರು ಗೋಪಾಲಕರಿಂದ ತಮ್ಮ ಮಕ್ಕಳ ಮುಡಿ ತೆಗೆಸುತ್ತಾರೆ. ನಂತರ ಅನ್ನದಾಸೋಹ ಕಾರ್ಯಕ್ರಮ ಜರುಗಿತು.
0 Comments