ಚಳ್ಳಕೆರೆ ಮೇ 20 ಕನ್ನಡದ ಮೊದಲ ಪ್ರಾಧ್ಯಾಪಕರಾದ ತಳುಕಿನ ವೆಂಕಣ್ಣಯ್ಯನವರು ಜನಿಸಿದ ತವರೂರು ಚಳ್ಳಕೆರೆ,ರಾಷ್ಟ್ರಕವಿ ಕುವೆಂಪುರವರನ್ನು ಕನ್ನಡ ನಾಡಿಗೆ ಕೊಟ್ಟ, ಗುರು ಪರಂಪರೆಯೊಂದಿಗೆ ಅನೇಕ ವಿದ್ಯಾರ್ಥಿಗಳನ್ನು ತಮ್ಮ ಮನೆಯಲ್ಲಿ ಆಶ್ರಯ ನೀಡಿ ಶಿಕ್ಷಣ ನೀಡಿದ ವೆಂಕಣ್ಣಯ್ಯನವರು ಹುಟ್ಟಿದ ತವರೂರು ನಮ್ಮೂರು.
ಜಾನಪದ ಗಾರುಡಿಗ ಬೇಂದ್ರೆಯವರೊಂದಿಗೆ ಸಾಹಿತ್ಯ ಅಭಿರುಚಿಯ ಮೂಲಕ ಸಾಹಿತ್ಯ ಆಂದೋಲನವನ್ನು ಪತ್ರಗಳ ಮೂಲಕ ಹಂಚಿಕೊಂಡು ತಮ್ಮದೇ ಆದ ಸಾಹಿತ್ಯ ಸೊಗಡನ್ನು ಮೂಡಿಸಿದ ಬೆಳಗೆರೆ ಜಾನಕಮ್ಮ ನವರು ಜನಿಸಿದ ಪುಣ್ಯಭೂಮಿ,
ತ.ಸು. ಶ್ಯಾಮರಾಯರು, ತ.ರಾ.ಸುಬ್ಬರಾಯರು,ಬೆಳಗೆರೆ ಕೃಷ್ಣಶಾಸ್ತ್ರಿಗಳು,ರವಿಬೆಳಗೆರೆಯವರು….. ಈಗೆ ಕನ್ನಡ ಸಾಹಿತ್ಯ,ಶಿಕ್ಷಣಕ್ಕೆ ನಾಡಿಗೆ ಅಪಾರ ಕೊಡುಗೆ ನೀಡಿದ ಚಳ್ಳಕೆರೆ ನಗರದ ಹೆಚ್ .ಪಿ . ಪಿ .ಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಮಂಜುನಾಥ್ ಬಿ .ಎಸ್ ರವರು ಬರದ ನಾಡಿನ ಅತ್ಯಂತ ಕಡಿಮೆ ಮಳೆ ಬೀಳುವ ವಿಜ್ಞಾನ ನಗರಿಯಲ್ಲಿ ….
ಖಾಸಗಿ ಶಾಲಾ ಕಾಲೇಜುಗಳನ್ನು ನಾಚಿಸುವಂತೆ ಇದೇ ಪ್ರಥಮ ಬಾರಿಗೆ ಕರಪತ್ರಗಳ ಮೂಲಕ ನಗರ ಹಾಗೂ ಗ್ರಾಮೀಣ ಭಾಗದ ಪ್ರತಿಯೊಬ್ಬ ಬಡ ಮಕ್ಕಳಿಗೆ ಸರಕಾರಿ ಕಾಲೇಜಿನಲ್ಲಿ ಶಿಕ್ಷಣ ಕೊಡಿಸುವ ಉದ್ದೇಶದಿಂದ ದಾಖಲಾತಿ ಆಂದೋನವನ್ನು ಹಮ್ಮಿಕೊಂಡು ಉಪನ್ಯಾಸಕ ತಂಡ ರಚಿಸಿ ಪಿಯು ಕಾಲೇಜುಗಳ ಬಳಿ ಹೋಗಿ ದಾಖಲಾತಿ ಆಂದೋಲನ ಮಾಡುವ ಮೂಲಕ ಹೆಚ್ಚು ಪ್ರಚಾರ ಮಾಡುತ್ತಿದ್ದಾರೆ.
ಶಿಕ್ಷಣವೇ ಆಸರೆಯಾಗಿರುವ ಜನರಿಗೆ ಮನೆ ಮನೆಗೆ ಉನ್ನತ ಶಿಕ್ಷಣದ ಅಭಿಯಾನವನ್ನು ನಡೆಸುವುದರ ಮೂಲಕ ಸಾಮಾಜಿಕ ಕಳಕಳಿ, ಶೈಕ್ಷಣಿಕ ಅಭಿವೃದ್ಧಿಗೆ ಹೆಚ್ಚಿನ ಪ್ರಾಧ್ಯಾನತೆ ನೀಡಿ ಶಿಕ್ಷಣದ ಜಾಗೃತಿಗೆ ಪಣತೊಟ್ಟ ಪ್ರಾಂಶುಪಾಲರಿಗೂ ಕಾರ್ಯಯೋನ್ಮುಖರಾದ ಪ್ರಾಧ್ಯಾಪಕರಿಗೂ ಕಾಲೇಜಿನ ಎಲ್ಲಾ ಕರ್ತವ್ಯ ನಿರತರಿಗೂ ಧನ್ಯವಾದಗಳು
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments