ಚಳ್ಳಕೆರೆ: ನಗರದ ಖಾಸಗಿ ಬಸ್ ನಿಲ್ದಾಣದ ಪಕ್ಕ ಬೀದಿಬದಿ ವ್ಯಾಪಾರಿಗಳು ವ್ಯಾಪಾರ ಮಾಡುವ ಸ್ಥಳದಲ್ಲಿ ಶೌಚಾಲಯ ನಿರ್ಮಾಣ ಮಾಡುವುದು ವಿರೋಧಿಸಿ ಬೀದಿಬದಿ ವ್ಯಾಪರದಾರರ ಸಂಘದಿAದ ನಗರದ ತಾಪಂ ಆವರಣದಲ್ಲಿ ಶಾಸಕ ಟಿ.ರಘುಮೂರ್ತಿಗೆ ಮನವಿ ಸಲ್ಲಿಸಿದರು.
ಸಾರ್ವಜನಿಕ ಆಸ್ಪತ್ರೆಯ ಮುಂಭಾಗ ಖಾಸಗಿ ಬಸ್ ನಿಲ್ದಾಣ ಪಕ್ಕ ಹಳೆ ಉದ್ಯಾನವನದ ಸ್ಥಳದಲ್ಲಿ ಸುಮಾರು 150 ಬೀದಿಬದಿ ವ್ಯಾಪಾರಿಗಳು ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 9 ರವೆರೆಗೆ ಹೂವು, ಹಣ್ಣು, ಎಲೆ, ಅಡಿಕೆ, ಲಘು ಉಪಹಾರ ಪಾನೀಪೂರಿ, ಎಗ್ ರೈಸ್ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ.
ಆದರೆ ನಗರಸಭೆ ಪೌರಾಯುಕ್ತರು ಹಳೆಯ ಉದ್ಯಾನವನದ ಸ್ಥಳದಲ್ಲಿ ಶೌಚಾಲಯ ಕಟ್ಟಿಸುತ್ತೇವೆಂದು ಹೇಳಿದ್ದಾರೆ. ಇದರಿಂದ ಬೀದಿಬದಿಗಳು ವ್ಯಾಪಾರಿಗಳ ಕುಟುಂಬಸ್ಥರು ಬೀದಿಗೆ ಬೀಳುತ್ತಾರೆ. ಶೌಚಾಲಯವನ್ನು ಬೇರೆಕಡೆ ಕಟ್ಟಿಸಬೇಕು ಎಂದು ಬೀದಿಬದಿ ವ್ಯಾಪಾರದಾರ ಸಂಘದ ಅಧ್ಯಕ್ಷ ಸಿ.ವೈ. ಶಿವರುದ್ರಪ್ಪ ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿ ಶಾಸಕ ಟಿ.ರಘುಮೂರ್ತಿ ಯಾರಿಗೂ ತೊಂದರೆಯಾಗುವುದು ಬೇಡ, ಶೌಚಾಲಯ ನಿರ್ಮಾಣದ ಕುರಿತು ಸ್ಥಳ ಪರಿಶೀಲನೆ ಮಾಡಿ, ನಗರಸಭೆ ಪೌರಾಯುಕ್ತರೊಂದಿಗೆ ಚರ್ಚೆ ಮಾಡುತ್ತೇನೆ ಎಂದರು
ಈ ವೇಳೆ ಬೀದಿ ಬದಿ ವ್ಯಾಪಾರಿಗಳಾದ ಬಿ.ಪಟೇಲ್, ವರಲಕ್ಷ್ಮಿ, ಮಂಜುನಾಥ, ಗೌರಮ್ಮ, ಅನುಸೂಯಮ್ಮ, ಕುಮಾರ್, ಶೃತಿ, ವೆಂಕಟೇಶ್, ರಘು ಸೇರಿದಂತೆ ಮುಂತಾದವರು ಇದ್ದರು.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments