ಚಳ್ಳಕೆರೆ ನ.21 ಖಾಯಂ ಪಿಡಿಒ ಇಲ್ಲದೆ ಗ್ರಾಪಂ ಅಭಿವೃದ್ಧಿ ಕುಂಠಿತವಾಗಿದ್ದು ಕೂಡಲೆ ಮೂಲ ಪಿಡಿಒ ಹಾಕದಿದ್ದರೆ ಹೋರಾಟ ಮಾಡುವುದಾಗಿ ಗ್ರಾಪಂಸದಸ್ಯರು ಆಗ್ರಹಿಸಿದ್ದಾರೆ.
ಚಳ್ಳಕೆರೆ ತಾಲ್ಲೂಕಿನ ತಳಕು ಹೋಬಳಿ ಕೇಂದ್ರಸ್ಥಳದಲ್ಲಿರುವ ಗ್ರಾಮ ಪಂಚಾಯತ್ ಕಚೇರಿಯ ಪಂಚಾಯತ್ ಅಭಿವೃದ್ಧಿ ಕಾರಿ ಸುಮಾರು ವರ್ಷಗಳಿಂದ ಬೇರೆ ಕಡೆ ನಿಯೋಜನೆಗೊಂಡಿದ್ದು ಕಚೇರಿಯಲ್ಲಿ ಪಿಡಿಒಗಳನ್ನು ಪದೇ ಪದೇ ವರ್ಗಾವಣೆ ಮಾಡುವುದರಿಂದ ಯಾವದೇ ಅಭಿವೃದ್ಧಿಕಾಮಗಾರಿಗಳು ನಡೆಯುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಗ್ರಾಪಂ ಸದಸ್ಯ ಕರಿಂಸಾಬ್, ಮಾತನಾಡಿ ಮೊಳಕಾಲ್ಕೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ 4 ಹೋಬಳಿ ಮುಖ್ಯ ಕೇಂದ್ರವಾಗಿದ್ದು, 23 ಸದಸ್ಯರನ್ನು ಹೊಂದಿದೆ. 5 ಹಳ್ಳಿಗಳಿಂದ ಕೂಡಿದ ಪಂಚಾಯಿತಿಗೆ 4 ರಿಂದ 5 ಮುಜರೆ ಗ್ರಾಮಗಳು ಸೇರಿ 25 ಗ್ರಾಮಗಳಿವೆ.
ಈ ಪಂಚಾಯಿತಿಯಲ್ಲಿ ಎ ಗ್ರೇಡ್ ಕಾರ್ಯದರ್ಶಿಗಳು ವಾರದಲ್ಲಿ 3 ದಿನ ಮಾತ್ರ ಕೆಲಸಕ್ಕೆ ಬರುತ್ತಾರೆ. ಇದರಿಂದಾಗಿ ಗ್ರಾಮದ ಅಭಿವೃದ್ಧಿಯಾಗುತ್ತಿಲ್ಲ. 45 ಸಾವಿರ ಜನಸಂಖ್ಯೆ ಹೊಂದಿರುವ ಪಂಚಾಯಿತಿಯಲ್ಲಿ ಖಾಯಂ ಪಿಡಿಓ ಇಲ್ಲ. ಇದರಿಂದ ತುಂಬಾ
ತೊಂದರೆಯಾಗಿದೆ ಎಂದು ದೂರಿದರು. ತಳಕು ಪಂಚಾಯಿತಿ ಮೂಲಕ ಪಿಡಿಓ ಸುಮಾರು 32 ತಿಂಗಳುಗಳಿಂದ ವೇತನವನ್ನು ಮಾತ್ರ ಪಡೆಯುತ್ತಿದ್ದು ಕೆಲಸ ಮಾಡುತ್ತಿಲ್ಲ. ಅಲ್ಲದೆ ಅವರು ಎಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬುದು ಗೊತ್ತಿಲ್ಲ, ಪಂಚಾಯಿತಿ ಅಸ್ತಿತ್ವಕ್ಕೆ ಬಂದು 32 ತಿಂಗಳಾಗಿದ್ದು, ಇದುವರೆವಿಗೂ 9 ಜನ ಪಿಡಿಓಗಳು ಬಂದು ಹೋಗಿದ್ದಾರೆ. ಈ ಹಿನ್ನಲೆಯಲ್ಲಿ ಖಾಯಂ ಪಿಡಿಓರನ್ನು ಪಂಚಾಯಿತಿಗೆ
ನೀಡುವಂತೆ ಜಿ.ಪಂ. ಸಿಇಓ ಮತ್ತು ತಾ.ಪಂ. ಇಓರವರಿಗೆ ಮನವಿ ಮಾಡಲಾಗುತ್ತಾದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕರೀಂಸಾಬ್ ಇದುವರೆವಿಗೂ ಆರೋಪಿಸಿದರು.ತಕ್ಷಣ ಪಿಡಿಓ ನೇಮಕ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಜಿ.ಪಂ ಎದುರು ಗ್ರಾಮ ಪಂಚಾಯಿತಿಯ ಸದಸ್ಯರೆಲ್ಲಾ ಸೇರಿ ಅನಿರ್ಧಿಷ್ಟ ಕಾಲದವರೆಗೆ ಧರಣಿ
ನಡೆಸಲಾಗುವುದೆಂದು ಎಚ್ಚರಿಕೆ ನೀಡಿದರು. ಸುದ್ದಿಗೋಷ್ಟಿಯಲ್ಲಿ ತಳಕು ಪಂಚಾಯಿತಿ ಸದಸ್ಯರಾದ ಲಕ್ಷ್ಮೀ, ಮಾರಯ್ಯ, ವಾಣಿಬಾಯಿ, ಭಾಗ್ಯಮ್ಮ, ಬಿ. ತಿಪ್ಪೇಸ್ವಾಮಿ, ಶಾಮಂತಕುಮಾರ್ ಭಾಗವಹಿಸಿದ್ದರು.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments