ಚಳ್ಳಕೆರೆ ಜನಧ್ವನಿ ವಾರ್ತೆ ಮೇ 8 ಸ್ಥಳೀಯ ಸಂಸ್ಥೆಗಳಿಗೆ ಆರ್ಥಿಕ ಶಕ್ತಿ ನೀಡಬೇಕಿದ್ದ ಸರಕಾರಿ ವಾಣಿಜ್ಯ ಮಳಿಗೆಗಳುಸರಕಾರಿ ಬೊಕ್ಕಸ ಸೇರುವ ಬದಲು ಪ್ರಭಾವಿಗಳ ಖಾಜನೆ ಸೇರುತ್ತಿದೆ ಎಂದು ಸಾರ್ವಜನಿಕರಿಂದ ಆರೋಪ ಒಂದು ಕಡೆಯಾದರೆ ಆಧಾಯ ತರುವ ಕಟ್ಟಡಗಳ ನಿರ್ವಹಣೆಗೆ ಸಿಬ್ಬಂದಿ ಕೊರತೆ ಎದ್ದು ಕಾಣುತ್ತಿದೆ.
ಹೌದು ಇದು ಚಳ್ಳೆಕರೆ ನಗರದ ತಾಲೂಕು ಪಂಚಾಯತ್ ಕಚೇರಿಗೆ ಸೇರಿದ 11 ಮಳಿಗಳಿದ್ದು ಬೆಂಗಳೂರು ರಸ್ತೆಯಲ್ಲಿ ಹೊಸ ಕಟ್ಟಡಗಳು 4, ಹಳೆಯ ಕಟ್ಟಡಗಳು 2 ಒಟ್ಟು 6 ವಾಣೀಜ್ಯ ಮಳಿಗಗಳಿವೆ . ಬಾಡಿಗೆ ದಾರರಿಗೆ ತಾಲೂಕು ಪಂಚಾಯತ್ ಕಚೇರಿಯಿಂದ 5 ವರ್ಷದ ಅಗ್ರಿಮೆಂಟ್ ಮಾಡಿಕೊಟ್ಟಿದೆ. ಪ್ರತಿ ತಿಂಗಳು ವಿದ್ಯುತ್ ಬಿಲ್ಲನ್ನು ನಾನೇ ಪಾವತಿ ಮಾಡಿಕೊಂಡು ಹೋಗುತ್ತೇನೆ ನನ್ನ ವಶದಲ್ಲಿರುವ ತನಕ ಈ ಮಳಿಗೆಯನ್ನು ಬೇರೆಯಾರಿಗೂ ಮರು ಬಾಡಿಗೆ, ಲೀಜ್ ವಗೈರೆ ಕೊಡುವುದಿಲ್ಲ. ಮಳಿಗೆ ಯಾವುದೇ ಜಖಂ ಆಗದಂತೆ ನೋಡಿಕೊಳ್ಳುತ್ತೇನೆ. ಸುಣ್ಣ-ಬಣ್ಣ ಮತ್ತು ಸಣ್ಣಪುಟ್ಟ ರಿಪೇರಿಗಳನ್ನು ನಾನೇ ಮಾಡಿಸಿ ಕೊಳ್ಳುತ್ತೇನೆ. ದೊಡ್ಡ ರಿಪೇರಿಗಳೇನಾದರೂ ಇದ್ದಲ್ಲಿ ತಮ್ಮ ಗಮನಕ್ಕೆ ತಂದು ಮಾಡಿಸಿ ಕೊಳ್ಳುತ್ತೇನೆ. ಗುತ್ತಿಗೆ ಅವಧಿ ಮುಗಿದ ತಕ್ಷಣ ಸದರಿ ಮಳಿಗೆಯನ್ನು ತಮ್ಮ ವಶಕ್ಕೆ ಬಿಟ್ಟುಕೊಡುತ್ತೇನೆ. ಹರಾಜು ಇಸ್ತಿಹಾರ್ನಲ್ಲಿ ವಿಧಿಸಿರುವ ಷರತ್ತುಗಳಿಗೆ ಬದ್ಧನಾಗಿರುತ್ತೇನೆ. ಈ ಬಗ್ಗೆ ಯಾವುದೇ ರೀತಿಯ ತಂಟೆ-ತಕರಾರುವಗೈರೆ ಮಾಡುವುದಿಲ್ಲ. ಎಂದು ಸಾಕ್ಷಿದಾರರ ಸಮಕ್ಷಮ ಒಪ್ಪಿ ಬರೆದುಕೊಟ್ಟ ಬಾಡಿಗೆ ಕರಾರು ಪತ್ರ ಇಷ್ಟೆಲ್ಲ ಷರತ್ ಬರೆದುಕೊಂಡ ಬಾಡಿಗೆ ಪಡೆದು ನಿಯಮಗಳನ್ನು ಗಾಳಿ ತೂರಿ ಸರಕಾರಿ ಮಳಿಗೆಯನ್ನೇ ಕಿತ್ತು ಹೊಸದಾಗಿ ಮಾಡಿಕೊಂಡಿರುವುದಲ್ಲದೆ. ಸರಕಾರಿ ಖಾಲಿ ಜಾಗದಲ್ಲಿಯೂ ಸಹ ಕಟ್ಟಡ ನಿರ್ಮಿಸಿಕೊಂಡು ಅಂಗಡಿ ವಿಸ್ತೀರ್ಣ ಮಾಡಿಕೊಂಡಿರುವ ಬಗ್ಗೆ ಜನಧ್ವನಿ ಡಿಜಿಟಲ್ ಮೀಡಿಯಾ ಮೇ 1 ರಂದು ಸುದ್ದಿ ಬಿತ್ತರಿಸಿ 12 ದಿನಗಳು ಕಳೆದರೂ ಯಾವ ಅಧಿಕಾರಿಗಳು ಇತ್ತ ಇಣಿಕಿ ನೋಡಿಲ್ಲ ಸುದ್ದಿ ಬೆಳಕು ಚೆಲ್ಲಿದ ನಂತರವೂ ಸಹ ಕಟ್ಟಡ ದುರಸ್ಥಿ ಕಾಮಗಾರಿ ನಿಲ್ಲಿಸದೇ ಇರುವುದು ಸಾರ್ವಜಿನರಲ್ಲಿ ಅನುಮಾನಕ್ಕೆ ಎಡೆ ಮಾಡಿದೆ.
ತಾಲೂಕು ಪಂಚಾಯತ್ ವಾಣಿಜ್ಯ ಮಳಿಗಳ ಬಾಡಿಗೆ ವಸೂಲಿ ಸೇರಿದಂತೆ ಅವುಗಳ ಲೆಕ್ಕ ಪತ್ರ ನಿರ್ವಹಣೆ ಮಾಡುವ ಸಿಬ್ಬಂದಿಯೇ ಎಲ್ಲ ಯಾರು ಬಾಡಿಗೆ ಕಟ್ಟಿದ್ದಾರೆ.? ಕಟ್ಟ ಬಾಡಿಗೆ ದಾರರ ಸರಿಯಾದ ದಾಖಲೆಗಳೂ ಸಹ ಕಚೇರಿಯಲ್ಲಿ ಇಲ್ಲದೆ ಇರುವುದು ಮತಷ್ಟು ಅನುಮಾನೆಕ್ಕೆ ಎಡೆ ಮಾಡಿದೆ.
ಒಂದು ವೇಳೆ ಅಧಿಕಾರಿಗಳ ಸ್ವಂತ ಮನೆಯನ್ನು ಬಾಡಿಗೆ ಪಡೆದ ಬಾಡಿಗೆ ದಾರರೂ ಈ ರೀತಿ ಮಾಡಿದ್ದರೆ ಸುಮ್ಮನೆ ಇರುತ್ತಿದ್ದರೆ ಎಂಬ ಪ್ರಶ್ನೆಗಳೂ ಸಹ ಕೇಳಿ ಬರುತ್ತಿದ್ದು .ಇಲಾಖೆಯ ಷರತ್ ಗಳನ್ನು ಗಾಳಿಗೆ ತೂರಿದ ಮಳಿಗೆ ದಾರರನಿಗೆ ಇದುವರೆಗೂ ಸಂಬಧಪಟ್ಟ ಅಧಿಕಾರಿಗಳು ಯಾವುದೇ ಕ್ರಮ ಜರುಗಿಸದೆ ಇರುವುದು ಸಾರ್ವಜನಿಕರಲ್ಲಿ ಅನುಮಾನೆಕ್ಕೆ ಎಡೆಮಾಡಿದೆ.
0 Comments