ಖಾಜಾನೆ ತುಂಬುವ ವಾಣಿಜ್ಯ ಮಳಿಗೆಗಳ ನಿರ್ವಹಣೆಗೆ ಸಿಬ್ಬಂದಿ ಕೊರತೆ- ಸರಕಾರಿ ಮಳಿಗೆಗಳ ನಿರ್ವಹಣೆ ನಿರ್ಲಕ್ಕೆ ಸರಕಾರದ ಬೊಕ್ಕಸಕ್ಕೆ ನಷ್ಟ….

by | 12/05/24 | ತನಿಖೆ ವರದಿ


ಚಳ್ಳಕೆರೆ ಜನಧ್ವನಿ ವಾರ್ತೆ ಮೇ 8 ಸ್ಥಳೀಯ ಸಂಸ್ಥೆಗಳಿಗೆ ಆರ್ಥಿಕ ಶಕ್ತಿ ನೀಡಬೇಕಿದ್ದ ಸರಕಾರಿ ವಾಣಿಜ್ಯ ಮಳಿಗೆಗಳುಸರಕಾರಿ ಬೊಕ್ಕಸ ಸೇರುವ ಬದಲು ಪ್ರಭಾವಿಗಳ ಖಾಜನೆ ಸೇರುತ್ತಿದೆ ಎಂದು ಸಾರ್ವಜನಿಕರಿಂದ ಆರೋಪ ಒಂದು ಕಡೆಯಾದರೆ ಆಧಾಯ ತರುವ ಕಟ್ಟಡಗಳ ನಿರ್ವಹಣೆಗೆ ಸಿಬ್ಬಂದಿ ಕೊರತೆ ಎದ್ದು ಕಾಣುತ್ತಿದೆ.
ಹೌದು ಇದು ಚಳ್ಳೆಕರೆ ನಗರದ ತಾಲೂಕು ಪಂಚಾಯತ್ ಕಚೇರಿಗೆ ಸೇರಿದ 11 ಮಳಿಗಳಿದ್ದು ಬೆಂಗಳೂರು ರಸ್ತೆಯಲ್ಲಿ ಹೊಸ ಕಟ್ಟಡಗಳು 4, ಹಳೆಯ ಕಟ್ಟಡಗಳು 2 ಒಟ್ಟು 6 ವಾಣೀಜ್ಯ ಮಳಿಗಗಳಿವೆ . ಬಾಡಿಗೆ ದಾರರಿಗೆ ತಾಲೂಕು ಪಂಚಾಯತ್ ಕಚೇರಿಯಿಂದ 5 ವರ್ಷದ ಅಗ್ರಿಮೆಂಟ್ ಮಾಡಿಕೊಟ್ಟಿದೆ. ಪ್ರತಿ ತಿಂಗಳು ವಿದ್ಯುತ್ ಬಿಲ್ಲನ್ನು ನಾನೇ ಪಾವತಿ ಮಾಡಿಕೊಂಡು ಹೋಗುತ್ತೇನೆ ನನ್ನ ವಶದಲ್ಲಿರುವ ತನಕ ಈ ಮಳಿಗೆಯನ್ನು ಬೇರೆಯಾರಿಗೂ ಮರು ಬಾಡಿಗೆ, ಲೀಜ್ ವಗೈರೆ ಕೊಡುವುದಿಲ್ಲ. ಮಳಿಗೆ ಯಾವುದೇ ಜಖಂ ಆಗದಂತೆ ನೋಡಿಕೊಳ್ಳುತ್ತೇನೆ. ಸುಣ್ಣ-ಬಣ್ಣ ಮತ್ತು ಸಣ್ಣಪುಟ್ಟ ರಿಪೇರಿಗಳನ್ನು ನಾನೇ ಮಾಡಿಸಿ ಕೊಳ್ಳುತ್ತೇನೆ. ದೊಡ್ಡ ರಿಪೇರಿಗಳೇನಾದರೂ ಇದ್ದಲ್ಲಿ ತಮ್ಮ ಗಮನಕ್ಕೆ ತಂದು ಮಾಡಿಸಿ ಕೊಳ್ಳುತ್ತೇನೆ. ಗುತ್ತಿಗೆ ಅವಧಿ ಮುಗಿದ ತಕ್ಷಣ ಸದರಿ ಮಳಿಗೆಯನ್ನು ತಮ್ಮ ವಶಕ್ಕೆ ಬಿಟ್ಟುಕೊಡುತ್ತೇನೆ. ಹರಾಜು ಇಸ್ತಿಹಾರ್ನಲ್ಲಿ ವಿಧಿಸಿರುವ ಷರತ್ತುಗಳಿಗೆ ಬದ್ಧನಾಗಿರುತ್ತೇನೆ. ಈ ಬಗ್ಗೆ ಯಾವುದೇ ರೀತಿಯ ತಂಟೆ-ತಕರಾರುವಗೈರೆ ಮಾಡುವುದಿಲ್ಲ. ಎಂದು ಸಾಕ್ಷಿದಾರರ ಸಮಕ್ಷಮ ಒಪ್ಪಿ ಬರೆದುಕೊಟ್ಟ ಬಾಡಿಗೆ ಕರಾರು ಪತ್ರ ಇಷ್ಟೆಲ್ಲ ಷರತ್ ಬರೆದುಕೊಂಡ ಬಾಡಿಗೆ ಪಡೆದು ನಿಯಮಗಳನ್ನು ಗಾಳಿ ತೂರಿ ಸರಕಾರಿ ಮಳಿಗೆಯನ್ನೇ ಕಿತ್ತು ಹೊಸದಾಗಿ ಮಾಡಿಕೊಂಡಿರುವುದಲ್ಲದೆ. ಸರಕಾರಿ ಖಾಲಿ ಜಾಗದಲ್ಲಿಯೂ ಸಹ ಕಟ್ಟಡ ನಿರ್ಮಿಸಿಕೊಂಡು ಅಂಗಡಿ ವಿಸ್ತೀರ್ಣ ಮಾಡಿಕೊಂಡಿರುವ ಬಗ್ಗೆ ಜನಧ್ವನಿ ಡಿಜಿಟಲ್ ಮೀಡಿಯಾ ಮೇ 1 ರಂದು ಸುದ್ದಿ ಬಿತ್ತರಿಸಿ 12 ದಿನಗಳು ಕಳೆದರೂ ಯಾವ ಅಧಿಕಾರಿಗಳು ಇತ್ತ ಇಣಿಕಿ ನೋಡಿಲ್ಲ ಸುದ್ದಿ ಬೆಳಕು ಚೆಲ್ಲಿದ ನಂತರವೂ ಸಹ ಕಟ್ಟಡ ದುರಸ್ಥಿ ಕಾಮಗಾರಿ ನಿಲ್ಲಿಸದೇ ಇರುವುದು ಸಾರ್ವಜಿನರಲ್ಲಿ ಅನುಮಾನಕ್ಕೆ ಎಡೆ ಮಾಡಿದೆ.
ತಾಲೂಕು ಪಂಚಾಯತ್ ವಾಣಿಜ್ಯ ಮಳಿಗಳ ಬಾಡಿಗೆ ವಸೂಲಿ ಸೇರಿದಂತೆ ಅವುಗಳ ಲೆಕ್ಕ ಪತ್ರ ನಿರ್ವಹಣೆ ಮಾಡುವ ಸಿಬ್ಬಂದಿಯೇ ಎಲ್ಲ ಯಾರು ಬಾಡಿಗೆ ಕಟ್ಟಿದ್ದಾರೆ.? ಕಟ್ಟ ಬಾಡಿಗೆ ದಾರರ ಸರಿಯಾದ ದಾಖಲೆಗಳೂ ಸಹ ಕಚೇರಿಯಲ್ಲಿ ಇಲ್ಲದೆ ಇರುವುದು ಮತಷ್ಟು ಅನುಮಾನೆಕ್ಕೆ ಎಡೆ ಮಾಡಿದೆ.

ಬಾಡಿಗೆ ಪಡೆದ ರಾಘವೇಂದ್ರ ಮೆಟಲ್ ಸ್ಟೋರ್ ಮಾಲಿಕನಿಕೆ ಸುಮಾರು 20 ರಿಂದ 25 ವರ್ಷಗಳ ಕಾಲ ಲೀಜಿಗೆ ಕೊಟ್ಟಿದ್ದಾರೆ ಎಂಬ ಗುಸು ಗುಸು ಮಾತುಗಳೂ ಸಹ ಕೇಳಿ ಬರುತ್ತಿವೆ ಕೂಡಲೆ ಸಂಬಂಧಪಟ್ಟ ಮೇಲಾಧಿಕಾರಿಗಳ ಮಧ್ಯ ಪ್ರವೇಶಿಸಿ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವರೇ ಕಾದು ನೋಡ ಬೇಕಿದೆ.

ಒಂದು ವೇಳೆ ಅಧಿಕಾರಿಗಳ ಸ್ವಂತ ಮನೆಯನ್ನು ಬಾಡಿಗೆ ಪಡೆದ ಬಾಡಿಗೆ ದಾರರೂ ಈ ರೀತಿ ಮಾಡಿದ್ದರೆ ಸುಮ್ಮನೆ ಇರುತ್ತಿದ್ದರೆ ಎಂಬ ಪ್ರಶ್ನೆಗಳೂ ಸಹ ಕೇಳಿ ಬರುತ್ತಿದ್ದು .ಇಲಾಖೆಯ ಷರತ್ ಗಳನ್ನು ಗಾಳಿಗೆ ತೂರಿದ ಮಳಿಗೆ ದಾರರನಿಗೆ ಇದುವರೆಗೂ ಸಂಬಧಪಟ್ಟ ಅಧಿಕಾರಿಗಳು ಯಾವುದೇ ಕ್ರಮ ಜರುಗಿಸದೆ ಇರುವುದು ಸಾರ್ವಜನಿಕರಲ್ಲಿ ಅನುಮಾನೆಕ್ಕೆ ಎಡೆಮಾಡಿದೆ.

Latest News >>

ಪೂರ್ವಭಾವಿ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೂಚನೆ ಆ. 01 ರಂದು ವ್ಯಸನ ಮುಕ್ತ ದಿನಾಚರಣೆ ಮದ್ಯ, ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪಾರಿಣಾಮಗಳ ಬಗ್ಗೆ ಅರಿವು ಮೂಡಿಸಿ

ಚಿತ್ರದುರ್ಗ ಜು. 26: ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಅಂಗವಾಗಿ ಆಗಸ್ಟ್ 01 ರಂದು ಜಿಲ್ಲಾ ಮಟ್ಟದಲ್ಲಿ ವ್ಯಸನ ಮುಕ್ತ ದಿನಾಚರಣೆ...

ಆರು ವರ್ಷಗಳು ಕಳೆದರು ಚಿಕ್ಕಮಧುರೆ ಕೆರೆಹಳ್ಳದ ಸೇತುವೆ ಕಾಮಗಾರಿ ಸ್ಥಗಿತ

ಚಳ್ಳಕೆರೆ: ಜು.26 ತಾಲೂಕಿನ ಚಿಕ್ಕಮಧುರೆ ಗ್ರಾಮದ ಕೆರೆ ಹಳ್ಳದ ಸಂಪರ್ಕ ರಸ್ತೆಗೆ ಕೈಗೊಂಡಿರುವ ಸೇತುವೆ ಕಾಮಗಾರಿ ಸುಮಾರು 6 ವರ್ಷವಾದರೂ...

ಮೃತ ರೇಣುಕಾಸ್ವಾಮಿ ಮನೆಗೆ ಚಿತ್ರನಟ ವಿನೋದ್ ರಾಜ್ ಭೇಟಿ

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ & ಗ್ಯಾಂಗ್‌ ಈಗಾಲೇ ಜೈಲು ಸೇರಿದೆ. ಇನ್ನೂ ಇತ್ತೀಚೆಗಷ್ಟೇ ನಟ ವಿನೋದ್‌...

ಕಾಣೆಯಾದ ಬಾಲಕ ನೇರ್ಲಗುಂಟೆ ಗ್ರಾಮದ ಬಳಿ ಪತ್ತೆ….

ಚಳ್ಳಕೆರೆ ಜು.26. ಕಾಣೆಯದ ಬಾಲಕ ನೇರ್ಲಗುಂಟೆ ಗ್ರಾಮದ ಸಮೀಪ ಪತ್ತೆ. ಚಳ್ಳಕೆರೆ ನಗರದ ಕಾಟಪ್ಪನಹಟ್ಟಿಯ ನಾಲ್ಕನೇ ತರಗತಿ ಪ್ರಶಾಂತ್ ಕುಮಾರ್...

ಬಹಿರ್ದೆಸೆಗೆಂದು ಹೋದ ಮಗ ಮನೆಗೆ ಬಾರದೆ ಪೋಷಕರಲ್ಲಿ ಆತಂಕ..

ಚಳ್ಳಕೆರೆ ಜು.26 ಬೆಳ್ಳಂ ಬೆಳಗ್ಗೆ ಬರ್ಹಿದೆಸೆಗೆ ಹೋದ ಮನೆಗೆ ಬಾರದೆ ಕಾಣೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಹೌದು ಇದು ಚಳ್ಳಕೆರೆ ನಗರದ...

ರೈತರ ತಮ್ಮ ಜಮೀನಿನ ಪಹಣಿಗೆ ಆಧಾರ್ ಸಂಖ್ಯೆ ಲಿಂಕ್ ಮಾಡಿಸುವಂತೆ ನಗರ ಗ್ರಾಮಲೆಕ್ಕಾಧಿಕಾರಿ ಪ್ರಕಾಶ್

ಚಳ್ಳಕೆರೆ ಜು.25 ಬೆಳೆ ಪರಿಹಾರ ಬೆಳೆವಿಮೆ ಸೇರಿದಂತೆ ಸರಕಾರದ ಸೌಲಭ್ಯಗಳನ್ನು ಪಡೆಯಲು ಪಹಣಿಗೆ ಆಧಾರ್ ಲಿಂಕ್ ಕಡ್ಡಾಯವಾಗಿದ್ದು ರೈತರ ಪಹಣಿಗೆ...

ತುರುವನೂರು : ಬಾಲ್ಯ ವಿವಾಹ ನಿಷೇದ ಕುರಿತು ಜಾಗೃತಿ

ಚಿತ್ರದುರ್ಗ ಜುಲೈ25: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಭರಮಸಾಗರ ಶಿಶು ಅಭಿವೃದ್ದಿ ಯೋಜನಾಧಿಕಾರಿ ಕಚೇರಿ, ತುರುವನೂರು ಗ್ರಾಮ ಪಂಚಾಯಿತಿ,...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page