ಚಳ್ಳಕೆರೆ ಜನಧ್ವನಿ ವಾರ್ತೆ ಏ 13 ಸುಡ ಬಿಸಿಸು ಲೆಕ್ಕಿಸದೆ ಶಾಸ ಟಿ.ರಘುಮೂರ್ತಿ ಕ್ಷೇತ್ರದಲ್ಲಿ ಕಾಲಿಗೆ ಚಕ್ರಕಟ್ಟಿಕೊಂಡು ಬಿಳಿ ಟೋಪಿ ಹಾಕಿಕೊಂಡು ಅಪಾರ ಅಭಿಮಾನಿಗಳ, ಕಾರ್ಯರ್ತರ ಹಾಗೂ ಮುಖಂಡರೊಂದಿಗೆ ಮನೆ ಮನೆಗೆ ಭೇಟಿ ನೀಡಿ ಮತಯಾಚನೆ ಮಾಡಲು ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ.
ರಾಜ್ಯದಲ್ಲಿ ಸಿದ್ದರಾಮಯ್ಯ ಅಧಿಕಾರ ಅವಧಿಯಲ್ಲಿ ಕ್ಷೇತ್ರಕ್ಕೆ ಸಾಕಷ್ಟು ಸಾಕಷ್ಟು ಅನುದಾನ ತಂದು ನಿರೀಕ್ಷೆ ಮೀರಿ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ,
ಐತಿಹಾಸಿಕ ಯೋಜನೆಗಳನ್ನು ಜಾರಿಗೆ ತಂದು ಯಶಸ್ವಿಯಾಗಿ ಜನರಿಗೆ ತಲುಪಿವೆ. ಅದೇ ರೀತಿಯಲ್ಲಿ ಚಳ್ಳಕೆರೆ ವಿಧಾನ ಸಭಾ ಕ್ಷೇತ್ರದಲ್ಲಿ ಅದ್ಭುತವಾದ ಅಭಿವೃದ್ಧಿ ಕಾರ್ಯಗಳನ್ನು ಇಂಜಿನಿಯರಿAಗ್ ಕಾಲೇಜು, ಬಸ್ ನಿಲ್ದಾಣ, ಉತ್ತುಮವಾದ ರಸ್ತೆಗಳು, ಕುಡಿಯುವ ನೀರಿನ ವ್ಯವಸ್ಥೆ, ವಸತಿ ಸೌಲಭ್ಯ ಸೇರಿದಂತೆ ಹಲವಾರು ಯೋಜನೆಗಳನ್ನು ಅನುಷ್ಠಾನ ಮಾಡಿದ್ದೇನೆ ಶಿಕ್ಷಣ, ಆರೋಗ್ಯ, ವಸತಿ, ಕುಡಿಯುವ ನೀರು, ರಸ್ತೆ, ಕೋವಿಡ್ ಸಂದರ್ಭದಲ್ಲಿ ಪ್ರಾಣದ ಹಂಗುತೊರೆದು ಸೋಂಕಿಗೆ ತುತ್ತಾತವರಿಗೆ ಅಗತ್ಯ ಚಿಕಿತ್ಸೆ, ಕೋರೋನ ಸೈನಿಕರ ಜತೆ ನಾನೂ ಸಹ ಜತೆಯಲ್ಲಿದ್ದು ೂಟ, ಪರಿಡಿತರ ಸೇರಿದಂತೆ ಸೋಂಕಿನಿಂದ ಕ್ಷೇತ್ರದಲ್ಲಿ ಸಾವುನೋವುಳಾಗದಂತೆ ಎಚ್ಚರವಹಿಸಿ ಕೆಲಸ ಮಾಡಿದ್ದೇನೆ ಈ ಅಭಿವೃದ್ಧಿ ಯೋಜನೆಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಪಕ್ಷ ಚುನಾವಣೆಯಲ್ಲಿ ಮೂರನೇ ಅವಧಿಗೆ ಶಾಸಕರನ್ನಾಗಿ ಆಯ್ಕೆ ಮಾಡುವಂತೆ ತಮ್ಮಲ್ಲಿ ಮನವಿ ಕೊಳ್ಳುತ್ತೇನೆ ಎಂದು ಶಾಸಕರು ಮತಯಾಚನೆ ಮಾಡುತ್ತಿದ್ದಾರೆ.
0 Comments