ಚಳ್ಳಕೆರೆ ಜನಧ್ವನಿ ವಾರ್ತೆ ಏ 28
ನಾನು ಪ್ರಥಮಬಾರಿಗೆ ಚುನಾವಣೆ ಸ್ಪರ್ಧೆ ಮಾಡಿದ ಸಂದರ್ಭದಲ್ಲಿ ನನ್ನಿವಾಳ ಗ್ರಾಪಂ ವ್ಯಾಪ್ತಿಯ ಸುಮಾರು 30 ಹಟ್ಟಿಗಳಿಗೆ ರಸ್ತೆಗಳಿರಲಿಲ್ಲ ಗೆದ್ದ ನಂತರ ಎಲ್ಲಾ ಹಟ್ಟಿಗಳಿಗಳಿಗೆ ಡಾಂಬರ್ ರಸ್ತೆ ಮಾಡಿದ್ದೇನೆ ಈ ಬಾರಿ ಗೆದ್ದ ತಕ್ಷಳ ಹಟ್ಟಿಗಳ ಸರ್ವಾಂಗಿಣ ಅಭಿವೃದ್ಧಿ ಮಾಡಲಾಗುವುದು ಎಂದು ಶಾಸಕ ಟಿ,ರಘುಮೂರ್ತಿ ಭರವಸೆ ನೀಡಿದ್ದಾರೆ.
ತಾಲೂಕಿನ ನನ್ನಿವಾಳ ಗ್ರಾಪಂ ವ್ಯಾಪ್ತಿಯ ವಿವಿಧ ಹಳ್ಳಿಗಳಲ್ಲಿ ಚುನಾವಣೆ ಮತಯಾನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ನನ್ನಿವಾಳ ಗ್ರಾಪಂ ವ್ಯಾಪ್ತಿಯ ಬುಡ್ಡಕಟ್ಟು ಸಮುದಾಯವರು ಇಲ್ಲಿನ ಮುಖ್ಯ ಕಸಬು ಪಶುಪಾಲನೆ ಹಾಗೂ ಬುಡ್ಡಕಟ್ಟು ದೇವರಿಗೆ ಹರಕೆ ರೂಪದಲ್ಲಿ ಬಿಟ್ಟ ಜಾನುವಾರುಗಳಿಗೆ ಕುಡಿಯುವ ನೀರು,ಮೇವಿನ ಕೊರತೆ, ದೇವರ ಎತ್ತಿನ ಗೂಡಗಳ ಬಳಿ ಮೂಲ ಭೂತ ಸೌಲಭ್ಯಗಳ ಕೊರತೆಯನ್ನು ನೀಗಿಸಿ ಪ್ರತಿ ಹಟ್ಟಿಗಳಿಗೆ ಡಾಂಬರ್ ರಸ್ತೆ ಸಂಪರ್ಕ ಹಾಗೂ ಪ್ರತಿ ಹಟ್ಟಿಗಳಿಗೆ ಸಮುದಾಯ ಭವಗಳನ್ನು ನಿರ್ಮಿಸಲಾಗಿದೆ.
ಬೇಸಿಗೆಯಲ್ಲಿ ಟ್ಯಾಂಕರ್ ಮೂಲಕ ಕುಡಿಯುವ ನೀರನ್ನು ಸರಬರಾಜು ಮಾಡಲಾಗಿದೆ. ನಿವೇಶನ ಕೊರತೆ ಹಾಗೂ ಖಾಸಗಿ ಜಮೀನುಗಳಲ್ಲಿ ಮನಗೆಗಳಿರುವುದರಿಂದ ಹಕ್ಕು ಪತ್ರ ಹಾಗೂ ನಿವೇಶಗಳ ಕೊರತೆ ಈ ಬಾರಿ ಚುನಾವಣೆಯಲ್ಲಿ ಗೆದ್ದ ತಕ್ಷಣ ಗುಡಿಸಲು ಮುಕ್ತ ಮಾಡುವ ಮೂಲಕ ವಸತಿ , ಮಕ್ಕಳಿಗೆ ಶಿಕ್ಷಣ,ಆರೋಗ್ಯ ಸೇವೆಗಳಿಗೆ ಮೊದಲ ಆಧ್ಯತೆ ನೀಡಲಾಗುವುದು.
ನಾನು ಪ್ರಥಮ ಬಾರಿಗೆ ಚುನಾವಣೆ ಪ್ರಚಾರಕ್ಕೆ ಬಂದ ಸಂದರ್ಭದಲ್ಲಿ ರಸ್ತೆಗಳು ಕಲ್ಲು ಗುಂಡಿಗಳಿAದ ಕೂಡಿದ್ದ ಎಲ್ಲಾ ಹಟ್ಟಿಗಳಿಗೂ ಡಾಂಬರ್ ರಸ್ತೆ ಸಂಪರ್ಕ ಕಲ್ಪಿಸಲಾಗಿದೆ ಕುಡಿಯುವ ನೀರಿಕೊರತೆ ನೀಗಿಸಲಾಗಿದೆ.
ಪ್ರತಿಹಳ್ಳಿಗಳಿಗೆ ಆಶ್ರಯ ನಿವೇಶನ ಹಂಚಿಕೆಗೆ ಭೂಮಿ ಮಂಜುರಾತಿ ಹಾಗೂ ಸ್ಮಶಾನಗಳಿಗೆ ಜಾಗ ಮಂಜುರಾತಿ ಮಾಡಲಾಗಿದೆ. ಕ್ಷೇತ್ರ ಪ್ರತಿ ಹಳ್ಳಿಗಳಿಗೆ ಸಂಪರ್ಕ ರಸ್ತೆಗಳ ಅಭಿವೃದ್ಧಿ ಹಾಗೂ ಮುಖ್ಯ ರಸ್ತೆಗಳ ಅಭಿವೃದ್ಧಿ ಮಾಡಲಾಗಿದೆ ಆರೋಗ್ಯ , ಶಿಕ್ಷಣ. ಸಾರಿಗೆ ,ನಿರುದ್ಯೋಗ ಹೋಗಲಾಡಿಸಲು ಖಾಸಗಿ ಸಹಬಾಗಿತ್ವದಲ್ಲಿ ಸುಮಾರು 20 ಸಾವಿರಕ್ಕೂ ಹೆಚ್ಚು ಜನರಿಗೆ ಉದ್ಯೋಗ ದೊರೆಯುವಂತೆ ಮಾಡಲಾಗುವುದು ಅಗತ್ಯ ಮೂಲಭೂತ ಸೌಲಭ್ಯಗಳಿಗೆ ಮೊದಲ ಆದ್ಯತೆ ನೀಡಲಾಗಿದೆ ಆದರೂ ಸಹ ಇನ್ನು ನನಗೆ ತೃಪ್ತಿಯಾಗಿಲ್ಲ ಮೂರನೇ ಬಾರಿಗೆ ಗೆಲ್ಲುವುದು ಖಚಿತ ಕಾಂಗ್ರೆಸ್ ಸರಕಾರ ಆಡಳಿತ ಚುಕ್ಕಾಣಿ ಹಿಡಿಯುವುದು ಖಚಿತ ಕಾಂಗ್ರೆಸ್ ಸರಕಾರ ಅಧಿಕಾರಿಗಳಕ್ಕೆ ಬಂದ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಲಾಗುವುದು ಸೌಲಭ್ಯಗಳನ್ನು ಕಲ್ಲಿಸಲಾಗಿದೆ ಎಂದು ತಿಳಿಸಿದರು.
ಮೇ 10 ರಂದು ನಡೆಯಲಿರುವ ಚುನಾವಣೆಯಲ್ಲಿ ಪ್ರತಿ ಯೊಬ್ಬ ಮತದಾರರು ಮತಗಟ್ಟೆಗೆ ಹೋಗಿ ಬ್ಯಾಲೆಟ್ ನಮೂನೆಯಲ್ಲಿ 3 ನೇ ಕ್ರಮ ಸಂಖ್ಯೆಯಿರುವ ಕೈ ಗುರುತಿಗೆ ಮತ ನೀಡಿ ಜಯಶೀಲರನ್ನಾಗಿ ಮಾಡುವಂತೆ ಮತದಾರರಲ್ಲಿ ಮನವಿ ಮಾಡಿಕೊಂಡರು.
ಈ ಸಂದರ್ಭಲ್ಲಿ ಗ್ರಾಪಂ ಅಧ್ಯಕ್ಷೆ ಪಾರಿಜಾತ, ಸದಸ್ಯರಾದ ಜಿನ್ನಿ ಬೈಯಣ್ಣ, ಅಪ್ಪಣ್ಣ, ಮಾಜಿ ಗ್ರಾಪಂ ಅಧ್ಯಕ್ಷ ಬಸವರಾಜ್, ಮುಖಂಡರಾದ ರಾಜಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವೀರಭದ್ರಪ್ಪ, ಶಶಿಧರ್, ಮಾಜಿ ಜಿಪಂ ಸದಸ್ಯ ಪ್ರಕಾಶ್ ಮೂರ್ತಿ, ಓಬಯ್ಯ, ಜಯಣ್ಣ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು, ಅಪಾರ ಸಂಖ್ಯೆಯ ಅಭಿಮಾನಿಗಳು , ಮತದಾರರು ಉಪಸ್ಥಿತರಿದ್ದರು.
0 Comments