ಚಳ್ಳಕೆರೆ ಆ.25. ಕ್ರೀಡೆ ಮನುಷ್ಯನ ಮನಸ್ಸು ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಲು ದೇಹವನ್ನು ಉತ್ಸಾಹದಿಂದ ಇಡಲು ಸಹಕರಿಸುತ್ತದೆ ಎಂದು ಎಂ.ಎಸ್.ಎಂ.ಪ್ರಸನ್ನ ಅಭಿಪ್ರಾಯ ಪಟ್ಟರು.
ತಾಲೂಕಿನ ದೊಡ್ಡ ಉಳ್ಳರ್ತಿ ಓಂ ಕ್ರಿಕೆಟರ್ಸ್ ವತಿಯಿಂದ ದಿವಂಗತ ಶ್ರೀಮತಿ ರಾಮಸುಬ್ಬಮ್ಮ ರವರ ಸ್ಮರಣಾರ್ಥವಾಗಿ 25ನೇ ಬಾರಿಗೆ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನೆಂಟ್ ಆಯೋಜಿಲಾಗಿದ್ದ ಪಂದ್ಯವನ್ನು ಉದ್ಘಾಟಿಸಿ ಮಾತನಾಡಿದರು. ಏಷ್ಟೋ ಯುವಕರು ಕ್ರೀಡೆಗಳಿಂದ ಉತ್ತಮವಾದ ರಾಷ್ಟ್ರ ಮಟ್ಟದ ಹೆಸರನ್ನು ಸಂಪಾದಿಸಿದ್ದಾರೆ ಕ್ರೀಡೆಯಲ್ಲಿ ಭಾಗವಹಿಸುದರಿಂದ ಆರೋಗ್ಯ ವೃದ್ಧಿಯಾಗುತ್ತದೆ ಎಂದರು. ಗ್ರಾಮ ಓನ್ ಕಂಪ್ಯೂಟರ್ ಆಪರೇಟರ್ ಮಂಜುನಾಥ್ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಮಕ್ಕಳು ಮೊಬೈಲ್ ಗೀಳಿಗೆ ಬಿದ್ದು ಕ್ರೀಡೆಯಾನ್ನು ಮರೆತು ಹೋಗುತ್ತಿದ್ದಾರೆ. ಮೊಬೈಲ್ ಇದ್ದರೆ ಸಾಕು ಊಟ ನಿದ್ದೆ ತಂದೆ ತಾಯಿಗಳು ಯಾರು ಸಹ ನೆನಪಿಗೆ ಬರುವುದಿಲ್ಲ. ಈಗಾಗಿ ಹಲವಾರು ಕಾಯಿಲೆಗಳು ಬಂದುಹೋಗುತ್ತಿವೆ. ಹಿಂದಿನ ಕಾಲದಲ್ಲಿನ ಅದೆಷ್ಟೋ ಆಟಗಳು ಮರೆತು ಬಿಟ್ಟಿದ್ದಾರೆ ಗೋಲಿ, ಚಿನ್ನಿ ದಂಡ, ಲಗೋರಿ ಈ ತರಹದ ಆಟಗಳನ್ನೂ ಮರೆತೆ ಬಿಟ್ಟಿದ್ದಾರೆ ಯುವಕರು ಹೆಚ್ಚು ಕ್ರೀಡೆಯಲ್ಲಿ ಆಸಕ್ತಿ ತೋರಿ ಬಾಗವಹಿಸಿ ಉತ್ಸಹ ದಿಂದ ಆಟವಾಡಿ ಎಂದರು. ಈ ಕಾರ್ಯಕ್ರಮಕ್ಕೆ ಎಂ. ಎಸ್ ರಮೇಶ್ ಬಾಬು, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕರಿಯಮ್ಮ ಗೋವಿಂದಪ್ಪ. ಪಿ ಡಿ ಓ ಪಾಲಯ್ಯ ಇತರರಿದ್ದರು.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments