ಚಳ್ಳಕೆರೆ ಜನಧ್ವನಿ ವಾರ್ತೆ ಜ.1 ಕೋರೆಗಾಂವ್ ವಿಜಯಸ್ತಂಭದ ಇತಿಹಾಸ ಪ್ರತಿಯೊಬ್ಬರೂ ತಿಳಿದುಕೊಳ್ಳುವುದು ಅಗತ್ಯವಿದೆ ಎಂದು ಮಾಜಿ ಪುರಸಭೆ ಸದಸ್ಯ ಎಂ.ಶಿವಮೂರ್ತಿ ಹೇಳಿದರು.
ನಗರದ ಡಾ.ಬಿ.ಆರ್.ಅಬೇಡ್ಕರ್ ವೃತ್ತದಲ್ಲಿರುವ ಪ್ರತಿಮೆಗೆ ದಲಿತ ಸಂಘಟನೆಗಳ ಮಾಹಾ ಒಕ್ಕೂಟ ಬಹುಜನವಾದ ಹಾಗೂ ಭೀಮಾ ಕೋರೆಗಾಂವ್ ವಿಜಯದ ವರ್ಷಾಚರಣ ಅಂಗವಾಗಿ ಮಾಲಾರ್ಪಣೆ ನೆರೆವೇರಿಸಿ ಮಾತನಾಡಿದರು.
ಕೋರೆಗಾವ ಯುದ್ಧ ಡಾ. ಬಾಬಾ ಸಾಹೇಬ್ ಅಂಬೇಡ್ಕರರಿಗೆ ದಲಿತ ಹೋರಾಟಕ್ಕೆ ಮುನ್ನುಡಿ ಬರೆಯಿತು. ವಿಶ್ವಕ್ಕೆ ಕೋರೆಗಾಂವ್ ಯುದ್ಧವನ್ನು ಪರಿಚಯಿಸಿದ ಇತಿಹಾಸಕಾರ ಡಾ. ಅಂಬೇಡ್ಕರ. 1818 ಜನೆವರಿ 1 ಕೋರೆಗಾಂವ್ ಯುದ್ಧ ನಡೆದ ದಿನವಾಗಿದ್ದು ಭಾರತೀಯರು ಜ. 1 ಸ್ವಾಭಿಮಾನಿ ದಿನವನ್ನಾಗಿ ಆಚರಿಸಲು ಕರೆ ನೀಡಿದ್ದಾರೆ. ದೇಶದಲ್ಲಿ ಇಂದಿಗೂ ಕೋರೆಗಾಂವ ಯುದ್ಧವನ್ನು ಸ್ವಾಭಿಮಾನದ ಸಂಕೇತವಾಗಿ ಆಚರಿಸಲಾಗುತ್ತದೆ. ಕರ್ನಾಟಕದಲ್ಲಿ 1986ರಿಂದ ದಲಿತ ಸಂಘಟನೆಗಳು ವಿಜಯೋತ್ಸವ ಆಚರಿಸುತ್ತ ಬಂದಿವೆ ಎಂದು ತಿಳಿಸಿದರು
ದಲಿತ ಸಂಘಟನೆಗಳ ಮಹಾಒಕ್ಕೂಟದ ಅಧ್ಯಕ್ಷ ಉಮೇಶ್ ಬ್ಯಾನರ್ಜಿ ಮಾತನಾಡಿ ಅಸಾಧ್ಯ ಕಾರ್ಯವನ್ನು ಸಂಘಟನೆಯಿಂದ ಸಾಧ್ಯ ಮಾಡಿ ತೋರಿಸಿದ 1818ರ ಭೀಮಾ ಕೋರೆಗಾಂವ್ ಯುದ್ಧ ವಿಶ್ವಕ್ಕೆ ದಲಿತ ಹಾಗೂ ಭಾರತೀಯರ ಶಕ್ತಿಯನ್ನು ತೋರಿಸಿಕೊಟ್ಟ ಮಹಾಯುದ್ಧವಾಗಿದೆ. ಕೋರೆಗಾಂವ್ ಯುದ್ಧ ಪೇಶ್ವೆಯವರ ವಿರುದ್ಧ ಬ್ರಿಟೀಷರ ಪರವಾಗಿ ಮಾಡಲಾಯಿತು. ಬ್ರಿಟೀಷರ ಪರವಾಗಿ ಮಾಡಿದ ಏಕೈಕ ಯುದ್ಧದ ವಿಜಯೋತ್ಸವ ಆಚರಣೆ ಇದಾಗಿದೆ. ಪೇಶ್ವೆಯುವರು ದಲಿತರಿಗೆ ಮಾಡಿದ ಅವಮಾನದಿಂದಾಗಿ ಸಿಡಿದ್ದೆದ್ದ 800 ಸೈನಿಕರು ಪೇಶ್ವೆಯವರ ಬಲಿಷ್ಠ 32,000 ಸೈನಿಕರನ್ನು ಸೋಲಿಸಿ ಇತಿಹಾಸ ನಿರ್ಮಾಣ ಮಾಡಿದರು. ಇತಿಹಾಸದಲ್ಲಿ ಈ ಪ್ರಮಾಣದ ಸೈನ್ಯವನ್ನು ಸೋಲಿಸಿದ ದಾಖಲೆ ವಿಶ್ವದ ಯಾವುದೆ ದೇಶದ ಇತಿಹಾಸದಲ್ಲಿ ಕಂಡುಬರುವುದಿಲ್ಲ ಎಂದರು.
ಸಾಮಾಜಿಕ ಹೋರಾಟಗಾರ ಭೀನಕೆರೆ ಶಿವಮೂರ್ತಿ. ಮೈತ್ರಿ ದ್ಯಾಮಣ್ಣ ಮಾತನಾಡಿದರು. ಉಪಾಧ್ಯಕ್ಷ ಪೆನ್ನೇಶ್, ಡಿ.ಚಂದ್ರು, ಈಶ್ವರನಾಯಕ, ಜೆ.ಕೆ.ತಿಪ್ಪೇಸ್ವಾಮಿ, ರವಿಕುಮಾರ್ ನನ್ನಿವಾಳ, ವೀರಭದ್ರ, ಇತರರಿದ್ದರು.
.
0 Comments