ಚಳ್ಳಕೆರೆ: ತಾಲೂಕಿನ ಮನ್ನೆಕೋಟೆ ಗ್ರಾಮದ ರೈತರು ಕೋಡಿಹಳ್ಳಿ ಕೆರೆಯ ಕಾಲುವೆ ಹಾಗೂ ಬಂಡಿ ಜಾಡನ್ನು ಜಮೀನುಗಳಿಗೆ ಹಾಗೂ ವಾಹನ ಸವಾರರಿಗೆ ಓಡಾಡಲು ಬಿಟ್ಟು ಕೊಡಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ರೈತರು ಸುಮಾರು ನೂರಾರು ವರ್ಷಗಳಿಂದ ಮನ್ನೆಕೋಟೆಯಲ್ಲಿ ವಾಸವಾಗಿದ್ದು ಮೂಲತಃ ಕೃಷಿಯನ್ನು ನಂಬಿ ಜೀವನವನ್ನು ನಡೆಸುತ್ತಿದ್ದೇವೆ ಸುಮಾರು 60 70 ವರ್ಷಗಳ ಹಿಂದೆ ನಮ್ಮ ಭೂಮಿ ಕೋಡಿಹಳ್ಳಿ ಕೆರೆಯ ಹೂವಿನ ಕಾಲುವೆವರೆಗೂ ನೀರಾವರಿ ವ್ಯವಸ್ಥೆಗೆ ಒಳಪಟ್ಟಿತ್ತು ಕಾಲ ನಂತರದಲ್ಲಿ ಈ ವ್ಯವಸ್ಥೆ ನಿಂತು ಹೋಗಿ ಮಳೆಯ ಆಶ್ರಿತವಾಯಿತು ಅ ಕೆರೆ ಕಾಲುವೆ ಹಾಗೂ ಬಂಡಿ ಜಾಡನ್ನು ಸರ್ವೆ ನಂಬರ್ 135 ಜಮೀನು ಮಾಲೀಕರಾದ ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್ ರವರಿಗೆ ಸೇರಿದೆ ಅವರು ಈ ಜಮೀನನ್ನು ವಾಣಿಜ್ಯ ಉದ್ದೇಶಗಳಿಗಾಗಿ ಇನ್ಫೋಸಿಸ್ ಸಂಸ್ಥೆಗೆ ಗುತ್ತಿಗೆ ನೀಡಿದ್ದಾರೆ ಎಂಬ ಮಾಹಿತಿ ಇದ್ದು ಇನ್ಫೋಸಿಸ್ ಸಂಸ್ಥೆಯವರು ಬಂದೋಬಸ್ತ್ ಕಾರ್ಯವನ್ನು ಆರಂಭಿಸಿದ್ದಾರೆ ನಮ್ಮ ಜಮೀನುಗಳಿಗೆ ಕೋಡಿಹಳ್ಳಿ ಕೆರೆಯಿಂದ ಬರುವ ಕೆರೆ ಕಾಲುವೆ ಹಾಗೂ ಪಕ್ಕದ ಬಂಡಿ ಜಾಡನ್ನು ಅತಿಕ್ರಮಣ ಮಾಡಿದ್ದಾರೆ ಈ ವಿಚಾರವಾಗಿ ಹಲವಾರು ಬಾರಿ ಮನವಿ ಮಾಡಿದರು ಯಾವುದೇ ರೀತಿಯ ಸ್ಪಂದನೆ ಸಿಕ್ಕಿಲ್ಲ ಇದರಿಂದ ಸುಮಾರು ನೂರಾರು ರೈತರಿಗೆ ಕುರಿಗಾಹಿಗಳಿಗೆ ಮತ್ತು ವಾಹನ ಸವಾರರಿಗೆ ಓಡಾಡಲು ಅಡ್ಡಿಯಾಗುವುದರ ಜೊತೆಗೆ ಕಾಲುವೆ ನೀರಾವರಿ ವ್ಯವಸ್ಥೆಗೂ ದಕ್ಕೆ ಉಂಟಾಗುತ್ತಿದೆ ಆದ ಕಾರಣ ತಲೆತಲಾಂತರಗಳಿಂದ ಬಂದ ನಮ್ಮ ದಾರಿ ಹಾಗೂ ಕಾಲುವೆ ಸೇವೆ ಮತ್ತು ಬಳಕೆಯ ಹಕ್ಕನ್ನು ನಮ್ಮಿಂದ ಕಿತ್ತುಕೊಳ್ಳಬಾರದು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ರೈತರಾದ ಗೋವಿಂದಪ್ಪ ಪಾಲಯ್ಯ ,ನಾಗರಾಜ್, ಈರಣ್ಣ ,ಬಸವರಾಜಪ್ಪ, ಸಿದ್ದಯ್ಯ ,ತಿಪ್ಪೇಸ್ವಾಮಿ, ರೇವಣ್ಣ, ಹೊನ್ನೂರ ಸ್ವಾಮಿ, ದೊಡ್ಡಬಸಯ್ಯ, ಚಂದ್ರಣ್ಣ ,ಶಾಂತಣ್ಣ, ಮಾರಣ್ಣ, ಸೋಮಶೇಖರ್, ಸೇರಿದಂತೆ ಹಲವರು ಉಪಸ್ಥಿತರಿದ್ದರು.
0 Comments