ಚಳ್ಳಕೆರೆ ಜನಧ್ವನಿ ವಾರ್ತೆ ಮೇ13
ಒಂದಾನೊಂದು ಕಾಲದಲ್ಲಿ ಚಳ್ಳಕೆರೆ “ಎಣ್ಣೆನಗರಿ “ ಎಂದು ಖ್ಯಾತಿ ಪಡೆದು ಎರಡನೇ ಬಾಂಬೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ನಂತರ ಇಸ್ರೋ, ಡಿಆರ್ಡಿಒ ವಿವಿಧ ಸಂಸ್ಥೆಗಳು ಲಗ್ಗೆ ಇಟ್ಟು “ವಿಜ್ಞಾನ ನಗರಿ” ಎಂಬ ಖ್ಯಾತಿ ಪಡೆದು ಪ್ರಪಂಚದ ಭೂಪಟ ಸೇರಿದ ಬೆನ್ನಲ್ಲೇ ಈಗಾ ರಾಜಕೀಯ ಕ್ಷೇತ್ರದಲ್ಲಿ ಚಳ್ಳಕೆರೆ ತಾಲೂಕು ದಾಖಲೆ ಸೇರಿದೆ.
ಚಳ್ಳಕೆರೆ ತಾಲೂಕಿನಿಂದ ವಿವಿಧ ವಿಧಾನಸಭಾ ಕ್ಷೆತ್ರದಲ್ಲಿ ಕಳೆದ ಬಾರಿ ಹಿರಿಯೂರು, ಮೊಳಕಾಲ್ಮೂರು, ಹಾಗೂ ಎಂಎಲ್ಸಿ ಯಾಗಿ ಅಧಿಕಾರ ಮಾಡಿದ ಬೆನ್ನಲ್ಲೆ ಈಗ ತಾಲೂಕಿನ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಹೊಸದುರ್ಗ ಹೊರತು ಪಡಿಸಿ ಉಳಿದ ಐದು ಕ್ಷೇತ್ರಗಳಿಗೆ ಚಳ್ಳಕೆರೆ ತಾಲೂಕಿನ ಅಭ್ಯರ್ಥಿಗಳು ಸ್ಫರ್ಧೆಗಿಳಿದು ಜಯಗಳಿಸಿ ಶಾಸಕರಾಗುತ್ತಿದ್ದಾರೆ.
ಹೌದು ಚಳ್ಳಕೆರೆ ನಗರದ ಡಿ.ಸುಧಾಕರ್ ಒಮ್ಮೆ ಹಿರಿಯೂರಿನ ಶಾಸಕರಾಗಿ ಕಳೆದ ಬಾರಿ ಸೋಲುಂಡು 2023ರಲ್ಲಿ ಜಯಗಳಿಸಿದ್ದಾರೆ, ದೊಡ್ಡ ಉಳ್ಳಾರ್ತಿ ಗ್ರಾಮವರಾದ ಎಂ.ಚAದ್ರಪ್ಪ ಹೊಳಲ್ಕೆರೆ ಕ್ಷೇತ್ರದ ಶಾಸಕರಾಗಿ ಎರಡು ಬಾರಿ ಶಾಸಕರಾಗಿದ್ದಾರೆ. ಚಳ್ಳಕೆರೆ ನಗರದ ಕೆ.ಸಿ.ವೀರೆಂದ್ರಪ್ಪಪ್ಪ ಚಿತ್ರದುರ್ಗ ಕ್ಷೇತ್ರದ ಕಳೆದ ಬಾರಿ ಜೆಡಿಎಸ್ ಪಕ್ಷದಿಂದಸ್ಪರ್ಧಿಸಿ ಸೋಲುಂಡಿದ್ದರು ಈ ಬಾರಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ನೇರಲಗುಂಟೆ ಗ್ರಾಮದ ಎಸ್.ತಿಪ್ಪೇಸ್ವಾಮಿ ಮೊಳಕಾಲ್ಮೂರು ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗುತ್ತಿದ್ದರು 2018 ಮತ್ತು 2023ರಲ್ಲಿ ಪಕ್ಷ ಬದಲಾವಣೆಯಿಂದ ಸೋಲುಂಡಿದ್ದಾರೆ. ತಿಮ್ಮಪ್ಪಯ್ಯನಹಳ್ಳಿ ಗೊಲ್ಲರಹಟ್ಟಿಯ ಜಯಮ್ಮಬಾಲರಾಜು ವಿಧಾನಪರಿಷತ್ ಸದಸ್ಯರಾಗಿ ಈಗ ಮಾಜಿಯಾಗಿದ್ದಾರೆ.
ಶಾಸಕ ಟಿ.ರಘುಮೂರ್ತಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಡಬನಕಟ್ಟೆ ಗ್ರಾಮದವರಾಗಿದ್ದರಿಂದ ಇದೇ ಕ್ಷೇತ್ರದವರಾಗಿದ್ದಾರೆ, ಈಗ ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ, ಚಿತ್ರದುರ್ಗ ಕ್ಷೇತ್ರದ ಕೆ.ಸಿ.ವೀರೇಂದ್ರಪಪ್ಪಿ, ಹಿರಿಯೂರು ಕ್ಷೇತ್ರದ ಶಾಸಕ ಡಿ.ಸುಧಾಕರ್ ಒಟ್ಟು ನಾಲ್ಕು ಜನರು ಚಳ್ಳಕೆರೆ ತಾಲೂಕಿಗೆ ಸಂಬಂಧಪಟ್ಟವರಾಗಿದ್ದಾರೆ,
0 Comments