ಚಿತ್ರದುರ್ಗ ಜೂ.4 ಕೋಟೆ ನಾಡಿನಲ್ಲೆ ಮತ್ತೆ ಹರಳಿದ ಕಮಲ ಬಿಜೆಪಿ ಅಭ್ಯರ್ಥಿ ಗೋವಿಂದಕಾರಜೋಳ ಕೈಹಿಡಿದ ಮತದಾರರು. ಪ್ರತಿ ಬಾರಿಯೂ ಹೊರಗಿನವರೇ ಬರುತ್ತಾರೆ ಸ್ಥಳಿಯರಿಗೆ ಅವಕಾಶ ಕೊಡುವುದಿಲ್ಲ ಎಂಬುದು ಕಾಂಗ್ರೆಸ್ ಪಕ್ಷದಲ್ಲಿ ಅಸಮದಾನ ಹಾಗೂ ಪ್ರತಿಭಟನೆಗಳೂ ನಡೆದಿದ್ದು . ಉಚಿತ ಗ್ಯಾರೆಂಟಿ ಯೋಜನೆಗಳ ಜಾರಿಯಿಂದ ಮತದಾರರು ಕೈಹಿಡಿಯಲಿದ್ದಾರೆ ಎಂಬ ಭರವಸೆ ಹುಸಿಯಾಗಿದೆ. ಇತ್ತ ಬಿಜೆಪಿ ಜೆಡಿಎಸ್ ಪಕ್ಷಗಳು ಹೊಂದಾಣಿಕೆ ಇಲ್ಲಿ ಯಶಸ್ವಿಯಾಗಿ ಮತ್ತೆ ಕೋಟೆ ನಾಡಿನಲ್ಲಿ ಕಮಲವನ್ನ ಹರಳಿಸಲು ಮತದಾರರು ಕೈ ಬಿಟ್ಡು ಕಮಲಹಿದಿದ್ದಾರೆ. ಬಿಜೆಪಿ ಅಭ್ಯರ್ಥಿ ಗೋವಿಂದಕಾರಜೋಳ 47065 ಸಾವಿರಕ್ಕೂ ಹೆಚ್ಚು
ಮತಗಳಿಂದ ಗೆಲುವು ಸಾಧಿಸಿದ್ದಾರೆ. ವಿಧಾನಸಭೆ ಕ್ಷೇತ್ರಗಳು
ಒಟ್ಟು ಎಂಟು ವಿಧಾನಸಭೆ ಕ್ಷೇತ್ರಗಳನ್ನು ಹೊಂದಿರುವ ಚಿತ್ರದುರ್ಗದಲ್ಲಿ ಚುನಾವಣೆ ಮೊದಲು ರಾಜಕೀಯ ಚಿತ್ರಣ ಕಾಂಗ್ರೆಸ್ಗೆ ವರದಾನವಾಗಿ ಕಾಣುತ್ತಿತ್ತು. ಹಾಗೆಯೇ ಹಾಲಿ ಸಂಸದರನ್ನು ಹೊಂದಿರುವ ಬಿಜೆಪಿಗೆ ಸುಲಭವಾದ ಗೆಲುವಲ್ಲ ಎಂಬ ಮಾತುಗಳು ಕೇಳಿಬರುತ್ತಿದ್ದವು. ಒಟ್ಟು ಎಂಟು ವಿಧಾನಸಭೆ ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರ ಬರುವುದು ಒಂದು ಕಡೆ ಮಾತ್ರ!
ತುಮಕೂರು ಜಿಲ್ಲೆಯ ಶಿರಾ ಮತ್ತು ಪಾವಗಡ (ಎಸ್ಸಿ) ಈ ಕ್ಷೇತ್ರ ವ್ಯಾಪ್ತಿಗೆ ಬರುತ್ತವೆ. ಶಿರಾದಲ್ಲಿ ಟಿಬಿ ಜಯಚಂದ್ರ ಮತ್ತು ಪಾವಗಡದಲ್ಲಿ ಎಚ್ವಿ ವೆಂಕಟೇಶ್ ಕಾಂಗ್ರೆಸ್ ಶಾಸಕರಾಗಿದ್ದಾರೆ. ಮೊಳಕಾಲ್ಮೂರು (ಎಸ್ಟಿ), ಚಳ್ಳಕೆರೆ (ಎಸ್ಟಿ), ಚಿತ್ರದುರ್ಗ, ಹಿರಿಯೂರು, ಹೊಸದುರ್ಗ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಹೊಳಲ್ಕೆರೆ (ಎಸ್ಸಿ) ಕ್ಷೇತ್ರದಲ್ಲಿ ಮಾತ್ರ ಬಿಜೆಪಿ ಶಾಸಕರಿದ್ದಾರೆ. ಮತ ಎಣಿಯನಂತರ ಮತದಾರರ ತೀರ್ಪು ಬಿಜೆಪಿಯತ್ತ ನೀಡಿರುವುದು ಆಶ್ಚರ್ಯದ ಫಲಿತಾಂಶ ನೀಡಿದೆ. *ಚತ್ರದುರ್ಗ ಲೋಕಾ ಕ್ಷೇತ್ರದ ಹಿನ್ನೋಟ.*
1952ರ ಮೊದಲ ಚುನಾವಣೆಯಲ್ಲಿ ಸಂಸತ್ಗೆ ಇಲ್ಲಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಆಯ್ಕೆಯಾದವರು ರಾಜ್ಯದ ಮಾಜಿ ಸಿಎಂ ಎಸ್ ನಿಜಲಿಂಗಪ್ಪ. 1957ರಲ್ಲಿ ಪ್ರಜಾ ಸೋಷಿಯಲಿಸ್ಟ್ ಪಕ್ಷದ ಜೆ ಮೊಹಮ್ಮದ್ ಇಮಾಮ್ ಗೆದ್ದಿದ್ದರು. 1962ರಲ್ಲಿ ಕಾಂಗ್ರೆಸ್ನ ವೀರಬಸಪ್ಪ ಗೆದ್ದರೆ, 1967ರಲ್ಲಿ ಜೆ ಮೊಹಮ್ಮದ್ ಇಮಾಮ್ ಅವರು ಸ್ವತಂತ್ರ ಪಕ್ಷದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. 1991ರವರೆಗೂ ಇಲ್ಲಿ ಕಾಂಗ್ರೆಸ್ ಸತತವಾಗಿ ಗೆದ್ದಿತ್ತು.
1996ರಲ್ಲಿ ಜನತಾದಳದ ಕೋದಂಡರಾಮಯ್ಯ ಜಯಗಳಿಸಿದರು. 1998ರಲ್ಲಿ ಇದು ಕಾಂಗ್ರೆಸ್ ವಶವಾದರೆ, 1999ರಲ್ಲಿ ಮತ್ತೆ ಜನತಾದಳ ಇಲ್ಲಿ ಜಯಭೇರಿ ಬಾರಿಸಿತ್ತು. ನಟ ಶಶಿಕುಮಾರ್ ಅವರು ಸಂಸತ್ಗೆ ಆಯ್ಕೆಯಾದ ಚುನಾವಣೆ ಇದು. 2004ರಲ್ಲಿ ಇದು ಮತ್ತೆ ಕಾಂಗ್ರೆಸ್ ವಶವಾದರೆ, 2009ರಲ್ಲಿ ಬಿಜೆಪಿಯ ಜನಾರ್ದನ ಸ್ವಾಮಿ ಗೆಲುವಿನ ನಗೆ ಬೀರಿದರು. 2014ರಲ್ಲಿ ಕಾಂಗ್ರೆಸ್ನ ಬಿಎನ್ ಚಂದ್ರಪ್ಪ ವಿಜಯಮಾಲೆ ಧರಿಸಿದರು. 2019ರಲ್ಲಿ ಎ.ನಾರಾಯಣಸ್ವಾಮಿ ಬಿಜೆಪಿಯಿಂದ ಗೆಲುವು ಸಾಧಿಸಿದ್ದರು.
2024ರ ಚುನಾವಣೆಯಲ್ಲಿ ಬಿಜೆಪಿ, ಮಾಜಿ ಸಚಿವ ಗೋವಿಂದ ಕಾರಜೋಳ ಮತ್ತೆ ಕೋಟೆ ನಾಡಿನಲ್ಲಿ 47065 ಮತಗಳ ಹಂತರದಿಂದ ಗೆದ್ದು ಬೀಗಿ ಬಿಜೆಪಿ ಖಾತೆ ತೆರೆದಿದ್ದಾರೆ ಚಿತ್ತದುರ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹೆಚ್ಚು ಕಾಂಗ್ರೆಸ್ ಶಾಸಕರಿದ್ದರೂ ಸಹ ಬಿಜೆಪಿ ಜೆಡಿಎಸ್ ಮೈತ್ರಿಯ ಮುಂದೆ ಕೈ ಸೋಲುವಂತೆ ಮಾಡಿದೆ ಕಾಂಗ್ರೆಸ್ ಭದ್ರಕೋಟೆಯಲ್ಲಿ ಕೇಸರಿ ಪಡೆ ಗದ್ದುಗೆ ಏರುವಂತಾಗಿದೆ.
0 Comments