ಚಳ್ಳಕೆರೆ – ಕೊಟ್ಟಿಗೆಯಲ್ಲಿದ್ದ ಕಟ್ಟಿಹಾಕಿದ್ದ ಎತ್ತನ್ನು ರಾತ್ರೋ ರಾತ್ರಿ ಕದ್ದೊಯ್ದು ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಹೌದು ಇದು ಚಳ್ಳಕೆರೆ ತಾಲೂಕಿನ ಕೊರಡಿಹಳ್ಳಿ ಗ್ರಾಮದ ರೈತ ಅಶೋಕ್ ಎಂಬುವರಿಗೆ ಸೇರಿದ ಎತ್ತನ್ನು ಕದ್ದು ಮಲ್ಲೂರಹಳ್ಳಿ ಭರಮಸಾಗರಹಟ್ಟಿ ಬಳಿ ಎತ್ತಿನ ಕತ್ತು ಕೊಯ್ದು ಹತ್ಯೆ ಮಾಡಲಾಗಿದೆ. ಮಲ್ಲೂರಹಳ್ಳಿಯ ಲೊಕೇಶ, ತಿಪ್ಪೇಸ್ವಾಮಿ, ನಾಗೇಶ್ ವಿರುದ್ಧ ಎತ್ತನ್ನು ಕದ್ದೊಯ್ದು ಹತ್ಯೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ನಾಯಕನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments