ಚಳ್ಳಕೆರೆ ಆ.5.ಕೊಳವೆಬಾವಿಗಳಲ್ಲಿ ನೀರಿದ್ದರೂ ಬೆಳೆಗೆ ಹರಿಸಲಾಗದ ಸ್ಥಿತಿ. ನೀರಿಲ್ಲದೆ ಒಣಗುತ್ತಿರುವ ಬೆಳೆಗಳು .
ಹೌದು ಇದು ಚಳ್ಳಕೆರೆ ತಾಲೂಕಿನ ನನ್ನಿವಾಳ ಗ್ರಾಪಂ ವ್ಯಾಪ್ತಿಯ ಬುಡಕಟ್ಟು ಸಮುದಾಯ ಪಶುಸಂಗೋಪನೆ ಜತೆಗೆ ಕೃಷಿಯಲ್ಲಿ ತೊಡಗೆ ಹೂ ವು. ತರಕಾರಿ. ಜೋಳ.ರಾಗಿ. ಶೇಂಗಾ ಬಿತ್ತನೆ ಮಾಡಿ ಜೀವನ ಸಾಗಿಸುವ ವರವಿನೋರಹಟ್ಟಿ ಸಮೀಪದ ಕಾವಲಿ ಪಾಲಯ್ಯ ಅವರ ಜಮೀನಿನಲ್ಲಿರುವ ವಿದ್ಯುತ್ ಪರಿವರ್ತಕ ಸುಟ್ಟು ಸುಮಾರು ತಿಂಗಳು ಕಳೆದರೂ ದುರಸ್ಥಿಯಾಗದೆ ಇರುವುದರಿಂದ ನೀರಿಲ್ಲದೆ ಫಸಲಿಗೆ ಬಂದ ಬದನೆ ಕಾಯಿ ಬೆಳೆ ಒಣಗಿ ಹೋಗಿದ್ದು ಈಗ ತರಕಾರಿ ಬೆಲೆ ಗಗನಕ್ಕೇರಿದ್ದು ಕಟಾವಿಗೆ ಬಂದ ಬದನೇ ಗಿಡಗಳು ಒಣಗಲು ಪ್ರಾರಂಭಿಸಿದ್ದು ಸುಟ್ಟ ಪರಿವರ್ತಕ ದುರಸ್ಥಿಗಾಗಿ ಬೆಸ್ಕಾಂ ಕಚೇರಿಗೆ ರೈತ ಹಲೆದಾಡಿದರೂ ಪ್ರಯೋಜನವಾಗದೆ ಕಂಗಲಾಗಿದ್ದಾನೆ.
![](https://janadhwani.in/wp-content/uploads/2023/08/Screenshot_20230805_083337.png)
ವಿದ್ಯುತ್ ಪರಿವರ್ತಕ ಸುಟ್ಟಿರುವ ಬಗ್ಗೆ ಬೆಸ್ಕಾಂ ಇಲಾಖೆ ಗಮನಕ್ಕೆ, ಸ್ಥಳೀಯ ಲೈನ್ ಮ್ಯಾನ್ ಗಳ ಗಮನಕ್ಕೆ ತಂದರು, ಸುಟ್ಟ ವಿದ್ಯುತ್ ಪರಿವರ್ತಕ ಬದಲಾವಣೆ ಮಾಡುತ್ತಿಲ್ಲ.ಇಂದು, ನಾಳೆ ಬದಲಾವಣೆ ಮಾಡಿ ಕೊಡುತ್ತೇವೆ, ನೂತನ ಪರಿವರ್ತಕ ತಂದು ಸುಟ್ಟು ಇರುವ ಪರಿವರ್ತಕವನ್ನು ತೆಗೆದುಕೊಂಡು ಹೋಗುತ್ತೇವೆ ಎನ್ನುತ್ತಾರೆ.ಬೆಸ್ಕಾಂ ಅಧಿಕಾರಿಗಳು ವಿದ್ಯುತ್ ಪರಿವರ್ತಕ ಕೆಟ್ಟು ಒಂದು 45 ದಿನಗಳಿಂದ ವಿದ್ಯುತ್ ಇಲ್ಲದೆ ಬೆಳೆಗಳಿಗೆ ನೀರು ಹಾಯಿಸಲು ಸಾಧ್ಯವಾಗುತ್ತಿಲ್ಲ. ವಿದ್ಯುತ್ ಪರಿವರ್ತಕವನ್ನು ದುರಸ್ತಿಪಡಿಸಲು ಬೆಸ್ಕಾಂ ಅಧಿಕಾರಿಗಳು ಮುಂದಾಗುತ್ತಿಲ್ಲ ಎಂದು ರೈತ ಪಾಲಯ್ಯ ಆರೋಪಿಸಿದ್ದಾರೆ. ಈಗಲಾದರೂ ಸಂಬಂಧ ಪಟ್ಟ ಅಧಿಕಾರಿಗಳು ಸುಟ್ಟ ವಿದ್ಯುತ್ ಪರಿವರ್ತಕ ಸುಟ್ಟಿರುವುದನ್ನು ದುರಸ್ಥಿ ಪಡಿಸುವರೇ ಕಾದು ನೋಡ ಬೇಕಿದೆ.
![](https://janadhwani.in/wp-content/uploads/2023/08/Screenshot_20230805_083328.png)
0 Comments