ಚಳ್ಳಕೆರೆ ಆ.17.ಕಳೆದ ತಿಂಗಳು ಸ್ವಲ್ಪಮಟ್ಟಿಗೆ ಕರುಣೆ ತೋರಿದ ಅಕಾಲಿಕ ಮಳೆ ನಂತರ ಮಾಯವಾದ ಮಳೆರಾಯ ಬಿತ್ತನೆ ಮಾಡಿದ ಬೆಳೆ ಬಾಡುತ್ತಿದ್ದು ಮತ್ತೊಂದೆಡೆ ರೋಗಬಾಧೆ ಕೂಡ ಹೆಚ್ಚಾಗಿದ್ದು ಅನ್ನದಾತರನ್ನು ಚಿಂತೆಗೀಡು ಮಾಡುವಂತಾಗಿದೆ. ಹೌದು ಇದು ಚಳ್ಳಕೆರೆ ತಾಲೂಕಿನ ಪ್ರಮುಖ ವಾಣಿಜ್ಯ ಬೆಳೆ ಬಡವರ ಬಾದಾಮಿ ಎಂದು ಖ್ಯಾತಿ ಪಡೆದಿರುವ ಶೇಂಗಾ ಬೆಳೆ ಮೇಲೆ
ಮಳೆರಾಯನ ವಕ್ರದೃಷ್ಟಿಯಿಂದ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ಶೇಂಗಾ ಬೆಳೆಗಳು ಸಕಾಲಕ್ಕೆ ಮಳೆ ಬಾರದೆ
ಬಿಸಿಲಿನ ತಾಪಕ್ಕೆ ಬಾಡಲು ಪ್ರಾರಂಭವಾಗಿದ್ದು ಅನ್ನದಾತ ಮಳೆರಾಯನ ಕೃಫೆಗಾಗಿ ಮುಗಿಲು ನೋಡುವಂತಾಗಿದೆ. ರೈತರು ಮುಂಗಾರು ಹಂಗಾಮಿನಲ್ಲಿ ಸುರಿದ ಕಡಿಮೆ ಪ್ರಮಾಣದ ಮಳೆಯಿಂದ ಕಡಿಮೆ ಭೂಮಿ ತೇವಾಂಶ ಹಾಗೂ ಒಣ ಭೂಮಿಗೆ ದುಬಾರಿ ಬೆಲೆಯ ಬಿತ್ತನೇ ಶೇಂಗಾ ಬಿತ್ತನೆ ಮಾಡಿದ ನಂತರ ಕಳೆದ ತಿಂಗಳಲ್ಲಿ ಎಡೆಬಿಡದೆ ಸುರಿದ ಅಕಾಲಿಕ ಮಳೆಯಿಂದಾಗಿ ಶೇಂಗಾ ಬೆಳೆಯಲ್ಲಿ ಹೆಚ್ಚು ಕಳೆಹುಲ್ಲು ಬೆಳೆದು ಕಳೆತೆಗೆಯಲು ಕೀಟನಾಶಕ. ಎಡೆಕುಂಟೆ ಹೊಡೆದು ಕೂಲಿ ಹಾಳುಗಳ ಸಹಾಯದಿಂದ ಕಳೆ ಹುಲ್ಲು ಸ್ವಚ್ಚ ಪಡಿಸಿಕೊಂಡಿದ್ದು ಶೇಂಗಾ ಬೆಳೆ ಬಿತ್ತನೆ ಮಾಡಿ ಎರಡು ತಿಂಗಳು ಕಳೆದರೂ ಶೇಂಗಾ ಬೆಳೆ ನೆಲ ಬಿಟ್ಟು ಎತ್ತರಕ್ಕೆ ಬೆಳೆದಿಲ್ಲ ಈಗ ಹೂ .ಕಾಯಿ ಕಟ್ಟಲು ಪ್ರಾರಂಭಿಸಿದ್ದು ಮಳೆಯ ಕೊರತೆಯಿಂದ ಭೂಮಿಯಲ್ಲಿ ತೇವಾಂಶವಿಲ್ಲದೆ ಬೆಳೆಗಳು ಒಣಗಲು ಪ್ರಾರಂಭಿಸಿದ್ದು ಇನ್ನು ಒಂದು ವಾರದೊಳಗೆ ಮಳೆ ಬಾರದಿದ್ದರೆ ಬೆಳೆಗಳು ಸಂಪೂರ್ಣವಾಗಿ ಒಣಗಲಿದ್ದು ಈ ಬಾರಿಯೂ ಮಳೆ ಕೈಕೊಟ್ಟರೆ
ತೀವ್ರ ಬರಗಾಲಕ್ಕೆ ಸಿಲುಕುವ ಆತಂಕ ರೈತರಲ್ಲಿ ಮನೆ ಮಾಡಿದೆ.
ತಾಲೂಕಿನ ಮು೦ಗಾರು ಆರಂಭದಲ್ಲಿ ಉತ್ತಮ ಮಳೆ ಬಂದು ರೈತಾಪಿ
ವರ್ಗಕ್ಕೆ ಒಂದಿಷ್ಟು ಸಂತಸದ ಸನ್ನಿವೇಶ ಉಂಟಾಗಿ ಶೇಂಗಾ ಬಿತ್ತನೆ
ಮಾಡಿದ್ದರು. ಎಡಕು೦ಟೆ, ಕಳೆ, ತೆಗೆದು ಹೂವು ಕಾಯಿ ಕಟ್ಟುವ ಸಮಯಕ್ಕೆ
ಸರಿಯಾಗಿ ಮಳೆ ಕೈಕೊಟ್ಟ ಕಾರಣ ಬೆಳೆಗಳಿಗೆ ಕೊಳ, ಬೆಂಕಿ ರೋಗ
ಕಾಣಿಸಿಕೊಂಡಿತ್ತು. ಈಗ ಬಿಸಿಲಿನ ತಾಪ ಹೆಚ್ಚಾಗಿದ್ದು ರೈತರು ಸಾಲ-ಸೂಲ
ಮಾಡಿ ಬಿತ್ತನೆ ಮಾಡಿದ್ದ ಶೇ೦ಗಾ ಬೆಳೆಹೂವು, ಕಾಯಿಕಟ್ಟುವ ಸಮಯದಲ್ಲಿ
ಮಳೆ ಕೈ ಕೊಟ್ಟಿದ್ದರಿ೦ದ ಬೆಳೆ ಸುಟ್ಟು ಕರಲಾಗಲು ಪ್ರಾರಂಭಿಸಿದೆ.
. ಆಗೊಮ್ಮೆ ಈಗೊಮ್ಮೆ ಕೆಲವು ಕಡೆ ಮಳೆ
ಬಂದರೆ ಮತ್ತೊ೦ದು ಕಡೆ ಮಳೆ ಬಾರದೆ ಮುಗಿಲಿನತ್ತ ನೋಡುತ್ತ ರೈತ,
‘ಎಲ್ಲಿ ಓಡುವಿರಿ ನಿಲ್ಲಿ ನಿಲ್ಲಿ ಮೋಡಗಳೇ ನಾಲ್ಕು ಹನಿಯ ಚೆಲ್ಲಿ ಹೋಗಿ’
ಎಂದು ಪ್ರಾರ್ಥನೆ ಮಾಡಿದರೂ ಮಳೆರಾಯ ಕರುಣೆ ತೋರಿಸುತ್ತಿಲ್ಲ.
ಬಯಲು ಸೀಮೆಯ ರೈತರು ಸುಮಾರು 15 ವರ್ಷಗಳಿಂದ ಸಕಾಲಕ್ಕೆ
ಮಳೆ ಬೆಳೆಯಾಗದೇ ಅತಿವೃಷ್ಟಿ-ಅನಾವೃಷ್ಟಿಗೆ ಸಿಲುಕಿ ನಷ್ಟ ಅನುಭವಿಸು
ತ್ತಲೇ ಇದ್ದಾರೆ. ಬೆಳೆ ಬಾರದೆ ಇದಕ್ಕೆ ಸಂಬಂಧಿಸಿದ ವಿಮೆ ಸಹ ಬರದೇ
ರೈತರು ಸಾಲದ ದವಡಗೆ ಸಿಲುಕುವಂತೆ ಮಾಡಿದೆ. ಈ ಹಿಂದೆ ಮಾಡಿರುವ ಸಾಲ ಒಂದು ಕಡೆ
ಯಾದರೆ ಈಗ ಮತ್ತೆ ಮತ್ತೆ ಸಾಲ ಮಾಡಬೇಕಾದ ಸನ್ನಿವೇಶ ಎದುರಾಗು
ತಲೇ ಇವೆ. ಪ್ರತಿ ವರ್ಷದಂತೆ ಈ ಬಾರಿಯೂ ಈರುಳ್ಳಿ, ಶೇಂಗಾ, ತೊಗರಿ,ಸಜ್ಜೆ, ಜೋಳ ಸೇರಿದಂತೆ ವಿವಿಧ ಬೆಳೆಗಳನ್ನು ರೈತರು ಬಿತ್ತನೆ ಮಾಡಿದ್ದು,
ಮಳೆ ಕೈಕೊಟ್ಟ ಕಾರಣ ಋಷ್ಠಿ ಭೂ ಪ್ರದೇಶಗಳತ್ತ ಒಮ್ಮೆ ಕಣ್ಣು ಹಾಯಿಸಿದರೆ
ಹೊಲಗಳಲ್ಲಿ ಶೇಂಗಾ ಒಣಗಲು ಪ್ರಾರಂಭಿಸುವ ದೃಶ್ಯ ಕಂಡುಬರುತ್ತದೆ. ರೈತರಿಗೆ ಈ
ಬಾರಿಯೂ ಭರದ ಛಾಯೆ ಇದ್ದು ರೈತರಲ್ಲಿ ಆತಂಕವನ್ನುಂಟು ಮಾಡಿದೆ.
ಬೆಳೆ ಹಾನಿದರೂ ಅವೈಜ್ಞಾನಿಕ ಬೆಳೆ ವಿಮೆ ಪದ್ದತಿಯಿಂದ ಕಳೆದ
ವರ್ಷ ಬಿತ್ತನೆ ಮಾಡಿದ ಶೇಂಗಾ ಬೆಳೆ ನಷ್ಟ ವಾದರೂ ಬೆಳೆ ವಿಮೆ ಪಾವತಿ
ಮಾಡಿಲ್ಲ. ಈ ಬಾರಿಯೂ ಮಳೆಯಿಲ್ಲದೆ ಬೆಳೆಗಳು ಒಣ ಗಲು ಪ್ರಾರ೦ಭಿ
ಸಿದ್ದು ಈಗಲಾದರೂ ರೈತರು ಕಟ್ಟಿದ ಬೆಳೆ ವಿಮೆ ಈ ಬಾರಿಯಾದರು ಬಿಡುಗಡೆ ಮಾಡಲು ಸಂಬಂಧ ಪಟ್ಟ ಅಧಿಕಾರಿಗಳು ಮುಂದಾಗುವರೇ ಕಾದು ನೋಡ ಬೇಕಿದೆ.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments