ಚಳ್ಳಕೆರೆ ಜ.23 ಕೇತೆದೇವರ ಮುಳ್ಳಿನಪರಿಶೆ ನಡೆಯವ ವಸಲು ದಿನ್ನೆಯ ಸ್ಥಳದಲ್ಲಿ ಜಾತ್ರೆಗೆ ಬರುವ ಭಕ್ತಾಧಿಗಳಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಯವಂತೆ ತಾಪಂ ಇಒ ಶಶಿಧರ್ ಹೇಳಿದರು.
ಚಳ್ಳಕೆರೆ ತಾಲೂಕಿನ ಚನ್ನಮ್ಮನಾಗತಿಹಳ್ಳಿ ಗ್ರಾಪಂ ವ್ಯಾಪ್ತಿಯ ಪುರ್ಲಹಳ್ಳಿ ಸಮೀಪದ ವಸಲು ದಿನ್ನೆಯಲ್ಲಿ ಜಾತ್ರೆ ನಡೆಯವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದರು. ಜಾತ್ರೆಯಲ್ಲಿ ಸಾವೀರಾರು ಭಕ್ತರ ಜನಸಾಗರಸೇರಲಿದ್ದು ಕುಡಿಯುವ ನೀರು .ಸ್ವಚ್ಚತೆ. ಜಾತ್ರೆಗೆ ಬರುವ ರಸ್ತೆಯ ಅಭಿವೃದ್ದಿ.ಜಾತ್ರೆಗೆ ಬರುವ ಎತ್ತಿನ ಗಾಡಿ ಹಾಗೂ ವಾಹನ ನಿಲುಗಡೆಗೆ ಪೋಲಿಸರ ಮಾರ್ಗದರ್ಶನದಂತೆ ಪಾರ್ಕಿಂಗ್ ವ್ಯವಸ್ಥೆ ಮಾಡುವಂತೆ ತಿಳಿಸಿದರು.
ಗ್ರಾಪಂ ಅಧ್ಯಕ್ಷ ಆನಂದ್ ಕುಮಾರ್ ನಾತನಾಡಿ ಪೊಲೀಸ್ ಇಲಾಖೆ ಹಾಗೂ ಗುಡಿ ಗೌಡರ ಮಾರ್ಗದರ್ಶನದಲ್ಲಿ ಜಾತ್ರೆಗೆ ಬರುವ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಮುಂಜಾಗೃಯೆಯಾಗಿ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ. ಚನ್ನಮ್ಮನಾಗತಿಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಪುರಲೇಹಳ್ಳಿ ಯಲ್ಲಿ ಕರ್ನಾಟಕದ ಬುಡಕಟ್ಟು ಸಂಸ್ಕೃತಿಯ ಆಚರಣೆಯಾದ ಬಾರೆಕಳ್ಳೆ ಹತ್ತಿ ಕಳಸ ಕೀಳುವ ಪರಿಸೆ ಸ್ಥಳದಲ್ಲಿ ಕುಡಿಯುವ ನೀರು, ಸ್ವಚ್ಛತೆ, ಬೆಳಕು, ವಾಹನ ನಿಲುಗಡೆ ಸ್ಥಳಕ್ಕೆ ಚನ್ನಮ್ಮನಾಗತಿಹಳ್ಳಿ ವತಿಯಿಂದ ಪರುಶುರಾಂಪುರ ಆರಕ್ಷಕ ಠಾಣೆಯ ನಿರ್ದೇಶನ ಮೇರೆಗೆ ಮಾಡಲಾಗಿದೆ ಎಂದು ತಿಳಿಸುದರು. ಈ ಸಂದರ್ಭದಲ್ಲಿ . ಪಿ ಡಿಒ ಉದಯಕುಮಾರ್ ಹಾಗೂ ಗ್ರಾಮ ಪಂ ಸದಸ್ಯರುಗಳಾದ ರಾಜಣ್ಣ. ಶಿಲ್ಪಾಬಸವರಾಜ್ .ಶಿವಣ್ಗ ಗೌರಮ್ಮ ಯಲ್ಲಪ್ಪ ಚೌಳೂರು ಗ್ರಾಮದ ಕುಮಾರ್ ದೇವರ ಪೂಜಾರಿಗಳು ಗುಡಿಕಟ್ಟಿನ ಮುಖಂಡರು ಹಾಗೂ ಪರಶುರಾಂಪುರ ಪಿಎಸ್ ಐ ಬಸವರಾಜ್ ಇತರರಿದ್ದರು.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments