ನಾಯಕನಹಟ್ಟಿ:: ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಗ್ರಾಮೀಣ ಪ್ರದೇಶದ ಕಟ್ಟ ಕಡೆಯ ವ್ಯಕ್ತಿಗೆ ಸೌಲಭ್ಯವನ್ನು ಒದಗಿಸುವಂತಹ ಯೋಜನೆಗಳನ್ನು ರೂಪಿಸುವ ಮೂಲಕ ಇಡೀ ದೇಶವನ್ನ ಅಭಿವೃದ್ಧಿಪತ ದತ್ತ ಕೊಂಡೊಯ್ಯುವಂತ ಕೆಲಸವನ್ನು ಮಾಡಿದ್ದಾರೆ ಎಂದು ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಹೇಳಿದ್ದಾರೆ.
ಸೋಮವಾರ ಹೋಬಳಿಯ ಗೌಡಗೆರೆ ಗ್ರಾಮದಲ್ಲಿ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ಚಿತ್ರದುರ್ಗ ಕೆನರಾ ಬ್ಯಾಂಕ್ ಜೋಗಿಹಟ್ಟಿ ಇವರ ಸಹಯೋಗದಲ್ಲಿ ಅಭಿವೃದ್ಧಿ ಹೊಂದಿದ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮವನ್ನು ಜ್ಯೋತಿ ಬೆಳಗುವುದರ ಮುಖಾಂತರ ಉದ್ಘಾಟಿಸಿ ಮಾತನಾಡಿ. ಕೇಂದ್ರ ಸರ್ಕಾರದ ಯೋಜನೆಗಳನ್ನು ಪ್ರತಿ ಮನೆ ಮನೆಗೆ ತಿಳಿಸುವಂತಹ ಕಾರ್ಯವನ್ನ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಅವರ ಕೇಂದ್ರ ಸರ್ಕಾರದ ಸತ್ಯತೆ ತಿಳಿಯಲು ಈ ಸಂಕಲ್ಪ ಯಾತ್ರೆಯನ್ನು ಆಯೋಜಿಸಲಾಗಿದೆ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಅವರು ನನ್ನ ಸರ್ಕಾರ ಕೊಟ್ಟಂತಹ ಯೋಜನೆಗಳು ಪಾಲಪ್ರದಾಯಕವಾಗಿವೆ ಅಥವಾ ಇಲ್ಲವೋ ಎಂಬುವ ದೃಷ್ಟಿಯಿಂದ ಯಾವುದೇ ಪ್ರಧಾನಿ ಸ್ವಾತಂತ್ರ ಬಂದು 75 ವರ್ಷ ಕಳೆದರೂ ಒಬ್ಬ ಮತದಾರರ ಹತ್ತಿರ ಮುಕ್ತವಾಗಿ ಚರ್ಚೆ ಮಾಡುವಂತಹ ಕೆಲಸವನ್ನು ಯಾರು ಮಾಡಿಲ್ಲ ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಅವರು ಸಂಕಲ್ಪವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಮಂಡಲ ಅಧ್ಯಕ್ಷ ಈ ರಾಮರೆಡ್ಡಿ, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಓ. ಮಂಜುನಾಥ್ ಮಲ್ಲೂರಹಳ್ಳಿ, ಜಿಲ್ಲಾ ಎಸ್ ಟಿ ಮೋರ್ಚಾ ಅಧ್ಯಕ್ಷ ಪಿ ಶಿವಣ್ಣ, ರೈತ ಮೋರ್ಚಾ ಮಂಡಲ ಅಧ್ಯಕ್ಷ ಬಾಲರಾಜ್, ಕೇಂದ್ರ ಸಚಿವ ಎ ನಾರಾಯಣಸ್ವಾಮಿ ರವರ ಆಪ್ತ ಸಹಾಯಕ ಜಿ ಎಚ್ ಮೋಹನ್ ಕುಮಾರ್, ಗೌಡಗೆರೆ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಜಿ.ಒ ಓಬಳೇಶ್, ಎಂ ಎಚ್ ಲಕ್ಷ್ಮಣ್, ಗಿಣಿಯರ್ ತಿಪ್ಪೇಶ್, ಡಿ ಜಿ ಮಂಜಮ್ಮ, ಲೀಡ್ ಬ್ಯಾಂಕ್ ಮೆನೇಜರ್ ತಿಪ್ಪೇಶ್, ನಬಾರ್ಡ್ ಮೆನೇಜರ್ ಕವಿತಾ, ನಾಯಕನಹಟ್ಟಿ ಕೆನರಾ ಬ್ಯಾಂಕ್ ಮ್ಯಾನೇಜರ್ ರಾಮ್ ಮೋಹನ್, ಜೋಗಿಹಟ್ಟಿ ಕೆನರಾ ಬ್ಯಾಂಕ್ ಮ್ಯಾನೇಜರ್ ಗೌರಿ, ಮತ್ತು ಪೊಲೀಸ್ ಇಲಾಖೆಯ ಪಿಎಸ್ಐ -2 ಶಿವಕುಮಾರ್ ಪಿಎಸ್ಐ ತಿಪ್ಪೇಸ್ವಾಮಿ ಪೇದೆ ಉಮೇಶ್, ನಲಗೇತನಹಟ್ಟಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಮುದಾಯ ಆರೋಗ್ಯ ಅಧಿಕಾರಿಗಳಾದ ಹೊನ್ನೂರ ಸ್ವಾಮಿ, ಕಾವ್ಯ, ಕೆಂಚಮ್ಮ ,ಸಂಪಿಗೆ, ಆಶಾ ಕಾರ್ಯಕರ್ತೆ ಜಯಲಕ್ಷ್ಮಿ , ಸೇರಿದಂತೆ ವಿವಿಧ ಗ್ರಾಮಗಳಿಂದ ಆಗಮಿಸಿದ ಗ್ರಾಮಸ್ಥರು ಇದ್ದರು.
0 Comments