ಚಳ್ಳಕೆರೆ ಜನಧ್ವನಿ ವಾರ್ತೆ ಅ.7. ಹತ್ತಾರು ವರ್ಷಗಳಿ ಹಿಂದೆ ಇದು ಕೇವಲ ಆಹಾರ ಉತ್ಪಾದನೆ ಲೆಕ್ಕಾಚಾರಕ್ಕೆ ಮಾತ್ರ ಬೆಳೆ ಕಟಾವು ಸಮೀಕ್ಷೆ ವರದಿ ಸೀಮಿತವಾಗಿತ್ತು. ಆದರೆ ಬೆಳೆ ವಿಮೆ ಬೆಳೆ ಪರಿಹಾರ ಪಡೆಯಲು ಸಹಕಾರಿಯಾಗಿದ್ದು ಕೇಂದ್ರ ಬರ ಅಧ್ಯಯನ ತಂಡದ ಸಮ್ಮುಖದಲ್ಲಿ ಮಾಡಿದ ಬೆಳೆ ಕಟಾವು ಜೀರೋ ಬಂದಿದೆ.
ಹೌದು ಇದು ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಹೋಬಳಿಯ ರಾಮದುರ್ಗ ಗ್ರಾಮದ ರಂಗಸ್ವಾಮಿ ನಾಯ್ಕ ಇವರ 54/2, ಸರ್ವೇ ನಂಬರ್ ನಲ್ಲಿ 6.20 ಎಕರೆಯಲ್ಲಿ ಶೇಂಗಾ ಬೆಳೆದಿದ್ದು, ಕೇಂದ್ರ ಬರ ಅಧ್ಯಯನ ತಂಡಕ್ಕೆ ಬೆಳೆ ಕಟಾವು ಸಮೀಕ್ಷೆ ಪ್ರಯೋಗ ಮಾಡಿ ತೋರಿಸಲಾಯಿತು ಅದರಲ್ಲಿ 0 ಇಳುವರಿ ಬಂದಿದ್ದು ಭೀಕರ ಬರಗಾಲಕ್ಕೆ ಇದು ಸಾಕ್ಷಿಯಾಯಿತು. ವಿಮಾ ಕಂಪನಿಯೂ ಒಳಗೊಂಡು ಕಂದಾಯ, ಕೃಷಿ, ತೋಟಗಾರಿಕೆ, ಸಾಂಖಿಕ ಇಲಾಖೆಗಳು ಒಟ್ಟಾಗಿ ಈ ಕಾರ್ಯವನ್ನು ಕೈಗೊಳ್ಳುತ್ತವೆ. ಹಿಂಗಾರು ಮುಂಗಾರು ಬೆಳೆ ಕಟಾವು ಮೂಲಕ ಬೆಳೆ ಪ್ರಮಾಣವನ್ನು ನಿರ್ಧರಿಸಲಾಗುತ್ತದೆ. ಪ್ರಕೃತಿ ವಿಕೋಪದ ಸಂದರ್ಭದಲ್ಲಿ ರ್ಯಾಂಡಮ್ ರೀತಿಯಲ್ಲಿ ಬೆಳೆ ಬಗೆಗೆ ಪಾರದರ್ಶಕವಾಗಿ ಲೆಕ್ಕಾಚಾರ ಮಾಡಲಾಗುತ್ತದೆ ಎಂದು ಕೃಷಿ ಅಧಿಕಾರಿಗಳು ಮಾಹಿತಿ ನೀಡಿದರು. ಬೆಳೆ ಕಟಾವು ಪ್ರಯೋಗ ಆಧರಿಸಿ ಬೆಳೆ ವಿಮೆ ಕಂಪನಿಗಳು ವಿಮೆ ಮೊತ್ತ ನಿರ್ಧರಿಸುತ್ತವೆಕೇಂದ್ರ ಬರ ಅಧ್ಯಯನ ತಂಡಕ್ಕೆ ಬೆಳೆ ಕಟಾವು ಸಮೀಕ್ಷೆ ಪ್ರಯೋಗ ಮಾಡಿ ತೋರಿಸಲಾಯಿತು ಅದರಲ್ಲಿ 0 ಇಳುವರಿ ಆದರೆ ಸರಿಯಾದ ಸಮಯಕ್ಕೆಮಳೆ ಬಾರದೆ ಬೆಳೆಗಳ ಇಳುವರಿ ಕುಂಠಿತಗೊಂಡಿದ್ದು ಶೇಂಗಾ ಗಿಡ ಕಿತ್ತಾಗ ಒಂದು ಗಿಡದಲ್ಲಿ ಒಂದು ಎರಡು. ಐದು ಈಗೆ ಕಾಯಿಕಟ್ಟಿರುವುದನ್ನು ಬರ ಅಧ್ಯಯನ ತಂಡ ನೋಡಿ ಬೆಳೆ ನಷ್ಟದ ಬಗ್ಗೆ ಕಣ್ಣಾರೆ ಕಂಡು ಬರಪರಿಸ್ಥಿಯನ್ನು ಸರಕಾರದ ಗಮನ ಸೆಳೆಯುವುದಾಗಿ ತಿಳಿಸಿದ್ದಾರೆ.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಸಭೆಯಲ್ಲಿ ಈಗಾಗಲೆ ಜಿಲ್ಲಾಧಿಕಾರಿ ಧೀವ್ಯ ಪ್ರಭು ಸಹ ಕೃಷಿ.ತೋಟಗಾರಿಕೆಮ ಬೆಳೆವಿಮೆ ಕಂಪನಿ ಸೇರಿದಂತೆ ಅಧಿಕಾರಿಗಳಿಗಳಿಗೆ ಬೆಳೆ ವಿಮೆ ನಿಗದಿಗೆ ಸ್ಥಳೀಯವಾಗಿ ನಡೆಸಿದ ಬೆಳೆ ಕಟಾವು ಪ್ರಯೋಗವೇ ಆಧಾರ. ಇದರಲ್ಲಿ ಯಾವುದೇ ರೀತಿಯ ತಪ್ಪು ಉಂಟಾಗಬಾರದು. ತಂತ್ರಾಂಶದಲ್ಲಿ ಅಂಕಿ ಅಂಶಗಳು ತಪ್ಪಾಗದಂತೆ ಪ್ರಯೋಗದ ವಿವರಗಳನ್ನು ಭರ್ತಿ ಮಾಡಬೇಕು. ಬೆಳೆ ಕಟಾವು ಮಾಡಲು ನಿಯೋಜಿಸಿದ ಅಧಿಕಾರಿ ಹಾಗೂ ನೌಕರರೇ ಖುದ್ದಾಗಿ ರೈತರ ಜಮೀನಿಗೆ ತೆರಳಿ ಕಟಾವು ಪ್ರಯೋಗ ಕೈಗೊಳ್ಳಬೇಕು’ ಎಂದು ಸೂಚಿಸಿದ್ದಾರೆ. ಈ ಸಂದರ್ಭದಲ್ಲಿ ಕೇಂದ್ರ ಜಲ ಆಯೋಗದ ನಿರ್ದೇಶಕ ಅಶೋಕ್ ಕುಮಾರ್. ವಿ.ಎಂ.ಎನ್.ಸಿ.ಎಫ್.ಸಿ. ಹಾಗೂ ಕೃಷಿ ಮತ್ತು ರೈತ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಕರಣ್ ಚೌದರಿ ಆಹಾರ ನಾಗರೀಕ ಸರಬರಾಜ ಇಲಾಖೆ ಉಪಯಾರ್ಯದರ್ಶಿ ಸಂಗೀತಕುಮಾರ್ , ರಾಜ್ಯ ಪ್ರಕೃತಿವಿಕೋಪ ನಿರ್ವಹಣಾ ಕೇಂದ್ರದ ಹಿರಿಯ ಸಲಹೆ ಗಾರ ಡಾ.ಶ್ರೀನಿವಾಸ್ ರೆಡ್ಡಿ,ಜಿಲ್ಲಾಧಿಕಾರಿ ಧೀವ್ಯಪ್ರಭು, ಜಿಪಂ ಸಿಇಒ ಸೋಮಶೇಖರ್, ಅಪಾರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಉಪವಿಭಾಗಾಧಿಕಾರಿ ಕಾರ್ತಿಕ್,ಜಂಟಿ ಕೃಷಿ ನಿರ್ಧೇಶಕ ಮಂಜುನಾಥ್,ತೋಟಗಾರಿಕೆ ಉಪನಿರ್ಧೇಶಕಿ ಸವಿತಾ, ತಹಶೀಲ್ದಾರ್ ರೇಹಾನ್ ಪಾಷಾ. ಕೃಷಿ ಉಪನಿರ್ಶೇಕ ಶಿವಕುಮಾರ್, ಸಹಾಯಕ ಕೃಷಿ ನಿರ್ಶೇಕ ಅಶೋಕ್ ತೋಟಗಾರಿಕೆ ಹಿರಿಯ ಸಹಾಯಕ ನಿರ್ಧೇಶಕ ವಿರುಪಾಕ್ಷಪ್ಪ, ಕೃಷಿ ಅಧಿಕಾರಿಗಳು ಕಂದಾಯ ಇಲಾಖೆ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments