ಚಳ್ಳಕೆರೆ ಜನಧ್ವನಿ ವಾರ್ತೆ ಜ.19 ತೋಟದ ಮನೆಯಲ್ಲಿ ಅಕ್ರಮವಾಗಿ ಇಟ್ಟುಕೊಂಡಿದ್ದ ಕೃಷ್ಣಮೃಗ ಹಾಗೂ ಕಾಡು ಮೊಲದ ವಶ ಓರ್ವ ಆರೋಪಿಯನ್ನು ವಶಕ್ಕೆ ಪಡೆದ ಅರಣ್ಯಾಧಿಕಾರಿಗಳು.
ಚಳ್ಳಕೆರೆ ತಾಲೂಕಿನ ಜಾಜೂರು ಗ್ರಾಮದ ಭೀಮಪ್ಪ(55) ತೋಟದ ಮನೆಯಲ್ಲಿ ಸಂಗ್ರಹಿಸಿಟ್ಟಿದ ಖಚಿತ ಮಾಹಿತಿ ಮೇರೆಗೆ ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಬಹುಗುಣ ಹಾಗೂ ಸಿಬ್ಬಂದಿಗಳು ದಾಳಿ ನಡೆಸಿಅಕ್ರಮವಾಗಿ ಮನೆಯಲ್ಲಿ ಸಂಗಹಿಸಿಟ್ಟಿದ್ದ ಕೃಷ್ಣ ಮೃಗ ಹಾಗೂ ಕಾಡು ಮೊಲದ ಚರ್ಮವನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡು ಆರೋಪಿ ಭೀಮಪ್ಪನನ್ನು ವಶಕ್ಕೆ ಪಡೆಯಲಾಗಿದೆ. ದಾಳಿಯಲ್ಲಿ ವಲಯ ಅರಣ್ಯಾಧಿಕಾರಿ ಬಹುಗುಣ. ಅರಣ್ಯಾಧಿಕಾರಿ ವಸಂತ್ ಇತರರಿದ್ದರು.
ಈಗಾಗಲೆ ಹುಲಿ ಉಗುರಿನ ರಾಜ್ಯದ್ಯಾಂತ ಹುಲಿ ಉಗುರು ಬಾರಿ ಸದ್ದು ಮಾಡಿ ಕೆಲಸ ವಿಐಪಿಗಳು ಕಂಭಿ ಹಿಂದೆ ಹೋಗಿ ಹೊರ ಬಂದ ಘಟನೆಗಳ ಬೆನ್ನಲ್ಲೆ ಯಾರ ಬಳಿ ಕಾಡು ಪ್ರಾಣೀಗಳ ಉಗುರು ಕೊಂಬು, ಚರ್ಮ ಹಾಗೂ ಶ್ರೀಗಂಧ ಸೇರಿದಂತೆ ವಿವಿಧ ವಸ್ತುಗಳನ್ನು ಅಕ್ರಮವಾಗಿ ಸಂಗಹ್ರಹಿಸಿಟ್ಟಿಕೊಂಡಿದ್ದರೆ ಇಲಾಖೆಗೆ ಮರಳಿ ಕಳಿಸುವಂತೆ ಸೂಚನೆ ನೀಡಿದ ಬೆನ್ನಲ್ಲೇ ಅನೇಕರು ಇಲಾಖೆಗೆ ಮರಳಿ ಕಳಿಸಲಾಗಿತ್ತು ಆದರೂ ಸಹ ಇನ್ನು ಮನೆಯಲ್ಲಿ ಅಕ್ರಮವಾಗಿ ಕಾಡು ಪ್ರಾಣಿಗಳು ಚರ್ಮ ಇಟ್ಟುಕೊಂಡಿರುವುದು ದಾಳಿಯಿಂದ ಬಯಲಾಗಿದೆ.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments