ಚಳ್ಳಕೆರೆ ಫೆ 8. ಬಯಲು ಸೀಮೆ ,ಬರದ ನಾಡು, ಬಿಸಿಲ ನಾಡು ಎಂದು ಖ್ಯಾತಿ ಪಡೆದಿರುವ ಪ್ರದೇಶದಲ್ಲಿ ಕೃಷಿ ಮತ್ತು ತೋಟಗಾರಿಕೆ ಒಣ ಕೃಷಿ ಭೂಮಿಸಂಶೋಧನಾ ಕೇಂದ್ರ ಸ್ಥಾಪನೆಗೆ ಕೂಡಲೆ ಅನುದಾನ ಬಿಡುಗಡೆ ಮಾಡುವಂತೆ ಕರ್ನಾಟಕ ರಾಜ್ಯ ರೈತ ಸಂಘದ ಹಿರಿಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ ಒತ್ತಾಯಿಸಿದ್ದಾರೆ.
ಚಳ್ಳಕೆರೆ ತಾಲೂಕಿನ ಸಾಣೀಕೆರೆ ಸಮೀಪದ ಬಡವನಹಳ್ಳಿ ಕಾವಲು ಪ್ರದೇಶದಲ್ಲಿ ಈಗಾಗಲೆ ಸುಮಾರು 95 ಎಕರೆ ಭೂಮಿ ಮೀಸಲಿಟ್ಟು ಸುಮಾರು 10 ವರ್ಷಗಳು ಕಳೆಯಲು ಬಂದರೂ ಸಕರಾರ ಇನ್ನು ಅನುದಾನ ಬಿಡುಗಡೆ ಮಾಡಲು ಮೀನಾ ಮೇಷ ಎಣಿಸುತ್ತಿದೆ. ಬಿಜೆಪಿ ಸರಕಾರ ಮುಖ್ಯ ಮಂತ್ರಿ ಯಡಿಯೂರಪ್ಪ ಅವಧಿಯಲ್ಲೂ ಅನುದಾನ ಬಿಡುಗಡೆ ಮಾಡುವಂತೆ ಮನವಿ ನೀಡಲಾಗಿತ್ತು. ಜಿಲ್ಲಾಧಿಕಾರಿಗಳ ಮೂಲಕವೂ ಸರಕಾರ ಅನುದಾನ ಬಿಡುಗಡೆ ಮಾಡುವಂತೆ ಸಾಕಷ್ಟು ಬಾರಿ ಮನವಿ ನೀಡಲಾಗಿದೆ.
ಹಿರಿಯೂರು ಸಮೀಪದ ಬಬ್ಬೂರು ಗ್ರಾಮದ ಕೃಷಿ ಮತ್ತು ಸಂಶೋಧನಾ ಕೇಂದ್ರದ ಶತಮಾನೋತ್ಸವ ಕಾರ್ಯಕ್ರಕ್ಕೆ ಬಂದಿದ್ದು ಮುಖ್ಯ ಮಂತ್ರಿ ಸಿದ್ದರಾಮಯ್ಯ ನವರಿಗೆ ಮನವಿ ನೀಡಿದಾಗ ಅನುದಾನ ಬಿಡುಗಡೆ ಮಾಡುವುದಾಗ ರೈತರಿಗೆ ಭರವಸೆ ನೀಡಿದ್ದರೂ ಸಹ ಅನುದಾನ ನೀಡಲು ಮುಂದಾಗುತ್ತಿಲ್ಲ ಈ ಬಾರಿ ಬಜೆಟ್ ನಲ್ಲಿ ಅನುದಾನ ನೀಡುವಂತೆ ಒತ್ತಾಯಿಸಿದ್ದಾರೆ.
ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಶ್ರಮ.
ಒಣಕೃಷಿ ಭೂಮಿ ಸಂಶೋದನಾ ಕೇಂದ್ರ ಸ್ಥಾಪಿಸಲುಸುಮಾರು 20 ವರ್ಷಗಳಿಂದ ಭೂಮಿಗಾಗಿ ಹುಡುಕಾಟಮಂಜೂರಾತಿಗಾಗಿ ಅಲೆದಾಡಿದ ಶ್ರಮದಿಂದಕೊನೆಗೂ 95 ಎಕರೆ ಭೂಮಿ ಮಂಜೂರಾತಿ ಪಡೆಯುವಲ್ಲಿ ಕ್ಷೇತ್ರದ ರಘುಮೂರ್ತಿ ಯಶಸ್ವಿಯಾಗಿದ್ದಾರೆ.
ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಸ್ಥಾಪನೆ ಉದ್ದೇಶಕ್ಕಾಗಿ ಭೂಮಿಯನ್ನು
ಮಾಡುವಂತೆ 2015ರಲ್ಲಿ ಮಂಜೂರು ಕಾಂಗ್ರೆಸ್ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು.
ತಾಲೂಕಿನ ಕಸಬಾ ಹೋಬಳಿಯ ಸಾನಕರ ಗ್ರಾಮದ ಸಮೀಪ ರಿ.ಸೆ. 48 ರಲ್ಲಿ 95,13 ಎಕರೆ ಭೂಮಿ ಕರ್ನಾಟಕ ಭೂ ಕಂದಾಯನಿಯಮ 1966 ನಿಯಮ 97(4)ರ ಆನ್ವಯ
ಗೋಮಾಳ ಶೀರ್ಷಿಕೆಯಿಂದ ತಗ್ಗಿಸಿ ಕರ್ನಾಟಕ ಭೂ ಮಂಜೂರಾತಿ ನಿಯಮಗಳ 1966ರ ನಿಯಮ 20(3) ಅನ್ವಯ ಮಾರುಕಟ್ಟೆ ದರದ ಶೇ. 50ರಷ್ಟು ದರ ಹಾಗೂ ನಿಯಮಾನುಸಾರ ಇತರೆ ಶುಲ್ಕ ವಿಧಿಸಿ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಸ್ಥಾಪನೆಗೆ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಶಿವಮೊಗ್ಗ ಇವರಿಗೆ ಮಂಜೂರು ಮಾಡಲು ಸರಕಾರ ಪೂರ್ವಾನುಮೋದನೆ ನೀಡಿದೆ.
ಭೂಮಿಗಾಗಿ ಹುಡುಕಾಟ:
ಶಾಸಕ ಟಿ .ರಘುಮೂರ್ತಿಯವರು ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಸ್ಥಾಪನೆಗೆ ಬರೆದಿರುವ ಪತ್ರಗಳು.
ಕೃಷಿ ಮತ್ತು ಸಂಶೋಧನಾ ಭೂಮಿಗಾಗಿ ಹುಡುಕಾಟ ನಡೆಸಿ ಕೊನೆಗೆ ಚಳ್ಳಕೆರೆ ಕ್ಷೇತ್ರದ ಸಾಣೀಕೆರೆ ಗ್ರಾಮದ ಬಳಿ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಪ್ರಾರಂಭಿಸಲು ಸೂಕ್ತವಾದ 95 ಎಕರೆ ಭೂಮಿ ಸರಕಾರ ಮಂಜುರಾತಿಗೆ ಗ್ರೀನ್ ಸಿಗ್ನಲ್ ದೊರೆತು ಸುಮಾರು ಹತ್ತು ವರ್ಷಗಳು ಕಳೆದರೂ ಅನುದಾನ ಬಿಡುಗಡೆ ಮಾಡಿಲ್ಲ ಈ ಬಗ್ಗೆ ಕ್ಷೇತ್ರದ ಶಾಸಕ ಟಿ.ರಘುಮೂರ್ತಿಯೂ ಸಹ ಅನುದಾನ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಮುಖ್ಯ ಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.
ಈಗಲಾದರೂ ಸರಕಾರ ಈ ಬಾರಿಯ ಬಜೆಟ್ ನಲ್ಲಿ ಬಯಲು ಸೀಮೆಯ ರೈತರಿಗೆ ನೀಡಿದ ಭರಸವೆಯನ್ನು ಅನುದಾನ ಬಿಡುಗಡೆ ಮಾಡುವ ಮೂಲಕ ಈಡೇರಿಸುವುದೇ ಕಾದು ನೋಡ ಬೇಕಿದೆ.
0 Comments