ಕುರಿಕಾಯುವ ಬಾಲಕ ಮರಳಿ ಶಾಲೆಗೆ ಕರೆತಂದ ಶಿಕ್ಷಕರು ಇದು ಜನಧ್ವನಿ ವರದಿ ಎಫೆಕ್ಟ್.

by | 11/09/23 | ಇಂಪ್ಯಾಕ್ಟ್

ಜನಧ್ವನಿ ವರದಿ ಎಫೆಕ್ಸ್ ಫಲಶೃತಿ.

ಚಳ್ಳಕೆರೆ ಜನಧ್ವನಿ ವಾರ್ತೆ ಸೆ.11 ಶಾಲೆಗೆ ಚಕ್ಕರ್ ಕರಿಕಾಯಲು ಹಾಜರ್ ಶಿಕ್ಷಣದಿಂದ ವಂಚಿತ ಬಾಲಕ. ಎಂಬ ತಲೆಬರಹದಡಿಯಲ್ಲಿ ಭಾನುವಾರ ಜನಧ್ವನಿಡಿಜಿಟಲ್ ಮೀಡಿಯಾ ಬೆಳಕು ಚೆಲ್ಲಿದ ಬೆನ್ನಲೇ ಮುಖ್ಯಶಿಕ್ಷಕರು ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ಪ಼ೋಷಕರಿಗೆ ಮನವೊಲಿಸಿ ಕುರಿಕಾಯುವ ಬಾಲಕನಿಗೆ ಸಮವಸ್ತ್ರ ಹಾಗೂ ಹೆಗಲ ಮೇಲೆ ಪಠ್ಯಪುಸ್ತಕ ಬ್ಯಾಗ್ ಹಾಕಿ ಮತ್ತೆ ಶಾಲೆಯತ್ತ ಕರೆದುಕೊಂಡು ಬಂದು ಮುಖ್ಯವಾಹಿನಿಗೆ ತರಲು ಯಶಸ್ವಿಯಾಗಿದ್ದಾರೆ. ಹೆಗಲ ಮೇಲೆ ಬ್ಯಾಗ್ ಕೈಯಲ್ಲಿ ಪೆನ್ನು ನೋಟ್ ಪುಸ್ತಕ ಹಿಡಿಯುವ ಕೈಯಲ್ಲಿ ಕೋಲು ಹಿಡಿದು ಶಾಲೆಗೆ ಚಕ್ಕರ್ ಕುರಿಕಾಯಲು ಹಾಜರರ್ ಶಾಲಾ ಮಕ್ಕಳೊಂದಿ ಹಾಡಿ ನಲಿಯುತ್ತಾ ಆಟ ಪಾಠ ಆಡಬೇಕಿದ್ದ ಬಾಲಕ ಶಿಕ್ಷಣದಿಂದ ವಂಚಿತನಾಗಿದ್ದಾನೆ. ಹೌದು ಇದು ಚಳ್ಳಕೆರೆ ತಾಲ್ಲೂಕಿನ, ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಸಾಪುರ ಗ್ರಾಮದ ಮಂಜಣ್ಣ ಎಂಬುವರ ಪುತ್ರ ಯೋಗೇಶ್ ವಯಸ್ಸು 11 ಸುಮಾರು 2 ವರ್ಷದಿಂದ ಶಾಲೆಗೆ ಹೋಗದೆ ಬಿಸಿಲು ಮಳೆ ಎನ್ನದೆ ಕುರಿಗಳನ್ನು ಮೇಹಿಸಲು ಹೋಗುತ್ತಿದ್ದಾನೆ ಎಂದು ವರದಿ ಬೆಳಕು ಚೆಲ್ಲಲಾಗಿತ್ತು. ಪೋಷಕರ ಮನೆಗೆ ಸಿಆರ್ ಪಿ ದಾದಾಪಿರ್ .ಮುಖ್ಯಶಿಕ್ಷಕಿ.ಪುಸ್ಪಲತಾ .ಸಹಶಿಕ್ಷಕ ಹನುಮಣ್ಣ. ಪೋಷಕರ ಮನೆಗೆ ಹೋಗಿ ವಿದ್ಯಾರ್ಥಿಯನ್ನು ಇಂದು ಶಾಲೆಗೆ ಕರೆದುಕೊಂಡು ಬಂದು ನೋಟ್ ಪುಸ್ತಕ . ಪೆನ್ ನೀಡಿ ಬರಮಾಡಿಕೊಂಡರು.ಈ ಮಗು ಈಗಾಗಲೇ ಶಾಲೆಯಲ್ಲಿ ದಾಖಲಾಗಿದ್ದು ಪಠ್ಯಪುಸ್ತಕ ಮತ್ತು ಸಮವಸ್ತ್ರ ಪಡೆದುಕೊಂಡಿರುತ್ತಾನೆ. ಕಳೆದ ಎರಡು ದಿನಗಳಿಂದ ಗೈರಾಗಿದ್ದ ಈ ಮಗುವನ್ನು ಮರಳಿ ಶಾಲೆಗೆ ಕರೆತರಲಾಯಿತು.ಎಂದು ಶಿಕ್ಚಕರು ಮಾಹಿತಿ ನೀಡಿದ್ದಾರೆ.

ಗ್ರಾಮದ ಯುವಕ ಮಹೇಂದ್ರ ಕಳೆದ ಎರಡು ವರ್ಷಗಳಿಂದ ಬಾಲಕ ಶಾಲೆ ಬಿಟ್ಟು ಕುರಿಕಾಯಲು ಹೋಗುತ್ತಿದ್ದು ಶಿಕ್ಷಣದಿಂದ ವಂಚಿವಾಗುತ್ತಿರುವ ಬಗ್ಗೆ ಜನಧ್ವನಿ ಡಿಜಿಟಲ್ ಮೀಡಿಯಾದೊಂದಿಗೆ ಮಾಹಿತಿ ಹಂಚಿಕೊಂಡಿದ್ದರು .

ಪೋಷಕರು ಹೇಳುವುದೇ ಬೇರೆ ನಮ್ಮ ಮಗನಿಗೆ ಓದಿಸ ಬೇಕು ಆಸೆ ನಮಗೂ ಇದೆ ಆದರೆ ಶಾಲೆಗೆ ಹೋದರೆ ಆರೋಗ್ಯ ಸಮಸ್ಯೆಯಾಗುತ್ತದೆ ಆದ್ದರಿಂದ ಕುರಿಕಾಯುಲು ಹೋಗಿದ್ದಾನೆ ಎನ್ನುತ್ತಾರೆ

ಸೋಮವಾರ ಶಾಲೆಗೆ ಹೋಗಿದ್ದು ಈ ದಿನವೂ ಸಹ ಶಾಲೆಯ ಬಳಿ ವಾಂತಿಮಾಡಿಕೊಂಡಿದ್ದಾನೆ ಎಂಬು ಉತ್ತರ ನೀಡುತ್ತಾರೆ.
ಶಿಕ್ಷಣ ಇಲಾಖೆ ಬಾಲಕನಿಗೆ ಉಚಿತ ಆರೋಗ್ಯ ತಪಾಸಣೆ ಹಾಗೂ ಸೂಕ್ತ ಚಿಕಿತ್ಸೆ ಕೊಡಿಲು ಮುಂದಾಗ ಬೇಕಿದೆ.

Latest News >>

ಪೂರ್ವಭಾವಿ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೂಚನೆ ಆ. 01 ರಂದು ವ್ಯಸನ ಮುಕ್ತ ದಿನಾಚರಣೆ ಮದ್ಯ, ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪಾರಿಣಾಮಗಳ ಬಗ್ಗೆ ಅರಿವು ಮೂಡಿಸಿ

ಚಿತ್ರದುರ್ಗ ಜು. 26: ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಅಂಗವಾಗಿ ಆಗಸ್ಟ್ 01 ರಂದು ಜಿಲ್ಲಾ ಮಟ್ಟದಲ್ಲಿ ವ್ಯಸನ ಮುಕ್ತ ದಿನಾಚರಣೆ...

ಆರು ವರ್ಷಗಳು ಕಳೆದರು ಚಿಕ್ಕಮಧುರೆ ಕೆರೆಹಳ್ಳದ ಸೇತುವೆ ಕಾಮಗಾರಿ ಸ್ಥಗಿತ

ಚಳ್ಳಕೆರೆ: ಜು.26 ತಾಲೂಕಿನ ಚಿಕ್ಕಮಧುರೆ ಗ್ರಾಮದ ಕೆರೆ ಹಳ್ಳದ ಸಂಪರ್ಕ ರಸ್ತೆಗೆ ಕೈಗೊಂಡಿರುವ ಸೇತುವೆ ಕಾಮಗಾರಿ ಸುಮಾರು 6 ವರ್ಷವಾದರೂ...

ಮೃತ ರೇಣುಕಾಸ್ವಾಮಿ ಮನೆಗೆ ಚಿತ್ರನಟ ವಿನೋದ್ ರಾಜ್ ಭೇಟಿ

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ & ಗ್ಯಾಂಗ್‌ ಈಗಾಲೇ ಜೈಲು ಸೇರಿದೆ. ಇನ್ನೂ ಇತ್ತೀಚೆಗಷ್ಟೇ ನಟ ವಿನೋದ್‌...

ಕಾಣೆಯಾದ ಬಾಲಕ ನೇರ್ಲಗುಂಟೆ ಗ್ರಾಮದ ಬಳಿ ಪತ್ತೆ….

ಚಳ್ಳಕೆರೆ ಜು.26. ಕಾಣೆಯದ ಬಾಲಕ ನೇರ್ಲಗುಂಟೆ ಗ್ರಾಮದ ಸಮೀಪ ಪತ್ತೆ. ಚಳ್ಳಕೆರೆ ನಗರದ ಕಾಟಪ್ಪನಹಟ್ಟಿಯ ನಾಲ್ಕನೇ ತರಗತಿ ಪ್ರಶಾಂತ್ ಕುಮಾರ್...

ಬಹಿರ್ದೆಸೆಗೆಂದು ಹೋದ ಮಗ ಮನೆಗೆ ಬಾರದೆ ಪೋಷಕರಲ್ಲಿ ಆತಂಕ..

ಚಳ್ಳಕೆರೆ ಜು.26 ಬೆಳ್ಳಂ ಬೆಳಗ್ಗೆ ಬರ್ಹಿದೆಸೆಗೆ ಹೋದ ಮನೆಗೆ ಬಾರದೆ ಕಾಣೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಹೌದು ಇದು ಚಳ್ಳಕೆರೆ ನಗರದ...

ರೈತರ ತಮ್ಮ ಜಮೀನಿನ ಪಹಣಿಗೆ ಆಧಾರ್ ಸಂಖ್ಯೆ ಲಿಂಕ್ ಮಾಡಿಸುವಂತೆ ನಗರ ಗ್ರಾಮಲೆಕ್ಕಾಧಿಕಾರಿ ಪ್ರಕಾಶ್

ಚಳ್ಳಕೆರೆ ಜು.25 ಬೆಳೆ ಪರಿಹಾರ ಬೆಳೆವಿಮೆ ಸೇರಿದಂತೆ ಸರಕಾರದ ಸೌಲಭ್ಯಗಳನ್ನು ಪಡೆಯಲು ಪಹಣಿಗೆ ಆಧಾರ್ ಲಿಂಕ್ ಕಡ್ಡಾಯವಾಗಿದ್ದು ರೈತರ ಪಹಣಿಗೆ...

ತುರುವನೂರು : ಬಾಲ್ಯ ವಿವಾಹ ನಿಷೇದ ಕುರಿತು ಜಾಗೃತಿ

ಚಿತ್ರದುರ್ಗ ಜುಲೈ25: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಭರಮಸಾಗರ ಶಿಶು ಅಭಿವೃದ್ದಿ ಯೋಜನಾಧಿಕಾರಿ ಕಚೇರಿ, ತುರುವನೂರು ಗ್ರಾಮ ಪಂಚಾಯಿತಿ,...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page