ಜನಧ್ವನಿ ವರದಿ ಎಫೆಕ್ಸ್ ಫಲಶೃತಿ.
ಚಳ್ಳಕೆರೆ ಜನಧ್ವನಿ ವಾರ್ತೆ ಸೆ.11 ಶಾಲೆಗೆ ಚಕ್ಕರ್ ಕರಿಕಾಯಲು ಹಾಜರ್ ಶಿಕ್ಷಣದಿಂದ ವಂಚಿತ ಬಾಲಕ. ಎಂಬ ತಲೆಬರಹದಡಿಯಲ್ಲಿ ಭಾನುವಾರ ಜನಧ್ವನಿಡಿಜಿಟಲ್ ಮೀಡಿಯಾ ಬೆಳಕು ಚೆಲ್ಲಿದ ಬೆನ್ನಲೇ ಮುಖ್ಯಶಿಕ್ಷಕರು ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ಪ಼ೋಷಕರಿಗೆ ಮನವೊಲಿಸಿ ಕುರಿಕಾಯುವ ಬಾಲಕನಿಗೆ ಸಮವಸ್ತ್ರ ಹಾಗೂ ಹೆಗಲ ಮೇಲೆ ಪಠ್ಯಪುಸ್ತಕ ಬ್ಯಾಗ್ ಹಾಕಿ ಮತ್ತೆ ಶಾಲೆಯತ್ತ ಕರೆದುಕೊಂಡು ಬಂದು ಮುಖ್ಯವಾಹಿನಿಗೆ ತರಲು ಯಶಸ್ವಿಯಾಗಿದ್ದಾರೆ. ಹೆಗಲ ಮೇಲೆ ಬ್ಯಾಗ್ ಕೈಯಲ್ಲಿ ಪೆನ್ನು ನೋಟ್ ಪುಸ್ತಕ ಹಿಡಿಯುವ ಕೈಯಲ್ಲಿ ಕೋಲು ಹಿಡಿದು ಶಾಲೆಗೆ ಚಕ್ಕರ್ ಕುರಿಕಾಯಲು ಹಾಜರರ್ ಶಾಲಾ ಮಕ್ಕಳೊಂದಿ ಹಾಡಿ ನಲಿಯುತ್ತಾ ಆಟ ಪಾಠ ಆಡಬೇಕಿದ್ದ ಬಾಲಕ ಶಿಕ್ಷಣದಿಂದ ವಂಚಿತನಾಗಿದ್ದಾನೆ. ಹೌದು ಇದು ಚಳ್ಳಕೆರೆ ತಾಲ್ಲೂಕಿನ, ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಸಾಪುರ ಗ್ರಾಮದ ಮಂಜಣ್ಣ ಎಂಬುವರ ಪುತ್ರ ಯೋಗೇಶ್ ವಯಸ್ಸು 11 ಸುಮಾರು 2 ವರ್ಷದಿಂದ ಶಾಲೆಗೆ ಹೋಗದೆ ಬಿಸಿಲು ಮಳೆ ಎನ್ನದೆ ಕುರಿಗಳನ್ನು ಮೇಹಿಸಲು ಹೋಗುತ್ತಿದ್ದಾನೆ ಎಂದು ವರದಿ ಬೆಳಕು ಚೆಲ್ಲಲಾಗಿತ್ತು. ಪೋಷಕರ ಮನೆಗೆ ಸಿಆರ್ ಪಿ ದಾದಾಪಿರ್ .ಮುಖ್ಯಶಿಕ್ಷಕಿ.ಪುಸ್ಪಲತಾ .ಸಹಶಿಕ್ಷಕ ಹನುಮಣ್ಣ. ಪೋಷಕರ ಮನೆಗೆ ಹೋಗಿ ವಿದ್ಯಾರ್ಥಿಯನ್ನು ಇಂದು ಶಾಲೆಗೆ ಕರೆದುಕೊಂಡು ಬಂದು ನೋಟ್ ಪುಸ್ತಕ . ಪೆನ್ ನೀಡಿ ಬರಮಾಡಿಕೊಂಡರು.ಈ ಮಗು ಈಗಾಗಲೇ ಶಾಲೆಯಲ್ಲಿ ದಾಖಲಾಗಿದ್ದು ಪಠ್ಯಪುಸ್ತಕ ಮತ್ತು ಸಮವಸ್ತ್ರ ಪಡೆದುಕೊಂಡಿರುತ್ತಾನೆ. ಕಳೆದ ಎರಡು ದಿನಗಳಿಂದ ಗೈರಾಗಿದ್ದ ಈ ಮಗುವನ್ನು ಮರಳಿ ಶಾಲೆಗೆ ಕರೆತರಲಾಯಿತು.ಎಂದು ಶಿಕ್ಚಕರು ಮಾಹಿತಿ ನೀಡಿದ್ದಾರೆ.
ಸೋಮವಾರ ಶಾಲೆಗೆ ಹೋಗಿದ್ದು ಈ ದಿನವೂ ಸಹ ಶಾಲೆಯ ಬಳಿ ವಾಂತಿಮಾಡಿಕೊಂಡಿದ್ದಾನೆ ಎಂಬು ಉತ್ತರ ನೀಡುತ್ತಾರೆ.
ಶಿಕ್ಷಣ ಇಲಾಖೆ ಬಾಲಕನಿಗೆ ಉಚಿತ ಆರೋಗ್ಯ ತಪಾಸಣೆ ಹಾಗೂ ಸೂಕ್ತ ಚಿಕಿತ್ಸೆ ಕೊಡಿಲು ಮುಂದಾಗ ಬೇಕಿದೆ.
0 Comments