ಚಳ್ಳಕೆರೆ: ಚಿತ್ರದುರ್ಗ ಲೋಕಸಭಾ ಅಭ್ಯರ್ಥಿಗೆಲುವುಗೆ ಕ್ಷೇತ್ರದಲ್ಲಿ ಶಾಸಕರಿಲ್ಲ ಸಂಸದರಿಲ್ಲ ಎಂಬ ಕೊರಗು ಬೇಡ ಜೆಡಿಎಸ್ ವರಿಷ್ಠರ ಆದೇಶದಂತೆ ಯಾರಿಗೆ ಮೈತ್ರಿಯಲ್ಲಿ ಬಿಜೆಪಿ, ಜೆಡಿಎಸ್ ಯಾರಿಗೆ ಟಿಕೇಟ್ ನೀಡಿದರೂ ಗೆಲ್ಲಿಸಲು ಬದ್ದರಾಗಬೇಕು ಜೆಡಿಎಸ್ ಜಿಲ್ಲಾಧ್ಯಕ್ಷ ಜಯಣ್ಣ ಕಾರ್ಯಕರ್ತರಿಗೆ ಕರೆ ನೀಡಿದರು.
ನಗರದ ಬೆಂಗಳೂರು ರಸ್ತೆಯಲ್ಲಿ ದಲ್ಲಾಲರ ಸಮುದಾಯ ಭವನದಲ್ಲಿ ಲೋಕದಭಾ ಚುನಾವಣೆ ಹಿನ್ನೆಲೆ ಹಮ್ಮಿಕೊಂಡಿದ್ದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಲೋಕಸಭಾ ಚುನಾವಣೆಯಲ್ಲಿ 28 ಕ್ಷೇತ್ರದಲ್ಲೂ ಗೆಲುವು ಸಾಧಿಸಲು ಬಿಜೆಪಿ ಪಕ್ಷದದೊಂದಿಗೆ ಜೆಡಿಎಸ್ ಮೈತಿಮಾಡಿಕೊಡು ಕಾರ್ಯಕರ್ತರಿಗೆ ಕರೆಕೊಟ್ಟಿದೆ. ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಓಟುಗಳಿದ್ದು ಬಿಜೆಪಿ ಜೆಡಿಎಸ್ ಪಕ್ಷ ಮೈತ್ರಿ ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕು ಎಂದರು.
ಮಾಜಿ ಶಾಸಕ ತಿಮ್ಮರಾಯಪ್ಪ ಮಾತನಾಡಿ ಜೆಡಿಎಸ್ ಪಕ್ಷದ ತತ್ವಸಿದ್ದಾಂತಗಳನ್ನು ಉಳಿಸಿಕೊಂಡು ಜೆಡಿಎಸ್ ಪಕ್ಷದ ವರಿಷ್ಠರ ಆದೇಶದಂತೆ ಬಿಜೆಪಿ ಮೈತ್ರಿ ಅಭ್ಯರ್ಥಿ ಗೆಲುವುಗೆ ಸಹಮತದಿಂದ ಕಾರ್ಯಕರ್ತರು ಶ್ರಮಿಸಬೇಕು. ಸಮನ್ವಯ ಸಮಿತಿಯನ್ನು ರಚಿಸಲಾಗುವುದು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಥವಾ ಜೆಡಿಎಸ್ ಅಭ್ಯರ್ಥಿಯನ್ನು ನೀಡಿದರೂ ಮೈತ್ರಿ ಅಭ್ಯರ್ಥಿಯನ್ನು ಹೆಚ್ಚು ಬಹುಮತ ನೀಡುವ ಮೂಲಕ ಗೆಲ್ಲಿಸ ಬೇಕು ಎಂದರು.
ಚಳ್ಳಕೆರೆ ಕ್ಷೇತ್ರದ ಪರಾರ್ಜಿತ ಅಭ್ಯರ್ಥಿ ರವೀಶ್ ಮಾತನಾಡಿ ವಿಧಾನಸಭೆ ಚುನಾವಣೆಯಲ್ಲಿ ಕಡಿಮೆ ಅಂತರದ ಮತಗಳಿಂದ ಸೋಲಲುೆ ನಾವೇ ಕಾರಣರು ಎಂಬ ತಪ್ಪು ಮತ್ತೆ ಮರುಕಳಿಸದೆ ನಮ್ಮ ಲೋಕಸಭಾ ಕ್ಷೇತ್ರ ಅಭ್ಯರ್ಥಿ ಗೆಲುವಿಗೆ ಮುಂದಾಗಬೇಕು. ಕಾಂಗ್ರೆಸ್ ಬಿಟ್ಟಿ ಭಾಗ್ಯಗಳ ಭರಾಟೆಯಲ್ಲಿ ಸೋಲಿಗೆ ಕಾರಣವಾಗಿದೆ, ಮಾಜಿ ಸಿಎಂ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಣ್ಣಸ್ವಾಮಿ ರೈತರ ಪರ ಯೋಜನೆಗಳಾದ ಸಾಲಮನ್ನ ಇವು ಲೆಕ್ಕಕ್ಕೆ ಬಾರದೆ ಸೋಲು ಕಾಣುವಂತಾಗಿದೆ. ಕುಮಾರಣ್ಣನವರ ಜನಪರ ಯೋಜನೆಗಳನ್ನು ಮನವರಿಕೆ ಮಾಡಿವ ಮೂಲಕ ಮೈತ್ರಿ ಅಭ್ಯರ್ಥಿ ಗೆಲುವಿಗೆ ಕಂಕಣಬದ್ದರಾಗುವAತೆ ಕರೆ ನೀಡಿದರು.
ಚುನಾವಣೆಯಲ್ಲಿ ಒಳ್ಳೆ ವ್ಯಕ್ತಿ ಕೆಲಸ ಮಾಡಿದ್ದಾರೆ ಎಂದು ತಿಳಿದು ಓಟಾಗುವುದು ಕಣ್ಮರೆಯಾಗಿದೆ. ನಿಜವಾದ ರೈತರನ್ನು ಗುರುತಿಸಿ ೫೪ಸಾವಿರ ರೂ ಕೋಟಿ ಸಾಲ ಮನ್ನ ಮಾಡಿದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನಾವೆಲ್ಲ ನೆನಸಬೇಕು. ಬೆಲೆ ಏರಿಕೆ ಮಾಡಿ ಉಚಿತ ಗ್ಯಾರೆಂಟಿ ಭಾಗ್ಯಗಳ ಖಾತೆಗೆ ಹಣ ಜಮೆ ಮಾಡುತ್ತಾರೆ.ಸರಕಾರದಲ್ಲಿ ಹಣ ಇಲ್ಲ ವೇತನ ನೀಡಲೂ ಸಹ ಹಣ ನೀಡಲು ಖಜಾನೆ ಖಾಲಿಯಾಗಿದೆ. ದೇಶದ ಪ್ರಧಾನಿ ನರೇಂದ್ರಮೋದಿಯವರ ಜನಪರ ಕೆಲಸಗಳನ್ನು ಮಾಡಿದ್ದಾರೆ
ಹಿರಿಯೂರು ಪರಾರ್ಜಿತ ಅಭ್ಯರ್ಥಿ ರವೀಂದ್ರಪ್ಪಮಾತನಾಡಿ ಕೇಂದ್ರ ಸರಕಾರ ಸುಭದ್ರ ವಾಗಿದ್ದರೆ ದೇಶ ಸುಭದ್ರವಾಗಿರುತ್ತದೆ ಮೈತ್ರಿ ಪಕ್ಷಗಳಲ್ಲಿ ಯಾವುದೇ ಅಭ್ಯರ್ಥಿಗೆ ಟಿಕೇಟ್ ನೀಡಿದರೂ ಜೆಡಿಎಸ್ ಕಾರ್ಯಕರ್ತರು ಗೆಲುವಿಗೆ ಶ್ರಮಿಸೋಣ ಪಕ್ಷದ ಸಂಘಟನೆ ಮಾಡೋಣ ಎಂದರು.
ಈ ವೇಳೆ ಜೆಡಿಎಸ್ ತಾಲೂಕು ಅಧ್ಯಕ್ಷ ಪಿ.ತಿಪ್ಪೇಸ್ವಾಮಿ, ಮಾಜಿ ಜಿಲ್ಲಾಧ್ಯಕ್ಷ ಯಶೋಧರ್, ನಗರಸಭೆ ಸದಸ್ಯರಾದ ತಿಪ್ಪಮ್ಮ, ಪ್ರಮೋದ್, ಮುಖಂಡರಾದ ಆನಂದಪ್ಪ. ಬೂದಿಲಿಂಗಪ್ಪ, ಹನುಮಂರರಾಯಪ್ಪ, ನಾಗರಾಜ್, ಶಿವಣ್ಣ, ಚಂದ್ರಣ್ಣ, ಶಿವಣ್ಣ ಸೇರಿದಂತೆ ಮುಂತಾದವರು ಇದ್ದರು.
===============================
0 Comments