ನಾಯಕನಹಟ್ಟಿ::ಜ.1. ಸಮೀಪದ ಕುದಾಪುರ ಕೆನರಾ ಬ್ಯಾಂಕ್ ಶಾಖೆಯಲ್ಲಿ ಕಳೆದ ಹತ್ತು ವರ್ಷದಿಂದ ಕಾರ್ಯ ನಿರ್ವಹಿಸುತ್ತಿದ್ದ ನಾಗರಾಜ್ ರವರನ್ನು ವರ್ಗಾವಣೆ ಮಾಡಿರುವುದು ಕಂಡು ಗ್ರಾಹಕರು ಬೇಸರವನ್ನು ವ್ಯಕ್ತಪಡಿಸಿದ್ದರು.
ಕುದಾಪುರ ಕೆನರಾ ಬ್ಯಾಂಕ್ ಶಾಖೆಯಲ್ಲಿ ಕಳೆದ ಹತ್ತು ವರ್ಷದ ಸೇವೆ ಗ್ರಾಮೀಣ ಪ್ರದೇಶದ ಜನಸಾಮಾನ್ಯರಿಗೆ ಸೌಲಭ್ಯವನ್ನು ಕೊಡಿಸುವಲ್ಲಿ ನಾಗರಾಜ್ ರವರು ಮುಂಚೂಣಿಯಲ್ಲಿದ್ದರು.
ಇಂತಹ ಸಿಬ್ಬಂದಿಯನ್ನು ನಾಯಕನಹಟ್ಟಿ ಕೆನರಾ ಬ್ಯಾಂಕಿಗೆ ವರ್ಗಾವಣೆ ಮಾಡಿರುವುದು ತುಂಬಾ ನೋವಿನ ಸಂಗತಿ ಆದ್ದರಿಂದ ನಾಗರಾಜ್ ರವರು ಈ ಭಾಗದ ರೈತರಿಗೆ ವೃದ್ಧರಿಗೆ ಜಲಸಾಮಾನ್ಯರಿಗೆ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಕೊಡಿಸುವಲ್ಲಿ ಮತ್ತು ಪ್ರತಿದಿನ ಜನಸಾಮಾನ್ಯರ ಕೈಗೆ ಸಿಗುವ ನಾಗರಾಜ್ ರವರನ್ನು ವರ್ಗಾವಣೆ ಮಾಡಬಾರದು ಅವರನ್ನು ಇಲ್ಲಿ ಕಾರ್ಯ ನಿರ್ವಹಿಸಲು ಅನುವು ಮಾಡಿಕೊಡಬೇಕೆಂದು ಕುದಾಪುರ ಕೆನರಾ ಬ್ಯಾಂಕ್ ಶಾಖೆಯ ವ್ಯವಸ್ಥಾಪಕರಿಗೆ ಗ್ರಾಹಕರು ಮನವಿಯನ್ನು ನೀಡಿದರು..
ಇದೆ ವೇಳೆ ಗ್ರಾಹಕರಾದ ಮರಿಪಾಲಯ್ಯ ಮಾತನಾಡಿ ಕುದಾಪುರ ಕೆನರಾ ಬ್ಯಾಂಕ್ ಶಾಖೆಯಲ್ಲಿ ಸಿಬ್ಬಂದಿಗಳ ಕೊರತೆ ಇದೆ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ದಾವಣಗೆರೆಯವರು ಏಕಾಏಕಿ ನಾಗರಾಜರವರನ್ನ ವರ್ಗಾವಣೆ ಮಾಡಿರುವುದು ಈ ಭಾಗದ ಗ್ರಾಹಕರಿಗೆ ತುಂಬಾ ನೋವಾಗಿದೆ ನಾಗರಾಜ್ ರವರು ಸ್ಥಳೀಯವಾಗಿ ಸಾರ್ವಜನಿಕ ಜನರಿಗೆ ಸೂಕ್ತ ರೀತಿಯಲ್ಲಿ ಸ್ಪಂದನೆ ಮಾಡುತ್ತಿದ್ದರು ಅಸಿಸ್ಟೆಂಟ್ ಜನರಲ್ ಮೆನೇಜರ್ ದಾವಣಗೆರೆ ಇವರು ನಾಗರಾಜ್ ರವರ ವರ್ಗಾವಣೆ ರದ್ದುಪಡಿಸಿ ಇಲ್ಲೇ ಕಾರ್ಯ ನಿರ್ವಹಿಸಲು ಅನುವು ಮಾಡಿಕೊಡಬೇಕೆಂದು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಕುದಾಪುರ ಕೆನರಾ ಬ್ಯಾಂಕ್ ಶಾಖೆಯ ಮ್ಯಾನೇಜರ್ ಸಾಗರ್ ಮಾತನಾಡಿ ನಾಗರಾಜ್ ರವರು ಕಳೆದ 10 ವರ್ಷಗಳಿಂದ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದರು ನಮ್ಮ ಮೇಲಾಧಿಕಾರಿಗಳು ಗಮನಕ್ಕೆ ತಂದು ಮನವಿಯನ್ನ ನೀಡುವುದಾಗಿ ಭರವಸೆಯನ್ನು ನೀಡಿದರು.
![](https://janadhwani.in/wp-content/uploads/2024/01/IMG-20240101-WA0275.jpg)
ಇದೇ ಸಂದರ್ಭದಲ್ಲಿ ಕುದಾಪುರ ಮಂಜಣ್ಣ ,ತಮ್ಮಯ್ಯ ,ಗೌಡ್ರು ನಾಗರಾಜ್ ,ಕೆ ಜಿ ಓಬಯ್ಯ, ಮರಿಪಾಲಯ್ಯ, ಶ್ರೀನಿವಾಸ್ ಗಿಡ್ಡಾಪುರ ,ವಿಜಯ್, ಜಿ ಬೋರಯ್ಯ, ಸೂರ್ಯಪ್ರಕಾಶ್, ಎನ್ ಬೋರಯ್ಯ, ಮಹಾಂತೇಶ್ ವರವು, ಗೋಪಾಲ್,ಇದ್ದರು
0 Comments