ಚಳ್ಳಕೆರೆ ಜೂ.7 ಬರಗಾಲದಲ್ಲಿ ಇಡೀ ಗ್ರಾಮದ ಜನ ಜಾನುವಾರುಗಳಿಗೆ ನೀರಿನ ದಾಹ ತೀರಿಸುತ್ತಿದ್ದ ಕೊಳವೆ ನಿರ್ಲಕ್ಕೆ ಸಿಲುಕಿದೆ.
ಹೌದು ಇದು ಚಳ್ಳಕೆರೆ ತಾಲೂಕಿನ ಚೌಳೂರು ಗ್ರಾಮದ ಕೆರೆಯಲ್ಲಿ ಕುಡಿಯುವ ನೀರಿಗಾಗಿ 20017-18 ನೇ ಸಾಲಿನಲ್ಲಿ ಬೋರು ಕೊರಿಸಿ ಇದಕ್ಕೆ 25ಕೆವಿ ನಿರಂತರ ವಿದ್ಯುತ್ ಪರಿವರ್ತಕ ಪೆಟ್ಟಿಗೆ ಹಾಕಲಾಗಿತ್ತು. ಬರಗಾಲದ ಪರಿಸ್ಥಿತಿಯಲ್ಲಿ 3 ಇಂಚು ನೀರು ಬರುತ್ತಿತ್ತು ಇಡೀ ಗ್ರಾಮಕ್ಕೆ ಇದು ಒಂದೇ ಬೋರು ಜನ ಜಾನುವಾರುಗಳ ದಾಹ ನೀಗಿಸಿ ಜೀವ ಉಳಿಸಿತ್ತು ಮತ್ತೆ ವೇದಾವದಿ ನದಿಯಲ್ಲಿ ಬೋರ್ ಸಂಪರ್ಕ ಪಡೆದ ನಂತರ ಕೆರೆಯಲ್ಲಿದ್ದ ಕೊಳವೆ ಬಾವಿ ನಿರ್ಲಕ್ಕೆ ತುತ್ತಾಗಿ ವಿದ್ಯುತ್ ಪರಿವರ್ತಕ ಹಾಗೂ ಜೋಡಿ ಕಂಬಗಳು ನೆಲಕ್ಕುರಳಿ ಸುಮಾರು ಮೂರು ವರ್ಷಗಳು ಕಳೆದರು ಅವುಗಳನ್ನು ಮೇಲತ್ತುವ ಪ್ರಯತ್ನ ಮಾಡುವ ಗೋಜಿಗೆ ಹೋಗಿಲ್ಲ ಒಂದು ವೇಳೆ ಅಧಿಕಾರಿಗಳ ಅಥವಾ ಜನಪ್ರತಿನಿಧಿಗಳ ಜಮೀನಿನ ವಿದ್ಯುತ್ ಕಂಬ ಹಾಗೂ ಪರಿವರ್ತಕ ನೆಲಕ್ಕೆ ಬಿದ್ದರೆ ಸುಮ್ಮನೆ ಇರುತ್ತಿದ್ದರೆ ಎಂಬುದು ಗ್ರಾಮಸ್ಥರ ಪ್ರಶ್ನೆಯಾಗಿದೆ. 4 ಕಂಬ ಪೆಟ್ಟಿಗೆ ನೆಲಕ್ಕೆ ಬಿದ್ದು ಸುಮಾರು. ಒಂದು ವರ್ಷಕಳೆದರೂ ಇತ್ತ ಕಡೆ ಬೆಸ್ಕಾಂ ಅಧಿಕಾರಿಗಳಾಗಲಿ ಗ್ರಾಪಂಅಧಿಕಾರಿ ಜನಪ್ರತಿನಿಧಿಕಾರಿಗಳು ಕಂಡೂ ಜಾಣದಂತೆ ಜಾಣ ಕುರುಡುತನ ಪ್ರದರ್ಶನ ಮಾಡಿತ್ತಿರುವ ಬಗ್ಗೆ ಇದೊಂದು ನಿದರ್ಶನವಾಗಿದೆ. ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ನೆಲಕ್ಕೆ ಬಿದ್ದ ವಿದ್ಯುತ್ ಪರಿವರ್ತಕ ಕಂಬಗಳನ್ನು ಮೇಲಕ್ಕೆತ್ತುವರೇ ಕಾದು ನೋಡ ಬೇಕಿದೆ.
0 Comments