ಚಳ್ಳಕೆರೆ ಜನಧ್ವನಿ ವಾರ್ತೆ ಫೆ.24. ಕುಡಿಯುವ ನೀರಿನ ಪೈಪ್ ಒಡೆದು ಒಂದು ತಿಂಗಳು ಆದರೂ ಸಹ ಯಾರೂ ಇತ್ತ ಗಮನ ಹರಿಸಿಲ್ಲ.
ಹೀಗಾಗಿ ನಿತ್ಯ ನೂರಾರು ಜನರು ಓಡಾಡುವ ರಸ್ತೆ ಬದಿಯಲ್ಲಿ ದೊಡ್ಡ ಪ್ರಮಾಣದಲ್ಲಿ ನೀರು ಪೋಲು ಆಗುತ್ತದೆ. ಜತೆಗೆ ನೀರಿನ ರಭಸಕ್ಕೆ ದೊಡ್ಡ ಗುಂಡಿ ಬಿದ್ದು ರಸ್ತೆಯೂ ಕಿತ್ತುಹೋಗಿದೆ. ಹೌದು ಇದು ಚಳ್ಳಕೆರೆ ತಾಲೂಕಿನ ಗೋಪನಹಳ್ಳಿ ಗ್ರಾಮದ ಜನರಿಗೆ ಕುಡಿಯುವ ನೀರಿನ ದಾಹ ತೀರಿಸಲು ಕಾಪರಹಳ್ಳಿ ಮಾರ್ಗದ ಸುಮಾರು ಎರಡು ಕಿ.ಮೀ ದೂರದಿಂದ ಬೋರ್ ಕೊರೆಸಿ ಪೈಪ್ ಲೈನ್ ಮಾಡಿಕೊಂಡು ನೀರು ಸರಬರಾಜು ಮಾಡಲಾಗುತ್ತಿದೆ.
ಹೊರಕೇರಪ್ಪ ಇವರ ಜನೀನ ಬಳಿ ಕುಡಿಯುವ ನೀರಿನ ಪೈಪ್ ಹೊಡೆದು ಅಡಿಕೆ ತೋಟಕ್ಕೆ ನೀರು ನುಗ್ಗಿ ಅಡಿಕೆ ಬೆಳೆ ನಷ್ಟವಾಗುತ್ತದೆ ನೀರು ಪೋಲಾಗುತ್ತಿರುವುದರಿಂದ ಬೃಹತ್ ವಾಹನಗಳ ಸಂಚಾರದಿಂದ ಡಾಂಬರ್ ರಸ್ತೆ ನಿರ್ಮಿಸಿ ಒಂದು ವರ್ಷಕಳೆದಿಲ್ಲ ರಸ್ರೆ ಕಿತ್ತು ಹೋಗಿದೆ. ಅದೇ ರೀತಿ ಮಾಳವ್ವರ ನಾಗರಾಜಪ್ಪ ಇವರ ಮನೆಯ ಸಮೀಪ ರಸ್ತೆ ಬದಿಯ ಚರಂಡಿಯಲ್ಲಿ ಕುಡಿಯುವ ನೀರಿನ ಪೈಪ್ ಹೊಡೆದು ಬೃಹತ್ ಮಟ್ಟದಲ್ಲಿ ನೀರು ಜುಳು ಜುಳು ಎಂಬ ಶಬ್ದದೊಂಗೆ ಹುಕ್ಕಿ ಹರಿಯುತ್ತಿವೆ.
![](https://janadhwani.in/wp-content/uploads/2023/02/Screenshot_20230224_080054-1024x576.png)
ಅದೇ ರೀತಿ ಜಿ.ಪಿ.ರಂಗಪ್ಪ ಬಡಾವಣೆಯ ಮುಖ್ಯರಸ್ತೆಯಿಂದ ದೊಡ್ಡಗೌಡರ ಮಂಜಣ್ಣ ಇವರ ಮನೆಗಳ ಕಡೆ ಹೋಗುವ ರಸ್ತೆಯಲ್ಲೂ ಕುಡಿಯುವ ನೀರಿನ ಪೈಪ್ ಒಡೆದು ಎರಡು ತಿಂಗಳು ಕಳೆದರೂ ದುರಸ್ತಿ ಮಾಡದೆ ನೀರು ಪೋಲಾಗುತ್ತಿದ್ದು ರಸ್ತೆ ಕೆಸರು ಗದ್ದೆಯಾಗಿರುವುದರಿಂದ ವೃದ್ದರು ಮಕ್ಕಳು. ಓಡಾಡಲು ಹರಸಹಾಸ ಪಡಬೇಕಿದೆ.
ಈಗೆ ಗ್ರಾಮದಲ್ಲಿ ಹಲವು ಕಡೆ ಕುಡಿಯುವ ನೀರಿನ ಪೈಪ್ ಒಡೆದು ತಿಂಗಳುಗಳು ಕಳೆದರೂ ಗ್ರಾಮಪಂಚಾಯತ್ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ದುರಸ್ಥಿ ಪಡಿಸಲು ಮುಂದಾಗಿಲ್ಲ ಈ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಿದರೂ ಸಹ ಇತ್ತ ತಿರುಗಿಯೂ ನೋಡಿಲ್ಲ ಪೈಪ್ ಒಡೆದು ಸಾಕಷ್ಟು ಪ್ರಮಾಣದ ಕುಡಿಯುವ ನೀರು ಚರಂಡಿ ಪಾಲು ಆಗುತ್ತದೆ. ಮೊದಲೇ ಬೇಸಿಗೆ ಸಮಯದಲ್ಲಿ ನೀರು ಬಂಗಾರ ಇದ್ದಂತೆ ಆದರೆ ಅಧಿಕಾರಿಗಳ ನಿರ್ಲಕ್ಷ ಜನಪ್ರತಿನಿಧಿಗಳ ಹಾಗೂ ಅದಿಕಾರಿಗಳ ದೀವ್ಯ ನಿರ್ಲಕ್ಷದಿಂದ ಕುಡಿಯುವ ನೀರು ಚರಂಡಿ ಪಾಲು ಆಗುತ್ತದೆ.
![](https://janadhwani.in/wp-content/uploads/2023/02/IMG_20230224_072808-1024x461.jpg)
ಬೇಸಿಗೆ ಮುನ್ನವೇ ಬಿಸಿಲಿನ ತಾಪ ಹೆಚ್ಚಾಗಿದ್ದು ಕುಡಿಯು ನೀರಿನಲ್ಲಿ ತ್ಯಾಜ್ಯ ಮಣ್ಣ ಸೇರಿ .ನೀರಿನ ಮೇಲೆ ಸೊಳ್ಳೆ ಉತ್ಪತ್ತಿಯಾಗಿ ಸಾಂಕ್ರಾಮಿಕ ರೋಗ ಹರಡುವ ಭೀತಿಯೂ ಸಹ ಎದುರಾಗಲಿದೆ.. ಕೂಡಲೇ ಇದಕ್ಕೆ ಸಂಬಂಧ ಪಟ್ಟ ಅಧಿಕಾರಿಗಳು ಕುಡಿಯುವ ನೀರಿನ ಪೈಪ್ ದುರಸ್ಥಿ ಮಾಡಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದರು. ಈಗಲಾದರೂ ಅಧಿಕಾರಿಗಳು ನಿದ್ರೆಯಿಂದ ಎಚ್ಚೆತ್ತು ದುರಸ್ಥಿಪಡಿಸುವರೇ ಕಾದು ನೋಡ ಬೇಕಿದೆ
![](https://janadhwani.in/wp-content/uploads/2023/02/IMG-20230224-WA0003-1024x461.jpg)
0 Comments