ಚಳ್ಳಕೆರೆ ಜನಧ್ವನಿ ವಾರ್ತೆ ಮಾ.13.
ಕುಡಿಯುವ ನೀರಿನ ಜನತೆ ಕೊಳಚೆ ನೀರು ಉಚಿತ ಛೀ. ಏನ್ದ್ರಿ ಇದು ಅಸಹ್ಯ ಸುದ್ದಿ ಎನ್ನುತ್ತಿದ್ದೀರಾ? ಆದರೆ ಇಲ್ಲಿನ ಪಂಚಾಯ್ತಿಗೆ ಇದು ಅಸಹ್ಯ ಅಲ್ಲವೇ ಅಲ್ಲ. ಅಸಹ್ಯ ಎನ್ನಿಸಿದಿದ್ದರೆ ಪೈಪ್ ಹೊಡೆದು ಮೂರು ದಿನ ಕಳೆದರೂ ದುರಸ್ತಿ ಮಾಡದೆ ನಿರ್ಲಕ್ಷ್ಯಿಸುತ್ತಿರಲಿಲ್ಲ.
![](https://janadhwani.in/wp-content/uploads/2023/03/Screenshot_20230313_123839-1024x563.png)
ಹೌದು, ಇದು ಚಳ್ಳಕೆರೆ ತಾಲೂಕಿನ ಗೋಪನಹಳ್ಳಿ ಗ್ರಾಮ ಮುಖ್ಯ ರಸ್ತೆಯ ಬಾಪೂಜಿ ಗ್ರಾಮಾಂತರ ಪ್ರೌಢ ಶಾಲೆಯ ಮೂಲೆಯ ಮುಖ್ಯ ರಸ್ತೆಯಲ್ಲಿ ಇಡಿ ಗ್ರಾಮಕ್ಕೆ ನೀರು ಸರಬರಾಜು ಮಾಡುವ ಮುಖ್ಯ ಪೈಪ್ ಏರು ಪೈಪ್ ಬಳಿ ಒಡೆದು ನೀರು ನಿಂತು ಕೊಳಚೆಯಂತಾಗಿ ಸೊಳ್ಳೆಗಳ ಉತ್ಪಿ ಕೇಂದ್ರವಾಗಿದೆ.
ಚರಂಡಿಯ ಕೊಳಚೆ ನೀರು ಪೈಪ್ ಮೂಲಕ ಗ್ರಾಮಕ್ಕೆ ಸರಬರಾಜು ಆಗುತ್ತಿದ್ದು ಕಲುಷಿತ ನೀರು ಕುಡಿದು ಈಗಾಗಲೆ ಗ್ರಾಮದಲ್ಲಸಿ ಗರ್ಭಿಣಿ, ಬಾಣಂತಿ, ಮಕ್ಕಳು ಸರೇರಿದಂತೆ ಚಳಿ, ಜ್ವರದಂತೆ ಸಾಂಕ್ರಮಿಕ ರೋಗಗಳಿಗೆ ತುತ್ತಾಗಿದ್ದು ಈಗ ಬಗ್ಗೆ ತಾಲೂಕು ಆರೋಗ್ಯ ಇಲಾಖೆ ಕುಡಿಯುವ ನೀರಿನ ಪೈಪ್ಗಳನ್ನು ದುರಸ್ಥಪಿಡಿಸುವಂತೆ ನೋಟಿಸ್ ಜಾರಿ ಮಾಡಿದರೂ ಗ್ರಾಪಂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕ್ಯಾರೆ ಎಂದಿಲ್ಲ ದುರಸ್ಥಿ ಪಡಿಸುವ ಗೋಜಿಗೆ ಹೋಗಿಲ್ಲ.
ಬೇಸತ್ತ ಗ್ರಾಮದ ಯುವಕರು ವೀಡಿಯೋ ಮಾಡಿ ಅಧಿಕಾರಿ ಹಾಗೂ ಜನಪ್ರತಿನಿಧಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.
ಗ್ರಾಮದಲ್ಲಿರುವ ಚರಂಡಿಗಳು ಹೂಳು ತೆಗೆದು ತುಂಬಿ ತುಳುಕುತ್ತಿದ್ದು ಕೊಳಚೆ ತೆರವುಗೊಳಿಸದೆ ಇರುವುದರಿಂದ ಗ್ರಾಮಸ್ಥರು ಸಾಂಕ್ರಮಿಕ ರೋಗದ ಬೀತಿಯಲ್ಲಿ ಜೀವನ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಹೈಮಾಸ್ಕ್ ದೀಪ ಜೇಡರ ಬಲೆ.
![](https://janadhwani.in/wp-content/uploads/2023/03/IMG-20230313-WA0071-576x1024.jpg)
ಗ್ರಾಮದ ಬಸ್ ನಿಲ್ದಾಣದ ಗ್ರಾಮದೇವತೆ ಮಾರಮ್ಮ ದೇವಸ್ಥಾನ ಮುಂಭಾಗದಲ್ಲಿರುವ ಹೈಮಾಸ್ಕ್ ಬೀದಿ ದೀಪಕ್ಕೆ ಜೇಡರ ಬಲೆ ಹಣೆದುಕೊಂಡು ಸುಮಾರು ಮೂರು ತಿಂಗಳು ಕಳೆದರೂ ದುರಸ್ಥಿ ಪಡಿಸಿಲ್ಲ ಜೇಡಬಲೆ ಹಣೆದುಕೊಂಡಿರುವುದರಿಂದ ರಾತ್ರಿ ವೇಳೆ ಕತ್ತಲು ನಿಂದ ಕೂಡಿರುತ್ತದೆ ಈ ಬಗ್ಗೆ ಸಾಷಕ್ಟು ಬಾರಿ ಅಧಿಕಾರಿ, ಸದಸ್ಯರಿಗೆ ಗಮನ ಸೆಳೆದರೂ ಯಾವುದೇ ಪ್ರಯೋನವಾಗಿಲ್ಲ ಗ್ರಾಮದಲ್ಲಿ ಸ್ವಚ್ಚತೆ ಹಾಗೂ ಅಭಿವೃದ್ಧಿ ಕುಂಠಿತವಾಗಿದ್ದು. ಗ್ರಾಪಂನ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ.
ಈ ಬಗ್ಗೆ ದೂರು ನೀಡಿದರೂ ದುರಸ್ತಿ ಮಾಡದೆ ನಿರ್ಲಕ್ಷ್ಯಿಸಿದ್ದಾರೆ. ಗ್ರಾಪಂ ಅಧಿಕಾರಿಗಳ ಹಾಗೂ ಸದಸ್ಯರ ವಿರುದ್ದ ಗ್ರಾಮದಸ್ಥರು ಹಿಡಿ ಶಾಪ ಹಾಕುತ್ತಿದ್ದಾರೆ.
ಕೂಡಲೆ ಜಿಪಂ , ತಾಪಂ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಜರುಗಿಸುವರೇ ಕಾದು ನೋಡಬೇಕಿದೆ.
0 Comments