ಹಿರಿಯೂರು
ಇತ್ತೀಚೆಗೆ ಕುಂಚಿಟಿಗ ಸಮಾಜದಲ್ಲಿ ಬಹಳ ಚರ್ಚೆಗೆ ಗ್ರಾಸವಾಗಿರುವ ಸುದ್ದಿ ಏನೆಂದರೆ ಅದು ಕುಂಚಿಟಿಗರಿಗೆ ಕೇಂದ್ರ ಸರ್ಕಾರದ OBC ಮೀಸಲಾತಿ.
ಅದೂ ಕೂಡ ಹಲವು ರೀತಿಯ ಹೋರಾಟಗಳ ನಂತರ ಕುಂಚಿಟಿಗ ಕುಲಶಾಸ್ತ್ರ ಅಧ್ಯಯನ ವರದಿಯಲ್ಲಿ ಇಲ್ಲದಿರುವ ಶಬ್ದ ಸೇರಿಸಿ ಗ್ರಾಮೀಣ ಕುಂಚಿಟಿಗರಿಗೆ ಮಾತ್ರ ಕೇಂದ್ರ OBC ಮೀಸಲಾತಿ ಎಂದು ಕೇಂದ್ರಕ್ಕೆ ಶಿಫಾರಸು ಮಾಡಿ,ನಗರ ಮತ್ತು ಗ್ರಾಮೀಣ ಕುಂಚಿಟಿಗ ಎಂದು ತಾರತಮ್ಯ ಮಾಡಲಾಗಿದೆ.
ಸದ್ಯ ಕುಂಚಿಟಿಗರು ಕೇಂದ್ರದ EWS ಪ್ರವರ್ಗದಡಿ ಬರುತ್ತಾರೆ. EWS ಅಂದ್ರೆ (Economically Weaker Section.) ಆರ್ಥಿಕವಾಗಿ ಹಿಂದುಳಿದ ವರ್ಗಗಳ ಜನರು.
ಕುಂಚಿಟಿಗರಿಗೆ ಸದ್ಯ ಇರುವ EWS ಪ್ರವರ್ಗ ಸಾಕೇ ಅಥವಾ OBC ಪ್ರವರ್ಗ ಖಂಡಿತಾ ಬೇಕೆ ಎಂದು ನೋಡುವುದಾದರೆ,
ನಮ್ಮ ದೇಶದಲ್ಲಿ ಸದ್ಯ ಲಭ್ಯವಿರುವ ಮಾಹಿತಿಯಂತೆ OBC ಗಳ ಜನಸಂಖ್ಯೆ 41% ರಿಂದ 44% ಇದೆ ಅಂತ ಹೇಳಲಾಗುತ್ತಿದೆ. ನಿಖರವಾದ ಅಂಕಿ ಅಂಶಗಳು ಲಭ್ಯವಿಲ್ಲದಿದ್ದರೂ ಇತ್ತೀಚೆಗೆ ನಡೆದ ಸಮೀಕ್ಷೆಗಳನ್ನು ಆಧಾರವಾಗಿಟ್ಟುಕೊಂಡು ಹೇಳಲಾಗಿದೆ. 1980 ರ ಮಂಡಲ್ ಆಯೋಗದ ವರದಿಯಲ್ಲಿ 52% ಇದ್ದಾರೆಂದು ಹೇಳಲಾಗಿತ್ತು. ಆದ್ರೆ ನಂತರ ಕೆಲ ಸಮುದಾಯಗಳನ್ನು ಪ ಜಾ / ಪ ಪಂ,ಗಳಿಗೆ ಸೇರ್ಪಡೆ ಮಾಡಿರುವುದರಿಂದ ಅವರ ಜನಸಂಖ್ಯೆ ಕಡಿಮೆ ಕೂಡಾ ಆಗಿರಬಹುದು. ಒಟ್ಟಾರೆ OBC ಗೆ 27% ಮೀಸಲಾತಿ ಇದೆ.
ಕೇಂದ್ರ ಸರ್ಕಾರದ ಯಾವುದೇ ಮೀಸಲಾತಿ ಪಡೆಯದ ಆರ್ಥಿಕವಾಗಿ ಹಿಂದುಳಿದವರಿಗೆ EWS ಮೀಸಲಾತಿ ಅಡಿ ಬರುವ ಒಟ್ಟು ಸಮುದಾಯಗಳ ಜನಸಂಖ್ಯೆ ಶೇ.12 ರಷ್ಟು ಮಾತ್ರ ಇದೆ.ಒಟ್ಟಾರೆ EWS ಗೆ 10% ಮೀಸಲಾತಿ ಇದೆ.
ಈ ರೀತಿ ಒಟ್ಟಾರೆ ಜನಸಂಖ್ಯೆಗೆ ಅನುಗುಣವಾಗಿ OBC ಉತ್ತಮವೇ ಅಥವಾ EWS ಉತ್ತಮವೇ ಎಂದು ನೋಡುವುದಾದರೆ-
41% ಜನಸಂಖ್ಯೆ ಇರುವ OBC ಗಳಿಗೆ 27% ಮೀಸಲಾತಿ ಇದೆ. ಅಂದ್ರೆ ಯಾವುದಾದರೂ ಉದ್ಯೋಗಕ್ಕೆ ಅರ್ಜಿ ಹಾಕಿದ 41 ಜನರಲ್ಲಿ 27 ಜನರಿಗೆ ಮಾತ್ರ ಉದ್ಯೋಗ ಸಿಗುವ ಸಾಧ್ಯತೆ ಇದೆ.
ಅದೇ 12% ಜನಸಂಖ್ಯೆ ಇರುವ EWS ವರ್ಗಕ್ಕೆ 10% ಮೀಸಲಾತಿ ಇದೆ. ಅಂದ್ರೆ ಯಾವುದಾದರೂ ಉದ್ಯೋಗಕ್ಕೆ ಅರ್ಜಿ ಹಾಕಿದ 12 ಜನರಲ್ಲಿ 10 ಜನರಿಗೆ ಉದ್ಯೋಗ ಸಿಗುವ ಸಾಧ್ಯತೆ ಇದೆ. ಈ ರೀತಿ ನೋಡಿದರೆ ಕುಂಚಿಟಿಗರು ಹಾಲಿ ಇರುವ EWS ಪ್ರವರ್ಗ ದಲ್ಲಿ ಮುಂದುವರಿಯುವುದು ಉತ್ತಮ ಎಂದು ಕುಂಚಿಟಿಗ ಕುಲಶಾಸ್ತ್ರ ಅಧ್ಯಯನಕಾರ ಎಸ್ ವಿ ರಂಗನಾಥ್ ತಿಳಿಸಿದ್ದಾರೆ.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments