![](https://janadhwani.in/wp-content/uploads/2023/12/Screenshot_20231221_215922.png)
ಚಳ್ಳಕೆರೆ ಡಿ. 21 ಈಗಾಗಲೆ ರೈತರು ಅತಿ ವೃಷ್ಠಿ ಅನಾವೃಷ್ಠಿಗೆ ಸಿಲುಕಿ ಬಿತ್ತನೆ ಮಾಡಿದ ಶೇಂಗಾ ಬೆಳೆ ನಷ್ಟವಾಗಿ ಹಾಕಿದ ಬಂಡವಾಳ ಕೈ ಸೇರದೆ ಸಾಲದ ಸುಳಿಗೆ ಸಿಲುಕಿದ ಬೆನ್ನಲ್ಲೇ ಇಲ್ಲೊಬ್ಬ ರೈತ ಕರ್ಬೂಜ ಹಾಕಿ ಕೈತುಂಬ ಹಣ ಸಿಗುವ ಕನಸು ಕಂಡ ರೈತ ಕೀಟ ಬಾದೆಗೆ ಸಿಲುಕಿ ಬೆಳೆ ನಷ್ಟವಾಗಿ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ. ಹೌದು ಇದು ಚಳ್ಳಕೆರೆ ತಾಲೂಕಿನ ಸಾಣೀಕೆರೆ ಗ್ರಾಪಂ ವ್ಯಾಪ್ತಿಯ ಕಮ್ಮತ್ ಮರಿಕುಂಟೆ ಗ್ರಾಮದ ರೈತ ಕಿರಣ್ ಗೌಡ ಕರ್ಬೂಜ ನಾಟಿ ಮಾಡಿ ಉತ್ತಮ ಇಳುವರಿ ಬಂದಿತ್ತು ಇನ್ನೇನು ಕಟಾವ್ ಮಾಡಬೇಂಬಷ್ಟರಲ್ಲಿ ಕೀಟ ಬಾದೆಗೆ ಸಿಲುಕಿ ಬಳ್ಳಿಯಲ್ಲೇ ಹಣ್ಣು ಬಿರುಕು ಬಿಟ್ಟು ಬಳ್ಳಿ ಒಗಲು ಪ್ರಾರಂಬಿಸಿರುವುದು ಉತ್ತಮ ಫಸಲು ಪಡೆಯುವ ಆಸೆಯಲ್ಲಿದ್ದ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ
ರೈತನದ ಕಿರಣ್ ಗೌಡ ತನ್ನ ಮೂರು ಎಕರೆ ಜಮೀನಿನಲ್ಲಿ ಕರ್ಬೂಜ ಹಣ್ಣನ್ನು ಬೆಳೆಯಲು, ಅನಂತಪುರದ ಶ್ರಾವಣಿ ಅಂಗಡಿಯಲ್ಲಿ, ಪಟಜಮ್ ತಳಿಯ ನಿರ್ಮಲಾ 24-24 ಒಂದು ಕೆ.ಜಿ.ಬೀಜ 20 ರೂ ನಂತೆ ಎರಡು ಕೆ.ಜಿ 40 ಸಾವಿರೂ ಗಳಿಗೆ ಖರೀದಿ ಮಾಡಿಕೊಂಡು ಬಂದ ಕರ್ಬೂಜ ಬೀಜವನ್ನು ಬಿತ್ತನೆ ಮಾಡಿ ಕೋಳಿ ಗೊಬ್ಬರ ಹಾಕಿ ಬೀಜ ಗೊಬ್ಬರ ಸೇರಿ ಸುಮಾರು 2 ಲಕ್ಷ ರೂ ಅಧಿಕ ಖರ್ಚು ಮಾಡಿದ್ದಾನೆ ಬೆಳೆಯು ಸಹ ಉತ್ತಮ ಇಳಿವರಿ ಬಂದಿದೆ ಇನ್ನೇನು ಮೊದಲ ಬೆಳೆ ಕರ್ಬೂಜ ಹಣ್ಣು ಕಟಾವ್ ಮಾಡ ಬೇಕು ರೋಗ ಬಾದೆಗೆ ಸಿಲುಕಿ ಕಣ್ಮುಂದೆಯೇ ಕೀಟ ಬಾದೆಗೆ ತುತ್ತಾಗಿ ಹಣ್ಣು ಬಿರುಕು ಬಿಟ್ಟು ಬೆಳೆ ನಷ್ಟವಾಗಿದೆ. ರೀತಿಯಲ್ಲಿ ಬಂದಿದ್ದು, ಫಸಲಿಗೆ ಬಂದಂತಹ ಸಮಯದಲ್ಲಿ ಹಣ್ಣುಗಳು ಸಂಪೂರ್ಣವಾಗಿ ಹೊಸ ರೀತಿಯ ರೋಗಕ್ಕೆ ತುತ್ತಾಗುತ್ತಿದ್ದು. ಇದರಿಂದ ರೈತನ ಕೈ ಸೇರಬೇಕಿದ್ದ 25 ರಿಂದ 30 ಟನ್ ಹಣ್ಣು ರೈತನಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ರೈತ ಕಿರಣ್ ಗೌಡ ಜನಧ್ವನಿ ಡಿಜಿಟಲ್ ಮೀಡಿಯಾದೊಂದಿಗೆ ಮಾತನಾಡಿ ಕರ್ಬೂಜ 60 ದಿನಗಳ ಬೆಳೆ ಈಗಾಲೆ 68 ದಿನಗಳು ಕಳೆದಿದ್ದು ಉತ್ತಮ ಇಳುವರಿ ಬಂದಿತ್ತು ಈಗ ಮಾರುಟ್ಟೆಯ ಧರ ಕೆ.ಜಿ.50ರೂ ಇದೆ ಕಟಾವು ಮಾಡಿ ತರುವುದಾಗಿ ಮಾತನಾಡಿದ್ದೆ ಏಕಾ ಏಕಿ ಕೀಟ ಬಾದೆಯಿಂದ ಒಂದೇ ದಿನದಲ್ಲಿ ಬೆಳೆ ನಷ್ಟವಾಗಿದೆ ಕೋಳಿ ಗೊಬ್ಬರ.ಬೀಜ ಕೀಟನಾಷಕ ಸೇರಿದಂತೆ ಇತರೆ ಖರ್ಚು ಒಟ್ಟ2.5 ಲಕ್ಷ ರೂ ಖರ್ಚು ಮಾಡಲಾಗಿತ್ತು 25 ರಿಂದ 30 ಟನ್ ನೀರಿಕ್ಷೆ ಈಗಿನ ಮಾರುಕಟ್ಟೆ ಬೆಲೆ ಗೆ ಸುಮಾರು 10 ಲಕ್ಷ ರೂ ಆದಾಯವನ್ನು ನಿರೀಕ್ಷೆ ಇಟ್ಟು ಕೊಳ್ಳಲಾಗಿತ್ತು
ಬರಗಾಲದಲ್ಲಿ ಎರಡು ಲಕ್ಷಕ್ಕೂ ಅಧಿಕ ಸಾಲವನ್ನು ಮಾಡಿ ಕರ್ಬೂಜ ಹಣ್ಣನ್ನು ಬೆಳೆಯಲು ಮುಂದಾಗಿದ್ದೇನೆ. ಆದರೆ ಫಸಲಿಗೆ ಬಂದ ಹಣ್ಣುಗಳು ಸಂಪೂರ್ಣವಾಗಿ ರೋಗಕ್ಕೆ ತುತ್ತಾಗಿರುವುದರಿಂದ ಹಾಕಿದ ಬಂಡವಾಳವೂ ಸಿಗದೆ ಶ್ರಮಕ್ಕೂ ಫಲ ಸಿಗದೆ ಸಾಲದ ಸುಳಿಗೆ ಸಿಲುಕುವಂತೆ ಮಾಡಿದೆ.
![](https://janadhwani.in/wp-content/uploads/2023/12/Screenshot_20231221_215952.png)
ಕೂಡಲೆ ಸಂಬಂಧ ಪಟ್ಟ ಅಧಿಕಾರಿಗಳು ರೈತನ ಜಮೀನಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಬೆಳೆ ನಷ್ಟ ಪರಿಹಾರ ಕೊಡಿಸುವರೇ ಕಾದು ನೋಡ ಬೇಕಿದೆ.
0 Comments