ಚಳ್ಳಕೆರೆ ಆ.18.ಕಾಲೇಜು ಆವರಣದಲ್ಲಿ ಯಾವುದೇ ಕಾರ್ಯಕ್ರಮ ಆಯೋಜನೆ ಮಾಡಿದಾಗ, ಜವಬ್ದಾರಿಯನ್ನು ವಹಿಸಿಕೊಳ್ಳಬೇಕು, ಮೂರು ಸಾವಿರ ವಿದ್ಯಾರ್ಥಿಗಳು ಇರುವ ಕಾಲೇಜಿನಲ್ಲಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವಾಗ ವ್ಯವಸ್ಥಿತವಾಗಿರಬೇಕು ಎಂದು ಪ್ರಾಂಶುಪಾಲರ ವಿರುದ್ದ ಶಾಸಕ ಟಿ.ರಘುಮೂರ್ತಿ ಹಾರಿಹಾಯ್ದರು.
![](https://janadhwani.in/wp-content/uploads/2023/08/IMG-20230818-WA0172.jpg)
![](https://janadhwani.in/wp-content/uploads/2023/08/IMG-20230818-WA0175.jpg)
ಇದು ಸರಕಾರಿ ಕಾರ್ಯಕ್ರಮ ಅದರಲ್ಲೂ
ದೇಶದ ರಕ್ಷಣೆಗೆ ಜೀವನವನ್ನು ಮುಡುಪಾಗಿ ಇಟ್ಟಿರುವಂತಹ ಯೋಧರನ್ನು ಸ್ಮರಿಸುವಂತಹ ಕಾರ್ಯಕ್ರಮವಾಗಿದ್ದು
ಪ್ರತಿಯೊಬ್ಬ ಮನುಷ್ಯನು ದೇಶ ಅಭಿಮಾನವನ್ನು ಮೈಗೂಡಿಸಿಗೊಳ್ಳಬೇಕಾದ ಕಾರ್ಯಕ್ರಮವನ್ನು ಕಾಟಾಚಾರಕ್ಕೆ ಮಾಡುವುದು ಎಷ್ಟು ಸರಿ, ಕಾರ್ಯಕ್ರಮಕ್ಕೆ ಹಲವು ಜನಪ್ರತಿನಿಧಿ. ಗಣ್ಯರಿಗೆ ಮಾಹಿತಿ ನೀಡದೆ ತರಾತುರಿಯಲ್ಲಿ ಮಾಡುವ ಸವಶ್ಯಕತೆಯಾದರೂ ಏನಿತ್ತು. ಕಾಲೇಜಿನ ಪ್ರಾಚಾರ್ಯರು ನಗರಸಭೆ ಪೌರಾಯುಕ್ತರ ಮೇಲೆ ಪೌರಾಯುಕ್ತರು ಕಾಲೇಜಿನವರ ಮೇಲೆ ಹೇಳುವುದನ್ನು ಬಿಟ್ಟು ತಾವುದೇ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವಾಗ ಜವಾಬ್ದಾರಿಯಿಂದ ಮಾಡಬೇಕು ಎಂದು ಅಧಿಕಾರಿಗಳಿಗೆ ಬೆವರಿಳಿಸಿದರು. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಲು ಪ್ರತಿಯೊಬ್ಬರು ದೇಶಕ್ಕಾಗಿ ನನ್ನ ಕೊಡುಗೆ ಏನು ಎಂಬುದನ್ನು ಪ್ರಶ್ನೆ ಮಾಡಿಕೊಳ್ಳಬೇಕು. ದೇಶದಲ್ಲಿ ನಾವು ಸುರಕ್ಷತೆಯಿಂದ ವಾಸಿಸುತ್ತೇವೆ ಎಂದರೆ ಅದು ಯೋಧರ ಕೊಡುಗೆ ಎಂದು ತಿಳಿಸಿದರು.
![](https://janadhwani.in/wp-content/uploads/2023/08/IMG-20230818-WA0226.jpg)
![](https://janadhwani.in/wp-content/uploads/2023/08/IMG-20230818-WA0220.jpg)
ಇದೇ ಸಂದರ್ಭದಲ್ಲಿ ನಿವೃತ್ತ ಯೋದರಿಗೆ ಸನ್ಮಾನಿಸಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಜೆ.ರಾಘವೇಂದ್ರ. ಸದಸ್ಯರಾದ ಸುಮಕ್ಕ, ಸುಮ, ಸಾವಿತ್ರ, ಕವಿತಾ, ವಿರೂಪಾಕ್ಷಪ್ಪ, ನಿವೃತ್ತ ಯೋಧರಾದ ಗೋವಿಂದರೆಡ್ಡಿ, ತಿಮ್ಮಣ್ಣ, ಕರಿಯಣ್ಣ, ಮಧುಸೂಧನ್, ಮಧು ಬಾಲೇನಹಳ್ಳಿ, ಮಂಜುನಾಥರೆಡ್ಡಿ, ಮಹಮ್ಮದ್, ತಿರುಮಲೇಶ್, ಬೋಜರಾಜ್, ವಿಶ್ವನಾಥ ಇತರರಿದ್ದರು.
![](https://janadhwani.in/wp-content/uploads/2023/08/IMG-20230818-WA0171.jpg)
![](https://janadhwani.in/wp-content/uploads/2023/08/Screenshot_20230818_155108.png)
0 Comments