ಚಳ್ಳಕೆರೆ ಡಿ.7. ಕಾಲೇಜಿಗೆ ಚಕ್ಕರ್ ಹಾಕಿ ನಗರದ ಕೆಲ ವಿದ್ಯಾರ್ಥಿಗಳು ಪಾರ್ಕಿನಲ್ಲಿ ಕುಳಿತು ಹರಟೆ ಹಾಗೂಅಸಭ್ಯವಾಗಿ ವರ್ತಿಸುತ್ತಿದ್ದ ವಿದ್ಯಾರ್ಥಿಗಳಿಗೆ ಬುದ್ದಿವಾದ ಹೇಳಿದ್ದಾರೆ. ಹೌದು ಇದು ಚಳ್ಳಕೆರೆ ನಗರದ ಚಿತ್ರದುರ್ಗ ರಸ್ತೆಯಲ್ಲಿ ಡಿವೈಎಸ್ಪಿ ಕಚೇರಿ ಸಮೀಪವೇ ವಿಸ್ಮಯ ಪಾರ್ಕ್ ಇದ್ದು ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರು ಹುಟ್ಟು ಹಬ್ಬು ಆಚರಣೆ . ಪ್ರೀತಿ.ಪ್ರೇಮದ ಗುಂಗಿನಲ್ಲಿ ಅಸಭ್ಯವಾಗಿ ಲಿಫ್ ಲಾಕ್ ಇಂತಹ ಅಸಭ್ಯ ವರ್ತನೆಯ ಘಟನೆಗಳನ್ನು ವಿಸ್ಮಯ ಪಾರ್ಕ್ ಹೊಂದಿಕೊಂಡು ಸಂಸಾರಿಕ ಕುಟುಂಬಸ್ಥರು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿ ಸಾರ್ವಜನಿಕರೇ ಪಾರ್ಕ್ ಬೀಗ ಜಡಿದ ಪ್ರಸಂಗಗಳು ನಡೆದಿವೆ. ಪೋಷಕರು ಕೂಲಿ ನಾಲಿ.ಸಾಲ ಸೂಲ ಮಾಡಿ ನಮ್ಮ ಮಕ್ಕಳು ಓದಿ ವಿದ್ಯೆ ಕಲಿತು ಬುದ್ದಿವಂತರಾಗಲಿ ಎಂದು ಶಾಲಾ ಕಾಲೇಜಿಗೆ ಕಳಿಸುತ್ತಾರೆ ಆದರೆ ವಿದ್ಯಾರ್ಥಿಗಳು ಶಾಲಾ ಕಾಲೇಜಿಗೆ ಚಕ್ಕರ್ ಹೊಡೆದು ಪಾರ್ಕ್ ನಲ್ಲಿ ಹರಟೆ ಹೊಡೆಯುವುದನ್ನು ಡಿವೈಎಸ್ಪಿ ರಾಜಣ್ಣಗೆ ಸುದ್ದಿ ಮುಟ್ಟಿಸಿದ್ದಾರೆ. ತಕ್ಷಣ ಪಾರ್ಕಿಗೆ ಬಂದು ಹರಟೆ ಹೊಡೆಯುತ್ತಿದ್ದ ವಿದ್ದಾರ್ಥಿಗಳಿಗೆ ಬುದ್ದಿ ಹೇಳಿ ಕಾಲೇಜಿಗೆ ಹೋಗುವಂತೆ ಕಿವಿಮಾತು ಹೇಳಿ ಕಳಿಸಿದ್ದಾರೆ. ಕಾಲೇಜು ಯುವಕ- ಯುವತಿಯರು ಪಾರ್ಕಿನ ಒಳಗೆ ಕೂತು ಪ್ರಪಂಚವನ್ನೇ ಮರೆತಿರುತ್ತಾರೆ. ಪಾರ್ಕಿನಲ್ಲಿ ಬಹುತೇಕ ಪಿಯುಸಿ ಹಾಗೂ ಡಿಗ್ರಿ ಕಾಲೇಜು ವಿದ್ಯಾರ್ಥಿಗಳೇ ಹೆಚ್ಚಿದ್ದು, ಕ್ಲಾಸಿಗೆ ಚಕ್ಕರ್ ಹಾಕಿ ಪಾರ್ಕ್ ಪೊದೆಗಳಲ್ಲಿ ಕೂತಿರುತ್ತಾರೆ. ಎಂಬ ದೂರುಗಳು ಕಾಲೇಜ್ ಉಪನ್ಯಾಸಕರಿಂದಲೂ ಆರೋಪಗಳು ಕೇಳಿ ಬಂದಿವೆ. ಶಾಲಾ ಕಾಲೇಜು ಪ್ರಾರಂಭ ಹಾಗೂ ಬಿಡುವಾಗ ಪೋಲಿಸ್ ಗಸ್ತು ಹಾಕುವಂತೆ ಸಾರ್ವ ಜನಿಕರು ಆಗ್ರಹಿಸಿದ್ದಾರೆ.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments