ಚಳ್ಳಕೆರೆ, ನವೆಂಬರ್ 29 : ಹೈದರಬಾದ್ ನಗರದ ಫ್ಲಾಟ್ ನಂ: 504, 5ನೇ ಮಹಡಿ, ಶ್ರೀ ಮೋಹಿನಿ
ಟವರ್, ಪಟ್ಟಾರಿ ಎನ್ವ್, ಐ.ಡಿ.ಪಿ.ಎಲ್ ಕ್ರಾಸ್ ರೋಡ್ ನ ನಿವಾಸಿಯಾದ ರವಿಕುಮಾರ್ ದೋ೦ತಿಯ
(36) ತಂದೆ ಪ್ರಸಾದ್ ರೆಡ್ಡಿ ದೋಂತಿಯಾ ರವರು ತಮ್ಮ ತಂದೆ ಹಾಗೂ ತನ್ನ ಹೆಂಡತಿಯ ತಮ್ಮನಾದ
ಆಂಧ್ರಪ್ರದೇಶ ರಾಜ್ಯದ ಮಂದ ಗೋದಾವರಿ ಈಸ್ಟ್ ಕಾಕಿನಾಡ ದ, ಕಾಕಿನಾಡ ಗ್ರಾಮಾಂತರ ದ ಗಂಗನಾಪಲ್ಲಿ
ಹಳ್ಳಿಯ ಮಾರುತಿನಗರದ ವಾಸಿ ಬಾಲಸಾಡಿ ಸಾಯಿ ಸರೋಜ್ ವರ್ಮ (30) ಮತ್ತು ಅವರ ಹೆಂಡತಿಯಾದ
ಲಾವಣ್ಯ ಇವರೊಂದಿಗೆ ಕರ್ನಾಟಕದ ಉಡುಪಿ, ಗೋಕರ್ಣ ನೋಡಿಕೊಂಡು ಬರಲು ನಂ:ಟಿ.ಎಸ್-07/ಜಿ.ಎಸ್-
8046 ಕಾರಿನಲ್ಲಿ ಹೈದರಬಾದ್ ನಿಂದ ಹೊರಟು ಉಡುಪಿ, ಗೋಕರ್ಣ ನೋಡಿಕೊ೦ಡು ವಾಪಸ್ಸು
ಹೈದರಬಾದ್ ಗೆ ಹೋಗಲು ಚಳ್ಳಕೆರೆ ತಾಲ್ಲೂಕು ಹೀರೆಹಳ್ಳಿ ಗ್ರಾಮದ ಸಮೀಪದ ಎನ್.ಹೆಚ್-150(ಎ)
ರಸ್ತೆಯ ಟೋಲ್ ಫ್ಲಾಜಾ ಹತ್ತಿರ ಹೋಗುತ್ತಿರುವಾಗ ದಿನಾಂಕ.29.11.2023 ರಂದು ಬೆಳಗಿನ ಜಾವ ಸುಮಾರು
03.50 ಗಂಟೆ ಸಮಯದಲ್ಲಿ ಕಾರು ಚಾಲನೆ ಮಾಡುತ್ತಿದ್ದ ಬಾಲಸಾಡಿ ಸಾಯಿ ಸರೋಜ್ ವರ್ಮ ಕಾರನ್ನು
ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಎನ್.ಹೆಚ್-150(ಎ) ರಸ್ತೆಯ
ಟೋಲ್ ಫ್ಲಾಜಾ ಡಿವೈಡರ್ ಗೆ ಡಿಕ್ಕಿ ಪಡಿಸಿ ಅಪಘಾತ ಪಡಿಸಿದ ಪರಿಣಾಮ ಕಾರು ಪಲ್ಟಿ ಆಗಿ
ಜಖಂಗೊಂಡಿದ್ದು ರವಿಕುಮಾರ್ ದೋ೦ತಿಯ ರವರಿಗೆ ಹುಬ್ಬಿಗೆ, ಬಲಮೊಣಕಾಲಿನ ಕೆಳಗೆ, ಬಾಯಿಗೆ
ಗಾಯಗಳಾಗಿದ್ದು, ಪ್ರಸಾದ್ ರೆಡ್ಡಿ ದೋಂತಿಯಾ ರವರಿಗೆ ಬಲಮೊಣಕಾಲಿನ ಕೆಳಗೆ, ಎಡಕಾಲಿಗೆ ಪೆಟ್ಟು ಬಿದ್ದು
ನೋವುಂಟಾಗಿರುತ್ತದೆ. ಚಿಕಿತ್ಸೆಗಾಗಿ ಗಾಯಾಳುಗಳನ್ನು ಹೈ-ವೇ ಆಂಬೂಲೇನ್ಸ್ ನಲ್ಲಿ ಚಳ್ಳಕೆರೆ ಸರ್ಕಾರಿ
ಆಸ್ಪತ್ರೆಗೆ ದಾಖಲಿಸಿರುತ್ತಾರೆ ಹಾಗೂ ಕಾರಿನಲ್ಲಿದ್ದ ಉಳಿದವರಿಗೆ ಯಾವುದೇ ಅಪಾಯವಾಗಿರುವುದಿಲ್ಲ, ಈ ಬಗ್ಗೆ
ತಳಕು ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿರುತ್ತದೆ.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments