ಚಳ್ಳಕೆರೆ ಏ.2 ಎಸ್ ಎಸ್ ಎಲ್ ಸಿ ಪರೀಕ್ಷಾ ಕೇಂದ್ರಗಳಲ್ಲಿ ನಕಲು ತಡೆಗೆ ಅಳವಡಿಸಿದ ಸಿಸಿ ಕ್ಯಾಮಾರಗಳನ್ನು ಒಡೆದು ಹಾಕಿದ ಪ್ರಕರಣ ಬೆಳೆಕಿಗೆ ಬಂದಿದೆ.
ಹೌದು ಇದು ಚಳ್ಳಕೆರೆ ತಾಲೂಕಿನ ಕಾಪರಹಳ್ಳಿ ಗ್ರಾಮದ ಸರಕಾರಿ ಪ್ರೌಢಶಾಲಾ ಪರೀಕ್ಷಾ ಕೇಂದ್ರದಲ್ಲಿನ 4900 ರೂ ಬೆಲೆ ಬಾಳುವ ಮೂರು ಸಿ.ಸಿ ಕ್ಯಾಮರಗಳನ್ನು ಯಾರೋ ದುಷ್ಕರ್ಮಿಗಳು ಒಡೆದು ಹಾಕಿದ್ದು ಏ 1 ಸೋಮವಾರ ಬೆಳಗ್ಗೆ 10 ಗಂಟೆ ಸುಮಾರಿನಲ್ಲಿ ಶಾಲೆಯ ಮುಖ್ಯ ಶಿಕ್ಷಕ ಮಂಜುನಾಥ್ ಶಾಲೆಗೆ ಭೇಟಿ ನೀಡಿದಾಗ ಬೆಳೆಕಿಗೆ ಬಂದಿದ್ದು ತಕ್ಷಣ ಶಿಕ್ಷಣ ಇಲಾಖೆ ಹಾಗೂ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದು ಸ್ಥಳಕ್ಕೆ ಪಿಎಸ್ ಐ ಶಿವರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿ ಚಳ್ಳಕೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಮಂಗಳವಾರ ಗಣಿತ ವಿಷಯತ ಪರೀಕ್ಷೆ ಇರುವುದರಿಂದ ತೊಂದರೆಯಾಗದಂತೆ ಬೆಳ್ಳಂ ಬೆಳಗ್ಗೆ ಸಿಸಿ ಕ್ಯಾಮಗಳನ್ನು ಅಳವಡಿಸಲಾಗಿದೆ.
ಕಳೆದ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶದಲ್ಲಿ ರಾಜ್ಯಕ್ಕೆ ತಾಲೂಕು ಮಟ್ಟದಲ್ಲಿ ಗುಡಿ ಬಂಡೆ ಮೊದಲನೇ ಸ್ಥಾನ ಪಡೆದರೆ ,ಚಳ್ಳಕೆರೆ ಎರಡನೇ ಸ್ಥಾನ ಪಡೆದರೆ ಚಿತ್ರದುರ್ಗ ಜಿಲ್ಲೆಗೆ ಶೇ 98.02 ಸ್ಥಾನ ಪಡೆದು ಚಳ್ಳಕೆರೆ ಮೊದಲನೇ ಸ್ಥಾನ ಪಡೆದಿದ್ದರಿಂದ ಈ ಬಾರಿ ಚಳ್ಳಕೆರೆ ಸೇರಿದಂತೆ ರಾಜ್ಯದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ನಕಲು ತಡೆಯಲು ಪರೀಕ್ಷಾ ಕೊಠಡಿಗಳಿಗೆ ಸಿಸಿ ಕ್ಯಾಮರ ಅಳವಡಿಸಲಾಗಿದೆ.
ಪರೀಕ್ಷಾ ಕೇಂದ್ರದಲ್ಲಿ ನಕಲು ಮಾಡಿದ ವಿದ್ಯಾರ್ಥಿಗಳನ್ನು ಡಿಬಾರ ಮಾಡುವ ಪದ್ದತಿ ಇತ್ತು ಈ ಬಾರಿ ನಕಲು ಸಹಕರಿಸಿದ ಕೊಠಡಿ ಮೇಲ್ವೀಚಾರನ್ನು ಅಮಾತು ಮಾಡಿದ ಪ್ರಕರಣಗಳು ನಡೆದಿವೆ,
ಚಳ್ಳಕೆರೆಯ ಆರು ಪರೀಕ್ಷಾ ಕೇಂದ್ರಗಳಿಗೆ ಸಿಟಿಂಗ್ ಸ್ವಾಡ್ ಅಧಿಕಾರಿಯನ್ನು ನೇಕ ಮಾಡಿದ್ದಾರೆ ಅದರಲ್ಲೂ ಇಂದು ಶಿಕ್ಷಣ ಇಲಾಖೆಯ ಆಯುಕ್ತರೇ ಚಳ್ಳಕೆರೆ ನಗರೆ ಬಿಸಿನೀರು ಮುದ್ದಪ್ಪ ಸರಕಾರಿ ಪ್ರೌಢಶಾಲೆ, ಹೆಗ್ಗೆ ತಾಯಮ್ಮ ಬಾಲಕಿಯ ಪ್ರೌಢಶಾಲೆ ಸೇರಿದಂತೆ ವಿವಿಧ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಸಂಚಲನ ಮೂಡಿಸಿರುವುದು ನಕಲು ಮಾಡಲು ಕಡಿವಾಣ ಬಿದ್ದಂತಾಗಿದೆ.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments