ಚಿತ್ರದುರ್ಗ.12 ನಾಪತ್ತೆಯಾಗಿದ್ದ ಗ್ರಾಮಲೆಕ್ಕಾಧಿಕಾರಿ ಶವವಾಗಿ ಪತ್ತೆ. ಚಳ್ಳಕೆರೆ ತಾಲೂಕಿನ ದುರ್ಗವಾರ ಗ್ರಾಮದ ಪಿರ್ಕ್ ಗ್ರಾಮಲೆಕ್ಕಾಧಿಕಾರಿ ನಾಗರಾಜ್(48) ಕಳೆದು ಸುಮಾರು ಒಂದುವಾರದಿಂದ ಮನೆಗೂ ಹಾಗೂ ಕಚೇರಿಗೂ ಬಾರದೆ ಇರುವುದರಿಂದ ಚಳ್ಳಕೆರೆ ಠಾಣೆಯಲ್ಲಿ ಕುಟುಬಂಸ್ಥರು ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಿಸಿದ್ದರು ಎನ್ನಲಾಗಿದೆ. ಚಿತ್ರದುರ್ಗದ ಗುಡ್ಡ ಪ್ರದೇಶದಲ್ಲಿ ಬಡವಾಣೆ ಠಾಣೆ ವ್ಯಾಪ್ತಿಯಲ್ಲಿ ನೇಣಿಗೆ ಶರಣಾಗಿದ್ದು ಕೊಳತ ಸ್ಥಿಯಲ್ಲಿ ಪತ್ತೆಯಾಗಿದ್ದು ಸ್ಥಳಕ್ಕೆ ಬಡಾವಣೆ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಲು ಮುಂದಾಗಿದ್ದಾರೆ. ಆತ್ಯಹತ್ಯೆಗೆ ನಿಖರ ಮಾಹಿತಿ ಪೋಲಿಸ್ ತನಿಖೆ ನಂತರ ಬಯಲಾಗಬೇಕಾಗಿದೆ. ಚಿತ್ರದುರ್ಗ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳೆದ ಡಿಸೆಂಬರ್17 ರಂದು ಚಳ್ಳಕೆರೆ ತಾಲೂಕು ಕಚೇರಿ ಪ್ರಥಮ ದರ್ಜೆ ಸಹಾಯಕ ಗುರುಲಿಂಗಪ್ಪ ನೇಣಿಗೆ ಶರಣಾಗಿ ಇನ್ನು ಒಂದು ತಿಂಗಳು ಕಳೆದಿಲ್ಲ ಮತ್ತೊಂಬ್ಬ ಗ್ರಾಮಲೆಕ್ಕಾಧಿಕಾರಿ ನಾಗರಾಜ್ ಸಹ ನೇಣಿಗೆ ಶರಣಾಗಿರುವುದು ಕಂದಾಯ ಇಲಾಖೆ ಸಿಬ್ಬಂದಿಗಳಲ್ಲಿ ಆತಂಕವನ್ನುಂಟು ಮಾಡುವಂತಿದೆ.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments