ಚಳ್ಳಕೆರೆ ಆ.27. ತಾಲೂಕಿನ ಎಲ್ಲಾ ಸಮುದಾಯದ ಜನರು ಜಾತಿ ಮತ ಭೇದವಿಲ್ಲದೆ ನನ್ನ ಜನಪರ ಕಾರ್ಯಗಳನ್ನು ಮೆಚ್ಚಿ ಮೂರನೇ ಬಾರಿ ಶಾಸಕನಾಗಲು ಮತ ನೀಡಿದ್ದಾರೆ ಕ್ಷೇತ್ರದ ಜನರ ಋಣವನ್ನು ತೀರಿಸಲು ಎಂದಿಗೂ ಸಾಧ್ಯವಿಲ್ಲ ನಾನು ಸಹ ಎಂದಿಗೂ ಜಾತಿ ಭೇದ ಮಾಡದೆ ಎಲ್ಲಾ ವರ್ಗದ ಜನರಿಗೆ ನ್ಯಾಯವನ್ನು ಒದಗಿಸುವ ಕೆಲಸವನ್ನು ಮಾಡುತ್ತಾ ಬಂದಿದ್ದೇನೆ ಹಾಗಾಗಿ ಸತತ ಮೂರನೇ ಬಾರಿಗೆ ಚುನಾವಣೆಯಲ್ಲಿ ಗೆಲುವು ಸಾಧಿಸಲು ಸಾಧ್ಯವಾಯಿತು ಎಂದು ಶಾಸಕ ಟಿ ರಘುಮೂರ್ತಿ ತಿಳಿಸಿದರು.
![](https://janadhwani.in/wp-content/uploads/2023/08/IMG-20230827-WA0116.jpg)
![](https://janadhwani.in/wp-content/uploads/2023/08/IMG-20230827-WA0150.jpg)
ನಗರದ ಕಾಡುಗೊಲ್ಲ ಸಮುದಾಯದ ಶ್ರೀ ಕೃಷ್ಣ ವಿದ್ಯಾರ್ಥಿ ನಿಲಯದಲ್ಲಿ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಕಾಡುಗೊಲ್ಲ ಸಮುದಾಯ ಮುಖಂಡರು ಶಾಸಕನಾಗಿ ಆಯ್ಕೆಯಾಗಲು ಚುನಾವಣೆಯಲ್ಲಿ ಅವಿರತ ಶ್ರಮವಹಿಸಿ ಕಾಂಗ್ರೆಸ್ ಪಕ್ಷದ ಪರ ಕೆಲಸ ಮಾಡಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕಾರಣ ಮಾಡಬೇಕಾದರೆ ಕೆಲವರ ವಿರೋಧ ಕಟ್ಟಿಕೊಳ್ಳುವುದು ರಾಜಕಾರಣಿಗಳಿಗೆ ಸಹಜವಾದದು ನಾನು ಶಾಸಕನಾದಾಗಿನಿಂದ ಮರಳುದಂದೆ, ಮಧ್ಯದ ಅಂಗಡಿಗಳ ಪರವಾನಗಿ ನವೀಕರಣ ಮತ್ತು ಹೊಸ ಪರವಾನಗಿ ನೀಡಿಲ್ಲ ಹಾಗಾಗಿ ನನ್ನ ದ್ವೇಷಿಸುವವರು ಇದ್ದಾರೆ ಕಳೆದ ಬಾರಿಯ ಚುನಾವಣೆಯಲ್ಲಿ ರಾಜಕೀಯದ ಉದ್ದೇಶದಿಂದ ಇಲ್ಲ ಸಲ್ಲದ ಆರೋಪಗಳನ್ನು ಮಾಡಿ ಕಾಡುಗೊಲ್ಲ ಸಮುದಾಯವನ್ನು ನನ್ನ ವಿರುದ್ಧ ಎತ್ತಿ ಕಟ್ಟಲು ನೋಡಿದ್ದರು ಆದರೆ ಸಮುದಾಯಕ್ಕೆ ನಾನು ಮನವರಿಕೆ ಮಾಡಿಕೊಟ್ಟಿದ್ದರಿಂದ ಇಂದು ಗೆಲುವು ಸಾಧಿಸಲು ಸಾಧ್ಯವಾಗಿದೆ ಈ ಸಮುದಾಯವು ಆರ್ಥಿಕವಾಗಿ ರಾಜಕೀಯವಾಗಿ ಶೈಕ್ಷಣಿಕವಾಗಿ ಮುಂದೆ ಬರಬೇಕಾದರೆ ಸಮುದಾಯದಲ್ಲಿನ ಬಾಲ್ಯ ವಿವಾಹದಂತಹ ಮೂಢನಂಬಿಕೆಗಳನ್ನು ಬದಿಗೊತ್ತಿ ಮಕ್ಕಳಿಗೆ ಶಿಕ್ಷಣ ಕೊಡಿಸುವ ಮೂಲಕ ಶಿಕ್ಷಣವಂತರನ್ನಾಗಿ ಮಾಡಿ ಸಮಾಜಕ್ಕೆ ಕೊಡುಗೆ ನೀಡುವಂತಾಗಬೇಕು ಹಾಗಾದರೆ ಮಾತ್ರ ಕಾಡುಗೊಲ್ಲ ಸಮುದಾಯ ಅಭಿವೃದ್ಧಿ ಸಾಧಿಸಲು ಸಾಧ್ಯವಾಗುತ್ತದೆ. ತಾಲೂಕಿನ ಕಾಡುಗೊಲ್ಲ ಸಮುದಾಯದ ಬೇಡಿಕೆಗಳನ್ನು ಸರ್ಕಾರದ ನಿಯಮಗಳ ಪ್ರಕಾರ ಮಂಜೂರು ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
![](https://janadhwani.in/wp-content/uploads/2023/08/IMG-20230827-WA0148.jpg)
![](https://janadhwani.in/wp-content/uploads/2023/08/IMG-20230827-WA0113.jpg)
![](https://janadhwani.in/wp-content/uploads/2023/08/IMG-20230827-WA0147.jpg)
![](https://janadhwani.in/wp-content/uploads/2023/08/IMG-20230827-WA0146.jpg)
ಕಾಡುಗೊಲ್ಲ ಸಮುದಾಯದ ತಾಲೂಕು ಅಧ್ಯಕ್ಷ ಎಸ್ ರವಿಕುಮಾರ್ ಮಾತನಾಡಿ ಶಾಸಕ ಟಿ ರಘುಮೂರ್ತಿ ತಾಲೂಕಿನಲ್ಲಿ ಎರಡು ಬಾರಿ ಶಾಸಕರಾಗಿ ಮಾಡಿರುವ ಅಭಿವೃದ್ಧಿ ಕಾರ್ಯಗಳ ಶ್ರೀ ರಕ್ಷೆಯಿಂದಲೇ ಮೂರನೇ ಬಾರಿಗೆ ಗೆಲುವು ಸಾಧಿಸಲು ಕಾರಣವಾಗಿದೆ ಶಾಸಕರು ಕುಟುಂಬ ರಾಜಕಾರಣ ಸ್ವಾರ್ಥ ರಾಜಕಾರಣ ಮಾಡಿಲ್ಲ ವೇದಾವತಿ ನದಿಗೆ ಬ್ಯಾರೇಜ್ ಗಳನ್ನು ನಿರ್ಮಿಸಿದ್ದರಿಂದ ರೈತರು ಇಂದು ಸಮೃದ್ಧಿಯ ಬೆಳೆ ಬೆಳೆದು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ ಇದರಿಂದಾಗಿ ಬರದ ನಾಡಿನ ಭಗೀರಥನೆಂಬ ಹೆಸರು ಗಳಿಸಲು ಸಾಧ್ಯವಾಗಿದೆ ಶಾಸಕರು ಮಾಡಿರುವ ಕಾರ್ಯಗಳು ತಾಲೂಕಿನಲ್ಲಿ ಅಜರಾಮರವಾಗಿ ಉಳಿಯುತ್ತವೆ ಎಂದರು.
![](https://janadhwani.in/wp-content/uploads/2023/08/IMG-20230827-WA0112.jpg)
ಪ್ರಾಸ್ತಾವಿಕವಾಗಿ ಮಾತನಾಡಿದ ನಿವೃತ್ತ ಶಿಕ್ಷಕ ಕರಿಯಪ್ಪ ಕಾಡುಗೊಲ್ಲ ಸಮುದಾಯವು ರಾಜ್ಯದಲ್ಲಿ ಅತ್ಯಂತ ದೊಡ್ಡ ಸಮುದಾಯ ವಾಗಿದ್ದರು ಎಲ್ಲಾ ಕ್ಷೇತ್ರಗಳಲ್ಲಿ ಹಿಂದುಳಿದಿದೆ ಇದಕ್ಕೆ ಕಾರಣ ಮೀಸಲಾತಿ ದೊರೆಯದಿರುವುದು ಕಾಡುಗೋಲ ಸಮುದಾಯವು ಎಸ್ಟಿ ಮೀಸಲಾತಿಗಾಗಿ ಹೋರಾಟ ನಡೆಸುತ್ತಾ ಬಂದಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆದಷ್ಟು ಬೇಗ ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕು ಮುಂಬರುವ ತಾಲೂಕು ಪಂಚಾಯಿತಿ ಜಿಲ್ಲಾ ಪಂಚಾಯಿತಿ ಹಾಗೂ ಲೋಕಸಭಾ ಚುನಾವಣೆಗಳಲ್ಲಿ ಕಾಡುಗೊಲ್ಲ ಸಮುದಾಯಕ್ಕೆ ಪ್ರಾತಿನಿದ್ಯ ನೀಡಬೇಕು ಹಾಗೂ ಸಮುದಾಯದ ತಾಲೂಕು ಅಧ್ಯಕ್ಷ ರವಿಕುಮಾರ್ ರವರನ್ನು ವಿಧಾನಪರಿಷತ್ತಿಗೆ ಆಯ್ಕೆ ಮಾಡಿ ಜನಾಂಗದ ಅಭಿವೃದ್ಧಿಗೆ ಸಹಕರಿಸಬೇಕು. ತಾಲೂಕಿನ ಉಪ್ಪಾರಟ್ಟಿ ಗ್ರಾಮದಲ್ಲಿ ಸಮುದಾಯಕ್ಕಾಗಿ 5 ಎಕರೆ ಜಮೀನು ಮಂಜೂರು ಮಾಡಬೇಕು ಕಾಡುಗೊಲ್ಲ ಸಮುದಾಯಕ್ಕೆ ಕಾಡುಗೊಲ್ಲ ಜಾತಿ ಪ್ರಮಾಣ ಪತ್ರವನ್ನು ನೀಡಲು ತಾಲೂಕು ಆಡಳಿತಕ್ಕೆ ಆದೇಶಿಸಬೇಕು ಕ್ಯಾತಪ್ಪನ ಜಾತ್ರೆಗೆ ಜಾಗ ಮೀಸಲಿರಿಸಬೇಕು ಎಂದು ಶಾಸಕರಲ್ಲಿ ಮನವಿ ಮಾಡಿದರು.
![](https://janadhwani.in/wp-content/uploads/2023/08/IMG-20230827-WA0149.jpg)
![](https://janadhwani.in/wp-content/uploads/2023/08/IMG-20230827-WA0129.jpg)
ಕಾರ್ಯಕ್ರಮಕ್ಕೆ ಮುನ್ನ ಶಾಸಕ ಟಿ ರಘುಮೂರ್ತಿಯವರನ್ನು ಮೆರವಣಿಗೆ ಮೂಲಕ ಕಾಡುಗೊಲ್ಲ ಸಮುದಾಯವು ವೇದಿಕೆಗೆ ಕರೆತಂದಿತು.
![](https://janadhwani.in/wp-content/uploads/2023/08/IMG-20230827-WA0115.jpg)
![](https://janadhwani.in/wp-content/uploads/2023/08/IMG-20230827-WA0110.jpg)
ಈ ಸಂದರ್ಭದಲ್ಲಿ ತಾಲೂಕು ಕಾಡುಗೊಲ್ಲರ ಸಮುದಾಯದ ಅಧ್ಯಕ್ಷ ಎಸ್ ರವಿಕುಮಾರ್ ಪರಶುರಾಂಪುರ ಹೋಬಳಿಯ ಕಾಂಗ್ರೆಸ್ ಅಧ್ಯಕ್ಷ ಟಿ ಶಶಿಧರ್ ಹಿರಿಯ ಮುಖಂಡರಾದ ಕರಿಯಪ್ಪ ಬಿವಿ ಸಿರಿಯಣ್ಣ ಸಿ ಮಲ್ಲಿಕಾರ್ಜುನ ಕೆ ಮೂರ್ತಪ್ಪ ಚಿತ್ರಾವತಿ ಶಾಂತಮ್ಮ ಬೂದಿಹಳ್ಳಿ ರಾಜಣ್ಣ ಕೆಂಜಡಿಯಪ್ಪ ಹನುಮಂತಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.
0 Comments