ಮಳವಳ್ಳಿ:
ಕಾಡಾನೆ ದಾಳಿಯಿಂದ ಕಟಾವು ಮಾಡಿದ್ದ ಭತ್ತ ನಾಶವಾಗಿರುವ ಘಟನೆ ಮಳವಳ್ಳಿ ತಾಲ್ಲೂಕಿನ ದಳವಾಯಿಕೋಡಿಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ರಮೇಶ ಹಾಗೂ ಮಹೇಶ ಎಂಬುವವರ ಭತ್ತವೇ ನಾಶವಾಗಿದ್ದು, ಒಂಟಿಸಲಗಯೊಂದು ಜಮೀನನಲ್ಲಿ ಕಟಾವು ಮಾಡಿ ಹಾಕಲಾಗಿದ್ದ ಸುಮಾರು 20 ರಿಂದ 25 ಸಾವಿರ ರೂ ಬೆಲೆಬಾಳುವ ಭತ್ತವನ್ನು ತುಳಿದು ನಾಶ ಮಾಡಿದೆ. ಅರಣ್ಯ ಇಲಾಖೆಯವರು ಪರಿಹಾರ ನೀಡುವಂತೆ ಮನವಿ ಮಾಡಿಕೊಂಡರು. ಈ ವೇಳೆ ರಮೇಶ, ಮಹೇಶ್ ,ಮಹದೇವಸ್ವಾಮಿ ಇದ್ದರು.
0 Comments