ಚಳ್ಳಕೆರೆ ಮಾ13
ಚಳ್ಳಕೆರೆ ಪೊಲೀಸರಿಂದ ಕಳ್ಳತನ ಮಾಡುತ್ತಿದ್ದ ಆರೋಪಿಯ ಬಂಧನ, ನಗದು ಮತ್ತು ಬೈಕ್ ವಶ
ಚಳ್ಳಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಿನಾಂಕ.೧೦.೦೩.೨೦೨೩ ರಂದು ಮನೆ ಮುಂದೆ
ನಿಲ್ಲಿಸಿದ್ದ ಬೈಕನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುವ ಬಗ್ಗೆ ಚಳ್ಳಕೆರೆ ಪೊಲೀಸ್
ಠಾಣೆ ಮೊ.ನಂ.೮೪/೨೦೨೩ ಕಲಂ.೩೭೯ ಐ.ಪಿ.ಸಿ. ಪ್ರಕರಣ ದಾಖಲಾಗಿರುತ್ತದೆ. ದಿನಾಂಕ.೧೧.೦೩.೨೦೨೩
ರಂದು ನಗರದ ಸಂಗೀತ ಮೊಬೈಲ್ ಶಾಪ್ನ ಬೀಗ ಮುರಿದು ಕಳ್ಳತನಕ್ಕೆ ಪ್ರಯತ್ನಪಟ್ಟಿರುವ ಬಗ್ಗೆ
ಮೊ.ನಂ.೮೬/೨೦೨೩ ಕಲಂ.೩೮೦,೫೧೧ ಐ.ಪಿ.ಸಿ. ಮತ್ತು ವಿನಾಯಕ ಕಾಂಡಿಮೆAಟ್ಸ್ ಅಂಗಡಿಯ ಬೀಗವನ್ನು
ಮುರಿದು ಅಂಗಡಿಯಲ್ಲಿ ಇಟ್ಟಿದ್ದ ೨೦ ಸಾವಿರ ಹಣವನ್ನು ಕಳ್ಳತನವಾಗಿರುವ ಬಗ್ಗೆ ಮೊ.ನಂ.೮೭/೨೦೨೩
ಕಲಂ.೪೫೭,೩೮೦ ಐ.ಪಿ.ಸಿ. ರೀತ್ಯ ಪ್ರಕರಣಗಳು ದಾಖಲಾಗಿರುತ್ತವೆ.
ಸದರಿ ಪ್ರಕರಣಗಳಲ್ಲಿ ಆರೋಪಿ ಮತ್ತು ಮಾಲನ್ನು ಪತ್ತೆ ಮಾಡಲು ಚಳ್ಳಕೆರೆ ಪೊಲೀಸ್
ಉಪಾಧೀಕ್ಷಕರಾದ ಶ್ರೀ ರಮೇಶ್ ಕುಮಾರ್ ರವರ ನಿರ್ದೇಶನದಲ್ಲಿ ಪೊಲೀಸ್ ನಿರೀಕ್ಷಕರಾದ
ಆರ್.ಎಫ್ ದೇಸಾಯಿ, ಪಿ.ಎಸ್.ಐ ಸತೀಶ್ ನಾಯ್ಕ ಹಾಗೂ ಸಿಬ್ಬಂದಿಗಳಾದ ಹಾಲೇಶ್, ಸತೀಶ್,
ಶ್ರೀಧರ್, ವಸಂತ್ ರವರನ್ನು ಒಳಗೊಂಡ ತಂಡವು ಮಾಹಿತಿಯನ್ನು ಸಂಗ್ರಹಿಸಿ ದಿನಾಂಕ:೧೨.೦೩.೨೦೨೩
ರಂದು ಎಂ.ಓ.ಬಿ ಆಸಾಮಿಯಾದ ನವೀನ ತಂದೆ ಲೇಟ್ ವಿಶ್ವನಾಥ, ಕೂಲಿ ಕೆಲಸ ಚಳ್ಳಕೆರೆ ಟೌನ್
ಈತನನ್ನು ಹಿಡಿದು ವಶಕ್ಕೆ ಪಡೆದುಕೊಂಡು ವಿಚಾರಣೆ ಮಾಡಲಾಗಿ ಸದರಿ ಆಸಾಮಿಯು
ದಿನಾಂಕ:೦೫.೦೩.೨೦೨೩ ರಂದು ರಾತ್ರಿ ಚಳ್ಳಕೆರೆ ನಗರದ ಪಾವಗಡ ರಸ್ತೆ, ೫ನೇ ಕ್ರಾಸ್, ಹಳೇ ಟೌನ್ ನ
ಒಂದು ಮನೆ ಮುಂಭಾಗದಲ್ಲಿ ನಿಲ್ಲಿಸಿದ್ದ ನಂ.ಕೆ.ಎ.೩೫-ವಿ-೭೦೨೩ ನೇ ಪ್ಯಾಷನ್ ಪ್ರೋ ಬೈಕನ್ನು,
ದಿನಾಂಕ:೦೭.೦೩.೨೦೨೩ ರಂದು ರಾತ್ರಿ ಚಳ್ಳಕೆರೆ ಟೌನ್ ಸಂಗೀತ ಮೊಬೈಲ್ ಶಾಪ್ ನಲ್ಲಿ ಕಳ್ಳತನಕ್ಕೆ
ಪ್ರಯತ್ನ ಹಾಗೂ ಚಳ್ಳಕೆರೆ ಟೌನ್ ಬಳ್ಳಾರಿ ರಸ್ತೆಯಲ್ಲಿ ವಿನಾಯಕ ಕಾಂಡಿಮೆAಟ್ಸ್ ಅಂಗಡಿಯ ಬಾಗಿಲು
ಮುರಿದು ಒಳಗೆ ಹೋಗಿ ಅಂಗಡಿ ಡ್ರಾನಲ್ಲಿ ಇದ್ದ ೨೦,೦೦೦/- ರೂ ನಗದು ಹಣವನ್ನು ಕಳ್ಳತನ
ಮಾಡಿರುತ್ತೇನೆ ಎಂದು ಒಪ್ಪಿಕೊಂಡಿದ್ದು, ಆರೋಪಿತನಿಂದ ಕಳ್ಳತನ ಮಾಡಿದ ನಂ.ಕೆ.ಎ.೩೫-ವಿ-೭೦೨೩
ನೇ ಪ್ಯಾಷನ್ ಪ್ರೋ ಬೈಕ್ ಹಾಗೂ ೨೦,೦೦೦/- ರೂ ನಗದು ಹಣವನ್ನು ವಶಕ್ಕೆ ಪಡೆದು
ಆರೋಪಿಯನ್ನು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕಾಗಿ ಒಪ್ಪಿಸಲಾಗಿರುತ್ತದೆ.
ಸದರಿ ಪತ್ತೆ ಕಾರ್ಯವನ್ನು ಮಾನ್ಯ ಪೊಲೀಸ್ ಅಧೀಕ್ಷಕರು, ಚಿತ್ರದುರ್ಗ ಜಿಲ್ಲೆ ರವರು
ಶ್ಲಾಘಿಸಿರುತ್ತಾರೆ.
0 Comments